ಆ್ಯಪ್ನಗರ

ವಾರಾಣಸಿ ಘಾಟ್‌ನಲ್ಲಿ ಶವಸಂಸ್ಕಾರಕ್ಕೆ ಆಧಾರ್ ಕಡ್ಡಾಯ

ಉತ್ತರ ಪ್ರದೇಶದ ವಾರಾಣಸಿಯ ಘಾಟ್‌ಗಳಲ್ಲಿ ಶವಸಂಸ್ಕಾರ ಮಾಡಬೇಕಾದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್‌ ನೀಡಬೇಕಾಗುತ್ತದೆ.

Navbharat Times 1 Jun 2018, 5:52 pm
ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಘಾಟ್‌ಗಳಲ್ಲಿ ಶವಸಂಸ್ಕಾರ ಮಾಡಬೇಕಾದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್‌ ನೀಡಬೇಕಾಗುತ್ತದೆ. ಮಣಿಕರ್ಣಿಕ ಮತ್ತು ರಾಜಾ ಹರಿಶ್ಚಂದ್ರ ಘಾಟ್‌ಗಳಲ್ಲಿ ಆಧಾರ್ ಕಾರ್ಡ್‌ ನಿಯಮ ಕಡ್ಡಾಯ ಮಾಡಿದ್ದು, ಆಧಾರ್ ಇಲ್ಲದಿದ್ದರೆ ಶವಸಂಸ್ಕಾರಕ್ಕೆ ಅನುಮತಿ ದೊರೆಯುವುದಿಲ್ಲ.
Vijaya Karnataka Web aadhaar


ಜತೆಗೆ ಶವಸಾಗಣೆಗೆ ಶವವಾಹಿನಿ ಮೋಟಾರ್ ಬೋಟ್‌ ಸೌಲಭ್ಯ ಪಡೆದುಕೊಳ್ಳಲು ಮೃತರ ಸಂಬಂಧಿಕರು ಗುರುತಿನ ಚೀಟಿ ತೋರಿಸುವುದು ಕೂಡ ಅವಶ್ಯವಾಗಿದೆ. ಆದರೆ ಮಹಾಸ್ಮಶಾನ್ ಘಾಟ್‌ನಲ್ಲಿ ಈ ನಿಯಮ ಜಾರಿಯಾಗಿಲ್ಲ.

ಎನ್‌ಡಿಆರ್‌ಆಫ್ ನೆರವಿನೊಂದಿಗೆ ಗುಜರಾತ್‌ನ ಸುಧಾಂಶು ಫೌಂಡೇಶನ್ ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ಕೊಲೆ, ವರದಕ್ಷಿಣೆ ಹತ್ಯೆಯಂತಹ ಸಾವಿನ ಪ್ರಕರಣಗಳ ಕುರಿತ ಮಾಹಿತಿ ಸಂಗ್ರಹಿಸಲು ಆಧಾರ್ ಮತ್ತು ಗುರುತು ಚೀಟಿ ಬಳಕೆ ನೆರವಾಗುತ್ತಿದೆ ಎಂದು ಫೌಂಡೇಶನ್ ಹೇಳಿದೆ.

ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ