ಆ್ಯಪ್ನಗರ

ಉಚಿತ ಬಸ್‌ ಸೇವೆ: ಆಧಾರ್‌ ಕಡ್ಡಾಯ

ಉತ್ತರ ಪ್ರದೇಶದಲ್ಲಿನ ಸರಕಾರಿ ಬಸ್‌ನಲ್ಲಿ ದಿವ್ಯಾಂಗರಿಗೆ ನೀಡುತ್ತಿದ್ದ ಉಚಿತ ಬಸ್‌ ಸೇವೆ ಪಡೆಯಲು ಇನ್ನುಮುಂದೆ ಆಧಾರ್‌ ಕಡ್ಡಾಯ ಮಾಡಲಾಗಿದೆ ಎಂದು ಸರಕಾರ ತೀರ್ಮಾನಿಸಿದೆ.

TNN 3 Dec 2017, 4:37 pm
ಬರೇಲಿ: ಉತ್ತರ ಪ್ರದೇಶದಲ್ಲಿನ ಸರಕಾರಿ ಬಸ್‌ನಲ್ಲಿ ದಿವ್ಯಾಂಗರಿಗೆ ನೀಡುತ್ತಿದ್ದ ಉಚಿತ ಬಸ್‌ ಸೇವೆ ಪಡೆಯಲು ಇನ್ನು ಮುಂದೆ ಆಧಾರ್‌ ಕಡ್ಡಾಯ ಎಂದು ಸರಕಾರ ಆದೇಶ ಹೊರಡಿಸಿದೆ.
Vijaya Karnataka Web aadhaar must for disabled to travel free in upsrtc buses
ಉಚಿತ ಬಸ್‌ ಸೇವೆ: ಆಧಾರ್‌ ಕಡ್ಡಾಯ


ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವಾರು ಮಂದಿ ಇಲ್ಲಿನ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮುಂದಾದ ಸರಕಾರ ಮುಂದಿನ ವರ್ಷದ ಆರಂಭದಿಂದಲೇ ದಿವ್ಯಾಂಗರು ತಮ್ಮ ಪ್ರಮಾಣ ಪತ್ರಕ್ಕೆ ಆಧಾರ್‌ ಲಿಂಕ್‌ ಮಾಡಬೇಕು ಎಂದು ಆದೇಶಿಸಿದೆ.

ಉಪಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ ಗುರುಪ್ರಸಾದ್‌ ಈ ನಿರ್ಧಾರವನ್ನು ಕೈಗೊಂಡಿದ್ದು, ದಿವ್ಯಾಂಗರು ಆಧಾರ್‌ ಕಾರ್ಡ್‌ನ ಪ್ರತಿಯನ್ನು ಹಿಡಿದು ಪ್ರಯಾಣ ಮಾಡಬೇಕು ಅಲ್ಲದೇ ನಿರ್ವಾಹಕ ಇದರ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ನಿರ್ದೇಶನ ಜಾರಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಉಪಿಎಸ್‌ಆರ್‌ಟಿಸಿ ಮುಖ್ಯ ಜನರಲ್ ಮ್ಯಾನೇಜರ್ ಎಚ್ಎಸ್ ಗಬಾ, ' ಉಚಿತ ಪ್ರಯಾಣದ ಸೌಲಭ್ಯ ಪಡೆಯಲು ಹೆಚ್ಚಿನ ಸಂದರ್ಭದಲ್ಲಿ ಜನರು ಒಂದೋ ನಕಲಿ ದಿವ್ಯಾಂಗ ಪ್ರಮಾಣ ಪತ್ರ ಸಿದ್ಧ ಪಡಿಸುತ್ತಾರೆ. ಇಲ್ಲವೇ ದಿವ್ಯಾಂಗರಿಂದ ಪತ್ರವನ್ನು ಪಡೆದು ಸೇವೆ ಪಡೆಯುತ್ತಾರೆ. ಕೆಲವು ವ್ಯಕ್ತಿಗಳು ಅಸಲಿ ಪತ್ರಕ್ಕೆ ತಮ್ಮ ಚಿತ್ರವನ್ನು ಅಂಟಿಸಿ ಅದರ ನಕಲು ಪತ್ರವನ್ನು ಸರಕಾರಕ್ಕೆ ಸಲ್ಲಿಸುತ್ತಾರೆ'.

ಹೀಗಾಗಿ ಇದನ್ನು ತಡೆಗಟ್ಟಲು ಸಿದ್ಧವಾಗಿರುವ ಸರಕಾರ ಆಧಾರ್‌ ಕಡ್ಡಾಯಗೊಳಿಸಿದೆ. ' ಆಧಾರ್‌ನಲ್ಲಿ ವ್ಯಕ್ತಿಯ ಸಂಪೂರ್ಣ ಮಾಹಿತಿ ದಾಖಲಾಗಿರುತ್ತದೆ. ಒಂದು ವೇಳೆ ಇದರಲ್ಲೂ ನಕಲು ಮಾಡಲು ಯತ್ನಿಸಿದರೂ ಆತ ಸಿಲುಕಿಕೊಳ್ಳುವುದು ಖಚಿತ' ಎಂದು ಗಾಬಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ