ಆ್ಯಪ್ನಗರ

ಸಹಾಯಕ್ಕಾಗಿ ಕಿರುಚಾಡಿದ್ದರಿಂದ ಮಹಿಳೆಯನ್ನು ಕಾರಿಂದ ದೂಡಿ ಪರಾರಿಯಾದ ಅಪಹರಣಕಾರರು

ಮಹಿಳೆಯೊಬ್ಬಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ಆಕೆ ಸಹಾಯಕ್ಕಾಗಿ ಕಿರುಚಿಕೊಂಡಾಗ ಕಾರಿಂದ ತಳ್ಳಿ ಪರಾರಿಯಾದ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

TIMESOFINDIA.COM 17 Sep 2018, 4:46 pm
ಹೊಸದಿಲ್ಲಿ: ಮಹಿಳೆಯೊಬ್ಬಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ಆಕೆ ಸಹಾಯಕ್ಕಾಗಿ ಕಿರುಚಿಕೊಂಡಾಗ ಕಾರಿಂದ ತಳ್ಳಿ ಪರಾರಿಯಾದ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
Vijaya Karnataka Web Police 1


ಶುಕ್ರವಾರ ಸಂಜೆ ಸೆಕ್ಟರ್ 16ರ ಬಳಿ ಇರುವ ಖಾಸಗಿ ಶಾಲೆಯ ಮುಂದೆ ನಿಂತಿದ್ದ ಮಹಿಳೆಯನ್ನು ಬಿಳಿ ಮಾರುತಿ ಸ್ವಿಫ್ಟ್ ಡಿಜೈರ್‌ನಲ್ಲಿ ಅಪಹರಿಸಲಾಗಿತ್ತು. ಆರೋಪಿಗಳನ್ನು ಫರಿದಾಬಾದ್ ಬಳಿಯ ದಾಡ್ಸಿಯಾದಲ್ಲಿ ಬಂಧಿಸಿದ ಬಳಿಕ ಸಂಪೂರ್ಣ ಪ್ರಕರಣದ ವಿವರ ಬಯಲಾಯ್ತು.

ಬಂಧಿತರನ್ನು ಸಬಲ್ ಕುಮಾರ್ ಸಿಂಗ್ (34) ಮತ್ತು ಇಕ್ರಾಮುದ್ದೀನ್ (25) ಎಂದು ಗುರುತಿಸಲಾಗಿದೆ.

ಅಹಹೃತ ಮಹಿಳೆ ದ್ವಾರ್ಕಾದ ಹೌಸಿಂಗ್ ಸೊಸೈಟಿ ನಿವಾಸಿಯಾಗಿದ್ದಾಳೆ. ಕಳೆದೆರಡು ವಾರದ ಹಿಂದೆ ಆಕೆಗೆ ಫೋನ್ ಕರೆ ಮಾಡಿದ್ದ ಸಿಂಗ್ ಮೊಬೈಲ್ ನೆಟ್‌ವರ್ಕ್ ಕಂಪನಿಯ ಕಸ್ಟಮರ್ ಕೇರ್ ಉದ್ಯೋಗಿ ಎಂದು ಪರಿಚಯಿಸಿಕೊಂಡು ಉತ್ತಮ ಟಾಕ್‌ಟೈಮ್ ಆಫರ್ ನೀಡಿದ್ದ. ಬಳಿಕ ಆಗಾಗ ಕರೆ ಮಾಡಿ ಅಸಭ್ಯವಾಗಿ ಮಾತನಾಡಲಾರಂಭಿಸಿದ. ಹೀಗಾಗಿ ಆಕೆ ಆತನ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದಳು. ಆದರೆ ಆಕೆಯ ಬೆನ್ನು ಬಿಡದ ಆತ ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ. ವಾಟ್ಸ್ಆ್ಯಪ್ ಮೂಲಕ ಸೆಕ್ಸ್ ಸಂದೇಶಗಳನ್ನು ಕಳುಹಿಸುತ್ತಿದ್ದ.

ಇದರಿಂದ ರೋಸಿ ಹೋದ ಆಕೆ ಪತಿಗೆ ಎಲ್ಲ ವಿಷಯವನ್ನು ತಿಳಿಸಿದ್ದಳು. ಪತಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿ ದ್ವಾರ್ಕಾ ಬಳಿ ಬರುವಂತೆ ಹೇಳು ಎಂದು ಪತ್ನಿಗೆ ಸೂಚಿಸಿದ್ದ. ಪತಿ-ಪತ್ನಿ ಬೈಕ್‌ನಲ್ಲಿ ನಿಗದಿತ ಸ್ಥಳಕ್ಕೆ ಹೋಗಿದ್ದರು. ಅವರ ಸ್ನೇಹಿತ ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ.

ಆದರೆ ಎಲ್ಲವೂ ಅವರಂದುಕೊಂಡಂತೆ ನಡೆಯಲಿಲ್ಲ. ಸ್ನೇಹಿತನ ಜತೆಯಲ್ಲಿ ಅಲ್ಲಿಗೆ ಬಂದ ಸಿಂಗ್ ಬೈಕ್‌ನಲ್ಲಿದ್ದ ಮಹಿಳೆಯನ್ನು ಕಾರಿನಲ್ಲಿ ಹಾಕಿಕೊಂಡು ಪಲಾಯನ ಮಾಡಿದ. ಶಾಕ್‌ಗೊಳಗಾದ ಪತಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ. ಅಪಹೃತ ಮಹಿಳೆ ಸಹಾಯಕ್ಕಾಗಿ ನಿರಂತರವಾಗಿ ಕೂಗಿಕೊಂಡಾಗ ಹೆದರಿದ ಸಿಂಗ್ ಮತ್ತು ಆತನ ಸ್ನೇಹಿತ ಆಕೆಯನ್ನು ರಸ್ತೆಗೆ ದೂಡಿ ಪರಾರಿಯಾಗಿದ್ದಾರೆ.

ಆರೋಪಿಗಳನ್ನು ಹಿಂಬಾಲಿಸಿದ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸಿಂಗ್ ತಾನು ಕಸ್ಟಮರ್ ಕೇರ್ ಎಂದು ಪರಿಚಯಿಸಿಕೊಂಡು ಅನೇಕ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ