ಆ್ಯಪ್ನಗರ

Shraddha Murder Case: ಶ್ರದ್ಧಾ ಉಂಗುರ ಮತ್ತೊಂದು ಹುಡುಗಿಗೆ ಗಿಫ್ಟ್! ಶವವಿದ್ದ ಮನೆಯಲ್ಲೇ ಅಫ್ತಾಬ್ ಡೇಟಿಂಗ್!

Shraddha Murder Case: ಶ್ರದ್ಧಾ ಅವರನ್ನು ಬರ್ಬರವಾಗಿ ಹತ್ಯೆಗೈದು, ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಅಫ್ತಾಬ್, ಆ ವೇಳೆಯಲ್ಲೇ ಬೇರೊಬ್ಬ ಮಹಿಳೆ ಜೊತೆ ಡೇಟಿಂಗಗ್ ಮಾಡುತ್ತಿದ್ದ. ಹತ್ಯೆ ಮಾಡಿ ಶವವನ್ನು ಫ್ಲಾಟ್‌ನ ಫ್ರಿಡ್ಜ್‌ನಲ್ಲಿ ಇಟ್ಟಿರುವ ಬಗ್ಗೆ ಒಂದಿಷ್ಟೂ ಅನುಮಾನ ಬಾರದಂತೆ ನಟಿಸಿದ್ದ ಅಫ್ತಾಬ್, ಅದೇ ಫ್ಲಾಟ್‌ಗೆ ಆಕೆಯನ್ನು ಕರೆಸಿಕೊಂಡಿದ್ದ. ಆಕೆ ವಾಪಸ್ ಹೋಗುವಾಗ ಆಕೆಯ ಬೆರಳಿಗೆ ಶ್ರದ್ಧಾ ವಾಲ್ಕರ್ ಅವರ ಉಂಗುರ ತೊಡಿಸಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

Authored byದಿಲೀಪ್ ಡಿ. ಆರ್. | TIMESOFINDIA.COM 29 Nov 2022, 2:30 pm

ಹೈಲೈಟ್ಸ್‌:

  • ಶ್ರದ್ಧಾ ಹತ್ಯೆ ಬಳಿಕ ಮತ್ತೊಬ್ಬ ಹುಡುಗಿ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್ ಪೂನಾವಾಲಾ
  • ಆಕೆಗೆ ನೀಡಿದ್ದ ಶ್ರದ್ಧಾ ವಾಲ್ಕರ್ ಅವರ ಉಂಗುರವನ್ನು ವಶಕ್ಕೆ ಪಡೆದ ದಿಲ್ಲಿ ಪೊಲೀಸರು
  • ತಮ್ಮ ಮಗಳಿಗೆ ಉಂಗುರ ಕೊಡಿಸಿದ್ದೆವು, ಅದು ಆಕೆಯ ಕೈನಲ್ಲಿ ಇತ್ತು ಎಂದು ಶ್ರದ್ಧಾ ತಂದೆ ಹೇಳಿಕೆ ನೀಡಿದ್ದರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aftab poonavala
ಹೊಸ ದಿಲ್ಲಿ: ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ, ಆಕೆಯ ಹತ್ಯೆಯ ಬಳಿಕ ಆಕೆಯ ಕೈನಲ್ಲಿ ಇದ್ದ ಉಂಗುರವನ್ನು ಮತ್ತೊಬ್ಬ ಯುವತಿಗೆ ನೀಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ ಬಳಿಕ ಮತ್ತೊಬ್ಬ ಹುಡುಗಿ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್ ಪೂನಾವಾಲಾ, ಆಕೆಗೆ ನೀಡಿದ್ದ ಶ್ರದ್ಧಾ ವಾಲ್ಕರ್ ಅವರ ಉಂಗುರವನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Shraddha Walker Murder: ಶ್ರದ್ಧಾಳನ್ನು ಕೊಂದ ಬಳಿಕ ಮನೋವೈದ್ಯೆ ಜತೆ ಹಂತಕ ಅಫ್ತಾಬ್ ಡೇಟಿಂಗ್
ತಮ್ಮ ಮಗಳಿಗೆ ಉಂಗುರ ಕೊಡಿಸಿದ್ದೆವು, ಅದು ಆಕೆಯ ಕೈನಲ್ಲಿ ಇತ್ತು ಎಂದು ಶ್ರದ್ಧಾ ಅವರ ತಂದೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ಡೇಟಿಂಗ್ ನಡೆಸುತ್ತಿದ್ದ ಮಹಿಳೆಯ ವಿಚಾರ ತಿಳಿದು ಬಂತು. ಆ ಬಳಿಕ ಮಹಿಳೆಯನ್ನು ಸಂಪರ್ಕಿಸಿ ಆಕೆಯ ಬಳಿ ಇದ್ದ ಶ್ರದ್ಧಾ ವಾಲ್ಕರ್ ಅವರ ಉಂಗುರವನ್ನು ವಶಕ್ಕೆ ಪಡೆದ ಪೊಲಿಸರು ಅದನ್ನು ಮರಳಿ ಶ್ರದ್ಧಾ ಅವರ ತಂದೆಯ ಸುಪರ್ದಿಗೆ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರದ್ಧಾ ಅವರನ್ನು ಬರ್ಬರವಾಗಿ ಹತ್ಯೆಗೈದು, ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಅಫ್ತಾಬ್, ಆ ವೇಳೆಯಲ್ಲೇ ಬೇರೊಬ್ಬ ಮಹಿಳೆ ಜೊತೆ ಡೇಟಿಂಗಗ್ ಮಾಡುತ್ತಿದ್ದ. ಆದರೆ, ಆತನ ವರ್ತನೆ ಅತ್ಯಂತ ಸಾಮಾನ್ಯವಾಗಿ ಇತ್ತು ಎಂದು ಮಹಿಳೆ ತಮ್ಮ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Shraddha Walker Murder: ಮುಸ್ಲಿಂ ಹೆಸರಿನಲ್ಲಿ ಅಫ್ತಾಬ್ ಕೃತ್ಯಕ್ಕೆ ಬೆಂಬಲ: ಉತ್ತರ ಪ್ರದೇಶದಲ್ಲಿ ಕಿಡಿಗೇಡಿ ಬಂಧನ
ಆತ ಹತ್ಯೆ ಮಾಡಿ ಶವವನ್ನು ಫ್ಲಾಟ್‌ನ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ ಎಂದು ಆಕೆಗೆ ಒಂದಿಷ್ಟೂ ಅನುಮಾನ ಬಾರದಂತೆ ನಟಿಸಿದ್ದ ಅಫ್ತಾಬ್, ಅದೇ ಫ್ಲಾಟ್‌ಗೆ ಆಕೆಯನ್ನು ಕರೆಸಿಕೊಂಡಿದ್ದ. ಆಕೆ ವಾಪಸ್ ಹೋಗುವಾಗ ಆಕೆಯ ಬೆರಳಿಗೆ ಶ್ರದ್ಧಾ ವಾಲ್ಕರ್ ಅವರ ಉಂಗುರ ತೊಡಿಸಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಶ್ರದ್ಧಾ ಅವರನ್ನು ಹತ್ಯೆ ಮಾಡಿ, ಶವವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ಫ್ಲಾಟ್‌ಗೆ ಮತ್ತೊಬ್ಬ ಮಹಿಳೆಯನ್ನು ಕರೆಸಿಕೊಳ್ಳುವ ಮುನ್ನ ಅಫ್ತಾಬ್ ಇಡೀ ಫ್ಲಾಟ್‌ ಅನ್ನು ಸಮಗ್ರವಾಗಿ ಸ್ವಚ್ಛಗೊಳಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.


ಇನ್ನು ಈ ಫ್ಲಾಟ್‌ನಲ್ಲಿ ತನಿಖೆ ನಡೆಸುವ ವೇಳೆ ಪೊಲಿಸರಿಗೆ ಕೂದಲಿನ ಮಾದರಿಗಳು ಸಿಕ್ಕಿದ್ದು, ಈ ಕೂದಲಿನ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇದು ಶ್ರದ್ಧಾ ಅವರಿಗೆ ಸೇರಿದ್ದೇ ಎಂದು ಪತ್ತೆ ಹಚ್ಚಲು ಮೆಹರೋಲಿ ಅರಣ್ಯಲ್ಲಿ ಸಿಕ್ಕ ಶ್ರದ್ಧಾ ಅವರ ದೇಹದ ತುಣುಕುಗಳು ಹಾಗೂ ಶ್ರದ್ಧಾ ಅವರ ತಂದೆ ಹಾಗೂ ಸಹೋದರನ ಡಿಎನ್‌ಎ ಜೊತೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. ಶ್ರದ್ಧಾಳ ಶವವನ್ನು ವಿಲೇವಾರಿ ಮಾಡುವ ಮುನ್ನ ಅಫ್ತಾಬ್ ಆಕೆಯ ತಲೆ ಕೂದಲನ್ನು ಕತ್ತರಿಸಿದ್ದ ಎಂದು ತಿಳಿದು ಬಂದಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ