ಆ್ಯಪ್ನಗರ

ಕನ್ಹಯ್ಯಾ ವಿರುದ್ಧದ ದೇಶದ್ರೋಹದ ಪಕ್ರರಣದ ವಿಚಾರಣೆಗೆ ಸೈ ಎಂದ ಆಪ್ ಸರ್ಕಾರ!

ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಎನ್'ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ತಮ್ಮ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಕನ್ಹಯ್ಯಾ ಕುಮಾರ್ ಸ್ವಾಗತಿಸಿದ್ದಾರೆ.

Vijaya Karnataka Web 29 Feb 2020, 10:33 am
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಎನ್'ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
Vijaya Karnataka Web Kanhaiya Kumar
Kanhaiya Kumar Sedition Case


ಕನ್ಹಯ್ಯಾ ವಿರುದ್ಧದ ವಿಚಾರಣೆಗೆ ಸೈ ಎಂದಿರುವ ಆಪ್ ಸರ್ಕಾರ ಪ್ರಾಸಿಕ್ಯೂಶನ್ ವಕೀಲರನ್ನೂ ಕೂಡ ನೇಮಕ ಮಾಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ಹಯ್ಯಾ ಕುಮಾರ್ ವಿರುದ್ಧದ ದೇಶದ್ರೋಹದ ಪ್ರಕರಣ ನ್ಯಾಯಾಯಲಯದಲ್ಲಿ ವಿಚಾರಣೆಗೆ ಬರಲಿದೆ.

ಇನ್ನು ತಮ್ಮ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಸ್ವಾಗತಿಸಿರುವ ಕನ್ಹಯ್ಯಾ ಕುಮಾರ್, ಈ ಕಾರಣಕ್ಕೆ ದೆಹಲಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕನ್ಹಯ್ಯ ಕುಮಾರ್‌ರಂಥ ವಿದ್ಯಾರ್ಥಿಗಳಿಂದ ಜೆಎನ್‌ಯುಗೆ ಕೆಟ್ಟ ಹೆಸರು
ಈ ಕುರಿತು ಟ್ವೀಟ್ ಮಾಡಿರುವ ಕನ್ಹಯ್ಯಾ ಕುಮಾರ್, ವಿಚಾರಣೆಗೆ ಸಮ್ಮತಿಸಿದ ಆಪ್ ಸರ್ಕಾರಕ್ಕೆ ಧನ್ಯವಾದಗಳು. ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸುವಂತೆ ಆಪ್ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ಶೀಘ್ರ ನ್ಯಾಯ ದೊರೆಯುವ ಭರವಸೆ ಇದೆ ಎಂದು ಹೇಳಿದ್ದಾರೆ.

ಸರ್ಕಾರಗಳು ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ವಿಚಾರಣೆಯ ಮೂಲಕ ಇದಕ್ಕೆ ಬ್ರೇಕ್ ಬಿದ್ದರೆ ತಮಗೆ ಅದಕ್ಕಿಂತ ಆನಂದ ಮತ್ತೊಂದಿಲ್ಲ ಎಂದು ಕನ್ಹಯ್ಯಾ ಕುಮಾರ್ ಟ್ವೀಟ್ ಮಾಡಿದ್ದಾರೆ.

2016ರ ಫೆಬ್ರವರಿಯಲ್ಲಿ ಜೆಎನ್'ಯು ಕ್ಯಾಂಪಸ್'ನಲ್ಲಿ ಮಾತನಾಡಿದ್ದ ಕನ್ಹಯ್ಯಾ ಕುಮಾರ್ ಹಾಗೂ ಬೆಂಬಲಿಗರು ದೇಶದ ವಿರುದ್ಧ ಘೋಷಣೆ ಕೂಗಿದ ಆರೋಪ ಕೇಳಿ ಬಂದಿತ್ತು.

FAKE ALERT: ಉದ್ರಿಕ್ತರಿಂದ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ? ಈ ವಿಡಿಯೋದ ಅಸಲಿಯತ್ತೇನು?

ವಿಚಿತ್ರ ಎಂದರೆ ಕನ್ಹಯ್ಯಾ ಕುಮಾರ್ ಅವರ ಅಂದಿನ ಭಾಷಣವನ್ನು ಖುದ್ದು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದರು. ಇದೀಗ ಕನ್ಹಯ್ಯಾ ವಿರುದ್ಧದ ದೇಶದ್ರೋಹದ ಪ್ರಕರಣದ ವಿಚಾರಣಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ