ಶತ್ರು ನೆಲದಲ್ಲಿ ಬಿದ್ದಾಗ ಅಭಿನಂದನ್ ಏನು ಮಾಡಿದ್ರು ಗೊತ್ತೇ?
ಭಾರತದ ವಾಯುಗಡಿ ಪ್ರವೇಶಿಸಿದ್ದ ಮೂರು ಪಾಕ್ ವಿಮಾನಗಳ ಪೈಕಿ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಲಾಯಿತು. ಇನ್ನೆರೆಡನ್ನು ಅಟ್ಟಿಸಿಕೊಂಡು ಹೋಗಿದ್ದ ಭಾರತದ ಮಿಗ್-21 ಬೈಸನ್ ಫೈಟರ್ ಜೆಟ್ ಪಾಕ್ ವಾಯುಗಡಿ ಪ್ರವೇಶಿಸಿತ್ತು. ಪಾಕ್ ದಾಳಿಯಿಂದ ಅದಕ್ಕೆ ಬೆಂಕಿ ಹೊತ್ತಿಕೊಂಡು ಕೆಳಕ್ಕೆ ಬಿದ್ದು ಸ್ಫೋಟಗೊಂಡಿತು.
Vijaya Karnataka 1 Mar 2019, 6:11 pm
ಮುಜಫ್ಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪುಟ್ಟ ಹಳ್ಳಿ ಅದು. ಹೆಸರು ಹೊರಾ. ಇಲ್ಲಿಂದ ಗಡಿ ನಿಯಂತ್ರಣ ರೇಖೆ ಕೇವಲ 7 ಕಿ.ಮೀ ದೂರ. ಫೆ.27ರ ಬುಧವಾರ ಈ ಹಳ್ಳಿಗರ ಪಾಲಿಗೆ ಎಂದಿನಂತಿರಲಿಲ್ಲ. ದನ-ಕುರಿಗಳನ್ನು ಮೇಯಿಸಿಕೊಂಡು ಜೀವನ ನಡೆಸುತ್ತಿರುವ 58 ವರ್ಷದ ಮೊಹಮ್ಮದ್ ರಜಾಕ್ ಚೌಧರಿ ಅವರಿಗಂತೂ ಬೆಳಗ್ಗೆ 8.45ರ ಸುಮಾರಿಗೆ ಭಾರಿ ಸದ್ದು ಕೇಳಿಸಿತು. ಇದು ಅವರಿಗೆ ಅನಾಹುತದ ಮುನ್ಸೂಚನೆ ನೀಡಿತ್ತು. ಹೊರಬಂದು ಕಣ್ಣು ಹಾಯಿಸುವಷ್ಟರಲ್ಲಿ ಆಕಾಶದಲ್ಲಿ ಯುದ್ಧ ವಿಮಾನಗಳ ಕಾದಾಟ ಶುರುವಾಗಿತ್ತು.
ನೋಡನೋಡುತ್ತಿದ್ದಂತೆಯೇ ಭಾರತದ ವಾಯುಗಡಿ ಪ್ರವೇಶಿಸಿದ್ದ ಮೂರು ಪಾಕ್ ವಿಮಾನಗಳ ಪೈಕಿ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಲಾಯಿತು. ಇನ್ನೆರೆಡನ್ನು ಅಟ್ಟಿಸಿಕೊಂಡು ಹೋಗಿದ್ದ ಭಾರತದ ಮಿಗ್-21 ಬೈಸನ್ ಫೈಟರ್ ಜೆಟ್ ಪಾಕ್ ವಾಯುಗಡಿ ಪ್ರವೇಶಿಸಿತ್ತು. ಪಾಕ್ ದಾಳಿಯಿಂದ ಅದಕ್ಕೆ ಬೆಂಕಿ ಹೊತ್ತಿಕೊಂಡು ಕೆಳಕ್ಕೆ ಬಿದ್ದು ಸ್ಫೋಟಗೊಂಡಿತು.
ಇವೆಲ್ಲವನ್ನೂ ಆತಂಕದಿಂದಲೇ ನೋಡಿದ ರಜಾಕ್ ತಮ್ಮ ಮನೆಯ ದಕ್ಷಿಣ ದಿಕ್ಕಿನತ್ತ ಕಣ್ಣು ಹಾಯಿಸಿದಾಗ, ಕೊಂಚ ದೂರದಲ್ಲಿ ಪ್ಯಾರಾಚೂಟ್ವೊಂದು ಭೂಮಿಯತ್ತ ಇಳಿಯುತ್ತಿರುವುದನ್ನು ಕಂಡರು. ಪ್ಯಾರಾಚೂಟ್ನಿಂದ ಪೈಲಟ್ ಸುರಕ್ಷಿತವಾಗಿ ಹೊರಬರುತ್ತಿರುವುದನ್ನು ಗಮನಿಸಿದ ರಜಾಕ್ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿ ಅತ್ತ ಹೊರಟರು. ಭಗ್ನಗೊಂಡಿರುವ ವಿಮಾನದತ್ತ ಸುಳಿಯದಂತೆ ಯುವಕರಿಗೆ ಆದೇಶಿಸಿ ಸೇನೆಯವರು ಬರುವವರೆಗೂ ಪೈಲಟ್ಅನ್ನು ಹಿಡಿದಿಟ್ಟುಕೊಳ್ಳುವಂತೆ ಯುವಕರಿಗೆ ಸೂಚಿಸಿದ್ದರು. ಆದರೆ ಯುವಕರು ಹಿಂಸಿಸುವ ದುಷ್ಟ ಚಾಳಿ ಬಿಡಲಿಲ್ಲ.
ಹಿಂಸೆಗೊಳಗಾದರೂ 'ಭಾರತ್ ಮಾತಾ ಕೀ ಜೈ' ಎಂದು ಘೋಷಿಸಿ, ಸೂಜಿಮೊನೆಯಷ್ಟೂ ಸೇನೆಯ ಚಲನವಲನಗಳ ಗುಟ್ಟು ಬಿಟ್ಟುಕೊಡದೇ ಅಪ್ರತಿಮ ದೇಶಪ್ರೇಮ ಮೆರೆದವರು ಬೇರಾರೂ ಅಲ್ಲ, ಅದೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್.
ಕೆಚ್ಚೆದೆಯ ಹೋರಾಟ: ಶತ್ರು ರಾಷ್ಟ್ರದ ಕಪಿಮುಷ್ಠಿಯಲ್ಲಿ ಸಿಲುಕಿದ ಕ್ಷಣದಲ್ಲಿ ಅಭಿನಂದನ್ ಕೊಂಚವೂ ಧೈರ್ಯಗುಂದಲಿಲ್ಲ. ಎಲ್ಲ ಸವಾಲನ್ನೂ ದಿಟ್ಟತನದಿಂದಲೇ ಎದುರಿಸಿದರು. ಪ್ಯಾರಾಚೂಟ್ನಿಂದ ಇಳಿದ ತಕ್ಷಣ ಅವರಿಂದ ಹೊರಡಿದ ಮಾತು ''ನಾನು ಎಲ್ಲಿದ್ದೇನೆ?'' ಎಂಬುದು. ಯುವಕರ ಕೀಟಲೆ ನೋಡಿ ತಕ್ಷಣವೇ ಪಿಸ್ತೂಲ್ ಹೊರತೆಗೆದು, ''ಈ ಜಾಗ ಭಾರತವೋ? ಪಾಕಿಸ್ತಾನವೋ?,'' ಎಂದು ಗಡುಸಾಗಿಯೇ ಪ್ರಶ್ನಿಸಿದರು. ಅಲ್ಲಿದ್ದವನೊಬ್ಬ ''ಭಾರತ,'' ಎಂದ. ಆಗ ದೇಶದ ಪರ ಘೋಷಣೆಗಳನ್ನು ಕೂಗಿ, ''ಬೆನ್ನು ಮೂಳೆಗೆ ಪೆಟ್ಟಾಗಿದೆ, ಕುಡಿಯಲು ನೀರು ಕೊಡಿ'' ಎಂದರು. ಭಾರತದ ಘೋಷಣೆಗಳಿಂದ ಆಕ್ರೋಶಗೊಂಡ ಯುವಕರ ಗುಂಪೊಂದು ಪಾಕ್ ಪರ ಘೋಷಣೆಗಳನ್ನು ಕೂಗಿತು. ಇದರಿಂದ ಬೆಂಕಿಯುಂಡೆಯಂತಾದ ಅಭಿನಂದನ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಪ್ರತಿದಾಳಿ ನಡೆಸಲು ಸ್ಥಳೀಯ ಯುವಕರು ಕೈಯಲ್ಲಿ ಕಲ್ಲು ಹಿಡಿದರು.
ದಾಖಲೆಗಳನ್ನು ನುಂಗಿದರು: ಅಭಿನಂದನ್ ತಮ್ಮನ್ನು ಚೇಸ್ ಮಾಡಲು ಬರುತ್ತಿದ್ದ ಯುವಕರತ್ತ ಪಿಸ್ತೂಲ್ ತೋರಿಸಿ ಸುಮಾರು ಅರ್ಧ ಕಿಲೋಮೀಟರ್ ಹಿಮ್ಮುಖವಾಗಿಯೇ ಓಡಿದರು. ಆದರೂ ಯುವಕರು ಮುಂದಡಿ ಇಡುತ್ತಲೇ ಇದ್ದರು. ಈ ವೇಳೆ ಗಾಳಿಯಲ್ಲಿ ಇನ್ನಷ್ಟು ಗುಂಡು ಹಾರಿಸಿ ಬೆದರಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಕೊನೆಗೆ ಅಲ್ಲೇ ಇದ್ದ ಸಣ್ಣ ಕೊಳದಲ್ಲಿ ಜಿಗಿದು ಭಾರತದ ಮ್ಯಾಪ್ ಸೇರಿ ಒಂದಷ್ಟು ದಾಖಲೆಗಳನ್ನು ನುಂಗಿಬಿಟ್ಟರು. ಅಷ್ಟರಲ್ಲಿ ಯುವಕರು ಎಸೆದ ಒಂದು ಕಲ್ಲು ಅವರ ಕಾಲಿಗೆ ಪೆಟ್ಟು ನೀಡಿತು. ಆಗ ಅವರು ಗುಂಡು ಹಾರಿಸದಂತೆ ಕಿಡಿಗೇಡಿಗಳಿಗೆ ತಾಕೀತು ಮಾಡಿ ಮೇಲೆದ್ದು ಬಂದರು. ಆಗ ಮಾನವೀಯತೆಯನ್ನೂ ಮರೆತು ಸ್ಥಳೀಯರು ಅವರನ್ನು ಎಳೆದಾಡಿ ಮುಖಕ್ಕೆ ಥಳಿಸಿ ಹಿಂಸಿದರು. ಇದಾಗಿ ಕೆಲ ಹೊತ್ತಲ್ಲೇ ಸೇನೆಯುವರು ಬಂದು ಅಭಿನಂದನ್ರನ್ನು ಭಿಂಬೇರ್ ಶಿಬಿರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದರು.
ಸುರಕ್ಷಿತ ಬಿಡುಗಡೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ
ಮುಂಬಯಿ: ದೇಶಕ್ಕಾಗಿ ಹೋರಾಡಿದ ಮಗನ ಸಾಹಸದ ಬಗ್ಗೆ ತಮಗೆ ಅತೀವ ಹೆಮ್ಮೆ ಇದೆ. ಅವನೊಬ್ಬ ಧೀರ ಯೋಧ ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಹೇಳಿದ್ದಾರೆ. ''ಅಭಿನಂದನ್ನಲ್ಲಿ ಮೊದಲಿನಿಂದಲೂ ದೇಶಪ್ರೇಮದ ತುಡಿತವಿದೆ. ಹೀಗಾಗಿಯೇ ವಾಯುಪಡೆ ಸೇರಿದ. ಪಾಕ್ ಯುದ್ಧ ವಿಮಾನಗಳನ್ನು ಹೆಮ್ಮೆಟಿಸಿದ ಅವನ ಧೈರ್ಯ, ಸಾಹಾಸಗಳಿಗೆ ನನ್ನದೊಂದು ಸಲಾಂ. ಇದೆಲ್ಲಕ್ಕೂ ಮಿಗಿಲಾಗಿ ಅವನ ಸುರಕ್ಷಿತ ಬಿಡುಗಡೆ ಪಾಕ್ ಮುಂದಾಗಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ,'' ಎಂದು ಹೇಳಿದ್ದಾರೆ. ಇದೇ ವೇಳೆ ಅಭಿನಂದನ್ ಸುರಕ್ಷಿತ ಬಿಡುಗಡೆ ಪ್ರಾರ್ಥಿಸಿ ನೈತಿಕ ಧೈಯ ತುಂಬಿದ ಕೋಟ್ಯಂತರ ದೇಶವಾಸಿಗಳಿಗೆ ಹಾಗೂ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಭಿನಂದನ್ ಅವರ ಪತ್ನಿ ನಿವೃತ್ತ ವಾಯುಪಡೆ ಅಧಿಕಾರಿ ತನ್ವಿ ಮಾರ್ವಾ ಸರಕಾರ ಹಾಗೂ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದು, ಪತಿಯ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.
ನೋಡನೋಡುತ್ತಿದ್ದಂತೆಯೇ ಭಾರತದ ವಾಯುಗಡಿ ಪ್ರವೇಶಿಸಿದ್ದ ಮೂರು ಪಾಕ್ ವಿಮಾನಗಳ ಪೈಕಿ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಲಾಯಿತು. ಇನ್ನೆರೆಡನ್ನು ಅಟ್ಟಿಸಿಕೊಂಡು ಹೋಗಿದ್ದ ಭಾರತದ ಮಿಗ್-21 ಬೈಸನ್ ಫೈಟರ್ ಜೆಟ್ ಪಾಕ್ ವಾಯುಗಡಿ ಪ್ರವೇಶಿಸಿತ್ತು. ಪಾಕ್ ದಾಳಿಯಿಂದ ಅದಕ್ಕೆ ಬೆಂಕಿ ಹೊತ್ತಿಕೊಂಡು ಕೆಳಕ್ಕೆ ಬಿದ್ದು ಸ್ಫೋಟಗೊಂಡಿತು.
ಇವೆಲ್ಲವನ್ನೂ ಆತಂಕದಿಂದಲೇ ನೋಡಿದ ರಜಾಕ್ ತಮ್ಮ ಮನೆಯ ದಕ್ಷಿಣ ದಿಕ್ಕಿನತ್ತ ಕಣ್ಣು ಹಾಯಿಸಿದಾಗ, ಕೊಂಚ ದೂರದಲ್ಲಿ ಪ್ಯಾರಾಚೂಟ್ವೊಂದು ಭೂಮಿಯತ್ತ ಇಳಿಯುತ್ತಿರುವುದನ್ನು ಕಂಡರು. ಪ್ಯಾರಾಚೂಟ್ನಿಂದ ಪೈಲಟ್ ಸುರಕ್ಷಿತವಾಗಿ ಹೊರಬರುತ್ತಿರುವುದನ್ನು ಗಮನಿಸಿದ ರಜಾಕ್ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿ ಅತ್ತ ಹೊರಟರು. ಭಗ್ನಗೊಂಡಿರುವ ವಿಮಾನದತ್ತ ಸುಳಿಯದಂತೆ ಯುವಕರಿಗೆ ಆದೇಶಿಸಿ ಸೇನೆಯವರು ಬರುವವರೆಗೂ ಪೈಲಟ್ಅನ್ನು ಹಿಡಿದಿಟ್ಟುಕೊಳ್ಳುವಂತೆ ಯುವಕರಿಗೆ ಸೂಚಿಸಿದ್ದರು. ಆದರೆ ಯುವಕರು ಹಿಂಸಿಸುವ ದುಷ್ಟ ಚಾಳಿ ಬಿಡಲಿಲ್ಲ.
ಹಿಂಸೆಗೊಳಗಾದರೂ 'ಭಾರತ್ ಮಾತಾ ಕೀ ಜೈ' ಎಂದು ಘೋಷಿಸಿ, ಸೂಜಿಮೊನೆಯಷ್ಟೂ ಸೇನೆಯ ಚಲನವಲನಗಳ ಗುಟ್ಟು ಬಿಟ್ಟುಕೊಡದೇ ಅಪ್ರತಿಮ ದೇಶಪ್ರೇಮ ಮೆರೆದವರು ಬೇರಾರೂ ಅಲ್ಲ, ಅದೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್.
ಕೆಚ್ಚೆದೆಯ ಹೋರಾಟ: ಶತ್ರು ರಾಷ್ಟ್ರದ ಕಪಿಮುಷ್ಠಿಯಲ್ಲಿ ಸಿಲುಕಿದ ಕ್ಷಣದಲ್ಲಿ ಅಭಿನಂದನ್ ಕೊಂಚವೂ ಧೈರ್ಯಗುಂದಲಿಲ್ಲ. ಎಲ್ಲ ಸವಾಲನ್ನೂ ದಿಟ್ಟತನದಿಂದಲೇ ಎದುರಿಸಿದರು. ಪ್ಯಾರಾಚೂಟ್ನಿಂದ ಇಳಿದ ತಕ್ಷಣ ಅವರಿಂದ ಹೊರಡಿದ ಮಾತು ''ನಾನು ಎಲ್ಲಿದ್ದೇನೆ?'' ಎಂಬುದು. ಯುವಕರ ಕೀಟಲೆ ನೋಡಿ ತಕ್ಷಣವೇ ಪಿಸ್ತೂಲ್ ಹೊರತೆಗೆದು, ''ಈ ಜಾಗ ಭಾರತವೋ? ಪಾಕಿಸ್ತಾನವೋ?,'' ಎಂದು ಗಡುಸಾಗಿಯೇ ಪ್ರಶ್ನಿಸಿದರು. ಅಲ್ಲಿದ್ದವನೊಬ್ಬ ''ಭಾರತ,'' ಎಂದ. ಆಗ ದೇಶದ ಪರ ಘೋಷಣೆಗಳನ್ನು ಕೂಗಿ, ''ಬೆನ್ನು ಮೂಳೆಗೆ ಪೆಟ್ಟಾಗಿದೆ, ಕುಡಿಯಲು ನೀರು ಕೊಡಿ'' ಎಂದರು. ಭಾರತದ ಘೋಷಣೆಗಳಿಂದ ಆಕ್ರೋಶಗೊಂಡ ಯುವಕರ ಗುಂಪೊಂದು ಪಾಕ್ ಪರ ಘೋಷಣೆಗಳನ್ನು ಕೂಗಿತು. ಇದರಿಂದ ಬೆಂಕಿಯುಂಡೆಯಂತಾದ ಅಭಿನಂದನ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಪ್ರತಿದಾಳಿ ನಡೆಸಲು ಸ್ಥಳೀಯ ಯುವಕರು ಕೈಯಲ್ಲಿ ಕಲ್ಲು ಹಿಡಿದರು.
ದಾಖಲೆಗಳನ್ನು ನುಂಗಿದರು: ಅಭಿನಂದನ್ ತಮ್ಮನ್ನು ಚೇಸ್ ಮಾಡಲು ಬರುತ್ತಿದ್ದ ಯುವಕರತ್ತ ಪಿಸ್ತೂಲ್ ತೋರಿಸಿ ಸುಮಾರು ಅರ್ಧ ಕಿಲೋಮೀಟರ್ ಹಿಮ್ಮುಖವಾಗಿಯೇ ಓಡಿದರು. ಆದರೂ ಯುವಕರು ಮುಂದಡಿ ಇಡುತ್ತಲೇ ಇದ್ದರು. ಈ ವೇಳೆ ಗಾಳಿಯಲ್ಲಿ ಇನ್ನಷ್ಟು ಗುಂಡು ಹಾರಿಸಿ ಬೆದರಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಕೊನೆಗೆ ಅಲ್ಲೇ ಇದ್ದ ಸಣ್ಣ ಕೊಳದಲ್ಲಿ ಜಿಗಿದು ಭಾರತದ ಮ್ಯಾಪ್ ಸೇರಿ ಒಂದಷ್ಟು ದಾಖಲೆಗಳನ್ನು ನುಂಗಿಬಿಟ್ಟರು. ಅಷ್ಟರಲ್ಲಿ ಯುವಕರು ಎಸೆದ ಒಂದು ಕಲ್ಲು ಅವರ ಕಾಲಿಗೆ ಪೆಟ್ಟು ನೀಡಿತು. ಆಗ ಅವರು ಗುಂಡು ಹಾರಿಸದಂತೆ ಕಿಡಿಗೇಡಿಗಳಿಗೆ ತಾಕೀತು ಮಾಡಿ ಮೇಲೆದ್ದು ಬಂದರು. ಆಗ ಮಾನವೀಯತೆಯನ್ನೂ ಮರೆತು ಸ್ಥಳೀಯರು ಅವರನ್ನು ಎಳೆದಾಡಿ ಮುಖಕ್ಕೆ ಥಳಿಸಿ ಹಿಂಸಿದರು. ಇದಾಗಿ ಕೆಲ ಹೊತ್ತಲ್ಲೇ ಸೇನೆಯುವರು ಬಂದು ಅಭಿನಂದನ್ರನ್ನು ಭಿಂಬೇರ್ ಶಿಬಿರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದರು.
ಸುರಕ್ಷಿತ ಬಿಡುಗಡೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ
ಮುಂಬಯಿ: ದೇಶಕ್ಕಾಗಿ ಹೋರಾಡಿದ ಮಗನ ಸಾಹಸದ ಬಗ್ಗೆ ತಮಗೆ ಅತೀವ ಹೆಮ್ಮೆ ಇದೆ. ಅವನೊಬ್ಬ ಧೀರ ಯೋಧ ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಹೇಳಿದ್ದಾರೆ. ''ಅಭಿನಂದನ್ನಲ್ಲಿ ಮೊದಲಿನಿಂದಲೂ ದೇಶಪ್ರೇಮದ ತುಡಿತವಿದೆ. ಹೀಗಾಗಿಯೇ ವಾಯುಪಡೆ ಸೇರಿದ. ಪಾಕ್ ಯುದ್ಧ ವಿಮಾನಗಳನ್ನು ಹೆಮ್ಮೆಟಿಸಿದ ಅವನ ಧೈರ್ಯ, ಸಾಹಾಸಗಳಿಗೆ ನನ್ನದೊಂದು ಸಲಾಂ. ಇದೆಲ್ಲಕ್ಕೂ ಮಿಗಿಲಾಗಿ ಅವನ ಸುರಕ್ಷಿತ ಬಿಡುಗಡೆ ಪಾಕ್ ಮುಂದಾಗಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ,'' ಎಂದು ಹೇಳಿದ್ದಾರೆ. ಇದೇ ವೇಳೆ ಅಭಿನಂದನ್ ಸುರಕ್ಷಿತ ಬಿಡುಗಡೆ ಪ್ರಾರ್ಥಿಸಿ ನೈತಿಕ ಧೈಯ ತುಂಬಿದ ಕೋಟ್ಯಂತರ ದೇಶವಾಸಿಗಳಿಗೆ ಹಾಗೂ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಭಿನಂದನ್ ಅವರ ಪತ್ನಿ ನಿವೃತ್ತ ವಾಯುಪಡೆ ಅಧಿಕಾರಿ ತನ್ವಿ ಮಾರ್ವಾ ಸರಕಾರ ಹಾಗೂ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದು, ಪತಿಯ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.