ಹೊಸದಿಲ್ಲಿ: ಮಾಜಿ ಎಎಪಿ ನಾಯಕ ಸುಕ್ಪಾಲ್ ಸಿಂಗ್ ಖೈರಾ, ತಮ್ಮ ನೇತೃತ್ವದ ಪಂಜಾಬ್ ಏಕ್ತಾ ಪಾರ್ಟಿ ಕಾಂಗ್ರೆಸ್ನಲ್ಲಿ ವಿಲೀನಗೊಳ್ಳಲಿದೆ ಎಂದು ಗುರುವಾರ ಘೋಷಿಸಿದ್ದಾರೆ. ಪಂಜಾಬ್ನ ಮಾಜಿ ವಿರೋಧ ಪಕ್ಷದ ನಾಯಕರೂ ಆಗಿರುವ ಖೈರಾ, 'ಎಎಪಿ ಏಕ ವ್ಯಕ್ತಿ ಪ್ರದರ್ಶನದ ಪಕ್ಷ' ಎಂದು ಟೀಕಿಸಿಸ್ದಾರೆ. ಮತ್ತು 2015ರಲ್ಲಿ ಕಾಂಗ್ರೆಸ್ ತೊರೆದು ಎಎಪಿ ತೊರೆದು ತಪ್ಪು ಮಾಡಿದೆ ಅಲವತ್ತುಕೊಂಡಿದ್ದಾರೆ.
ಭೊಲಾತ್ ಶಾಸಕರಾಗಿರುವ ಖೈರಾ, ಇತರ ಶಾಸಕರಾದ ಜಗದೇವ್ ಸಿಂಗ್ ಕಮಲು, ಪಿರ್ಮಲ್ ಸಿಂಗ್ ಖಾಲ್ಸಾ ಜತೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಅಧಿಕೃತವಾಗಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಿದ್ದಾರೆ.
ಈ ವೇಳೆ ಎಐಸಿಸಿ ಪ್ರಧಾನಿ ಕಾರ್ಯದರ್ಶಿ, ಪಂಜಾಬ್ ಉಸ್ತುವಾರಿ ಹರೀಶ್ ರಾವತ್, ಪಕ್ಷದ ಮುಖ್ತ ವಕ್ತಾರ ರಣದೀಪ್ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು.
"ಎಎಪಿ ಕೇವಲ ಏಕ ವ್ಯಕ್ತಿ ಪ್ರದರ್ಶನವಾಗಿದ್ದು, ಪಕ್ಷದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೀರಿ ಏನೂ ಇಲ್ಲ," ಎಂದು ರಾಹುಲ್ ಗಾಂಧಿ ಭೇಟಿ ಬಳಿಕ ಖೈರಾ ದೂರಿದ್ದಾರೆ.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಪೂರ್ಣ ನಂಬಿಕೆ ಇಟ್ಟು ಕಾಂಗ್ರೆಸ್ ಸೇರುತ್ತಿರುವುದಾಗಿ ಖೈರಾ ಹೇಳಿದ್ದು, "ಎಎಪಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೊಂದಿಲ್ಲ," ಎಂದು ಕಿಡಿಕಾರಿದ್ದಾರೆ.
ಭೊಲಾತ್ ಶಾಸಕರಾಗಿರುವ ಖೈರಾ, ಇತರ ಶಾಸಕರಾದ ಜಗದೇವ್ ಸಿಂಗ್ ಕಮಲು, ಪಿರ್ಮಲ್ ಸಿಂಗ್ ಖಾಲ್ಸಾ ಜತೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಅಧಿಕೃತವಾಗಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಿದ್ದಾರೆ.
ಈ ವೇಳೆ ಎಐಸಿಸಿ ಪ್ರಧಾನಿ ಕಾರ್ಯದರ್ಶಿ, ಪಂಜಾಬ್ ಉಸ್ತುವಾರಿ ಹರೀಶ್ ರಾವತ್, ಪಕ್ಷದ ಮುಖ್ತ ವಕ್ತಾರ ರಣದೀಪ್ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು.
"ಎಎಪಿ ಕೇವಲ ಏಕ ವ್ಯಕ್ತಿ ಪ್ರದರ್ಶನವಾಗಿದ್ದು, ಪಕ್ಷದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೀರಿ ಏನೂ ಇಲ್ಲ," ಎಂದು ರಾಹುಲ್ ಗಾಂಧಿ ಭೇಟಿ ಬಳಿಕ ಖೈರಾ ದೂರಿದ್ದಾರೆ.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಪೂರ್ಣ ನಂಬಿಕೆ ಇಟ್ಟು ಕಾಂಗ್ರೆಸ್ ಸೇರುತ್ತಿರುವುದಾಗಿ ಖೈರಾ ಹೇಳಿದ್ದು, "ಎಎಪಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೊಂದಿಲ್ಲ," ಎಂದು ಕಿಡಿಕಾರಿದ್ದಾರೆ.