ಆ್ಯಪ್ನಗರ

ಆಧಾರ್‌ ಲಿಂಕ್‌: ಗಡುವು ವಿಸ್ತರಣೆ

ಸರಕಾರಿ ಯೋಜನೆಗಳ ಸಬ್ಸಿಡಿ ಸವಲತ್ತಿನ ಲಾಭ ಪಡೆಯಲು ಆಧಾರ್‌ ಕಾರ್ಡ್‌ ಲಿಂಕ್‌ ಕಡ್ಡಾಯಕ್ಕೆ ಇನ್ನೂ ಮೂರು ತಿಂಗಳ ವಿನಾಯತಿ ನೀಡಲಾಗಿದೆ...

Vijaya Karnataka 28 Sep 2017, 7:53 am

ಹೊಸದಿಲ್ಲಿ: ಸರಕಾರಿ ಯೋಜನೆಗಳ ಸಬ್ಸಿಡಿ ಸವಲತ್ತಿನ ಲಾಭ ಪಡೆಯಲು ಆಧಾರ್‌ ಕಾರ್ಡ್‌ ಲಿಂಕ್‌ ಕಡ್ಡಾಯಕ್ಕೆ ಇನ್ನೂ ಮೂರು ತಿಂಗಳ ವಿನಾಯತಿ ನೀಡಲಾಗಿದೆ. ಡಿಸೆಂಬರ್‌ 31ರೊಳಗೆ ಫಲಾನುಭವಿಗಳು ಆಧಾರ್‌ ಕಾರ್ಡ್‌ ಹೊಂದುವುದು ಕಡ್ಡಾಯ ಎಂದು ಸರಕಾರ ತಿಳಿಸಿದೆ.

Vijaya Karnataka Web aadhar link deadline extended
ಆಧಾರ್‌ ಲಿಂಕ್‌: ಗಡುವು ವಿಸ್ತರಣೆ


ಈವರೆಗೆ ಆಧಾರ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸದಿರುವವರಿಗೆ ಮಾತ್ರ ಸದ್ಯದ ವಿನಾಯಿತಿ ಅನ್ವಯವಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಅಡುಗೆ ಅನಿಲ, ಸೀಮೆ ಎಣ್ಣೆ , ಸಬ್ಸಿಡಿ ದರದ ರಸಗೊಬ್ಬರ, ಪಡಿತರ ವ್ಯವಸ್ಥೆ ಮತ್ತು ಎಂಜಿನರೇಗಾ ಸೇರಿದಂತೆ ಕೇಂದ್ರ ಸರಕಾರದ ಒಟ್ಟು 135 ಯೋಜನೆಗಳಿಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯಗೊಳಿಸಲಾಗುತ್ತಿದೆ.

ಈ ಹಿಂದೆ ಸಬ್ಸಿಡಿ ಸವಲತ್ತಿನ ಲಾಭ ಪಡೆಯಲು ಆಧಾರ್‌ ಲಿಂಕ್‌ಗೆ ಸೆಪ್ಟೆಂಬರ್‌ 30ರ ಗಡುವು ನಿಗದಿ ಪಡಿಸಲಾಗಿತ್ತು.

Aadhar Link: Deadline Extended

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ