ನೆಲ್ಲೂರು: ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ಗುಮಾಸ್ತನೋರ್ವನ ಅವ್ಯವಹಾರ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಎಸಿಬಿ, ಇದೀಗ ಮತ್ತೊಂದು ಅಂತಹುದೇ ಪ್ರಕರಣವನ್ನು ಭೇದಿಸಿದೆ.
ಆಂದ್ರಪ್ರದೇಶದ ವಿದ್ಯುತ್ ಪ್ರಸರಣ ನಿಯಮಿತದಲ್ಲಿ ಲೈನ್ ಇನ್ಸ್ಪೆಕ್ಟರ್ ಕೆಲಸ ಮಾಡುತ್ತಿರುವ 56 ವರ್ಷದ ಲಕ್ಷ್ಮೀ ರೆಡ್ಡಿ 100 ಕೋಟಿ ರೂ. ಮೌಲ್ಯದ ಆಸ್ತಿ, ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ರೆಡ್ಡಿ ಅವರಿಗೆ ಸೇರಿದ 5 ಜಾಗದಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಯಲ್ಲಿ ಲಕ್ಷ್ಮೀ ರೆಡ್ಡಿಗೆ ಸೇರಿರುವ ಕೃಷಿ ಭೂಮಿ, ಐಷಾರಾಮಿ ಮನೆ ಸೇರಿದಂತೆ 100 ಕೋಟಿ ರೂ. ಬೆಲೆಬಾಳುವ ಆಸ್ತಿಗಳು ಸಿಕ್ಕಿವೆ. 1993ರಲ್ಲಿ ಕಾವಲ್ಲಿ ಸಬ್ ಸ್ಟೇಷನ್ನಲ್ಲಿ ಸಹಾಯಕನಾಗಿ ವೃತ್ತಿ ಸೇರಿದ ಲಕ್ಷ್ಮೀ ರೆಡ್ಡಿ, 1996ರಲ್ಲಿ ಸಹಾಯಕ ಲೈನ್ಮ್ಯಾನ್ ಆಗಿ ಬಡ್ತಿ ಹೊಂದಿದ್ದಾನೆ. 1997ರಲ್ಲಿ ಲೈನ್ ಮ್ಯಾನ್ ಆಗಿ ನಿಯುಕ್ತಿಗೊಂಡು, 2014ರಿಂದ ಮುಂಗಮುರು ಗ್ರಾಮದಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾವಲ್ಲಿಯಲ್ಲಿರುವ ಲಕ್ಷ್ಮೀ ರೆಡ್ಡಿ ಅವರ ತಂದೆ ಮಲಕೊಂಡ ರೆಡ್ಡಿ ಮನೆ ಸೇರಿದಂತೆ ಆತನ ಸ್ನೇಹಿತನ ಮನೆ ಮೇಲೂ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು. 57.50 ಎಕರೆ ಕೃಷಿ ಜಮೀನಿನ ಪತ್ರ, 6 ಐಷಾರಾಮಿ ಮನೆಗಳು, 2 ಸೈಟ್ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 9.95 ಲಕ್ಷ ರೂ. ಬ್ಯಾಂಕ್ನಲ್ಲಿದ್ದ ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಚೇರಿ ಕೆಲಸಗಳಿಗೆ ಲಂಚ ಪಡೆದು ಇಷ್ಟೊಂದು ದೊಡ್ಡ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರುವ ಸಾಧ್ಯತೆಗಳಿವೆ. ಸಂಸ್ಥೆ ಖರೀದಿಸುವ ತಾಮ್ರದ ವೈರ್ ಸೇರಿದಂತೆ ವಿದ್ಯುತ್ ಸಂಪರ್ಕ ತಂತಿಗಳನ್ನು ಲಕ್ಷ್ಮೀ ರೆಡ್ಡಿ ಮಾರಾಟ ಮಾಡಿ ಹಣ ಸಂಪಾದಿಸಿರುವ ಬಗ್ಗೆಯೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಜಮೀನು, ಮನೆಗಳು ತನ್ನ ಪತ್ನಿ ಹೆಸರಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಂದ್ರಪ್ರದೇಶದ ವಿದ್ಯುತ್ ಪ್ರಸರಣ ನಿಯಮಿತದಲ್ಲಿ ಲೈನ್ ಇನ್ಸ್ಪೆಕ್ಟರ್ ಕೆಲಸ ಮಾಡುತ್ತಿರುವ 56 ವರ್ಷದ ಲಕ್ಷ್ಮೀ ರೆಡ್ಡಿ 100 ಕೋಟಿ ರೂ. ಮೌಲ್ಯದ ಆಸ್ತಿ, ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ರೆಡ್ಡಿ ಅವರಿಗೆ ಸೇರಿದ 5 ಜಾಗದಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಯಲ್ಲಿ ಲಕ್ಷ್ಮೀ ರೆಡ್ಡಿಗೆ ಸೇರಿರುವ ಕೃಷಿ ಭೂಮಿ, ಐಷಾರಾಮಿ ಮನೆ ಸೇರಿದಂತೆ 100 ಕೋಟಿ ರೂ. ಬೆಲೆಬಾಳುವ ಆಸ್ತಿಗಳು ಸಿಕ್ಕಿವೆ. 1993ರಲ್ಲಿ ಕಾವಲ್ಲಿ ಸಬ್ ಸ್ಟೇಷನ್ನಲ್ಲಿ ಸಹಾಯಕನಾಗಿ ವೃತ್ತಿ ಸೇರಿದ ಲಕ್ಷ್ಮೀ ರೆಡ್ಡಿ, 1996ರಲ್ಲಿ ಸಹಾಯಕ ಲೈನ್ಮ್ಯಾನ್ ಆಗಿ ಬಡ್ತಿ ಹೊಂದಿದ್ದಾನೆ. 1997ರಲ್ಲಿ ಲೈನ್ ಮ್ಯಾನ್ ಆಗಿ ನಿಯುಕ್ತಿಗೊಂಡು, 2014ರಿಂದ ಮುಂಗಮುರು ಗ್ರಾಮದಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾವಲ್ಲಿಯಲ್ಲಿರುವ ಲಕ್ಷ್ಮೀ ರೆಡ್ಡಿ ಅವರ ತಂದೆ ಮಲಕೊಂಡ ರೆಡ್ಡಿ ಮನೆ ಸೇರಿದಂತೆ ಆತನ ಸ್ನೇಹಿತನ ಮನೆ ಮೇಲೂ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು. 57.50 ಎಕರೆ ಕೃಷಿ ಜಮೀನಿನ ಪತ್ರ, 6 ಐಷಾರಾಮಿ ಮನೆಗಳು, 2 ಸೈಟ್ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 9.95 ಲಕ್ಷ ರೂ. ಬ್ಯಾಂಕ್ನಲ್ಲಿದ್ದ ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಚೇರಿ ಕೆಲಸಗಳಿಗೆ ಲಂಚ ಪಡೆದು ಇಷ್ಟೊಂದು ದೊಡ್ಡ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರುವ ಸಾಧ್ಯತೆಗಳಿವೆ. ಸಂಸ್ಥೆ ಖರೀದಿಸುವ ತಾಮ್ರದ ವೈರ್ ಸೇರಿದಂತೆ ವಿದ್ಯುತ್ ಸಂಪರ್ಕ ತಂತಿಗಳನ್ನು ಲಕ್ಷ್ಮೀ ರೆಡ್ಡಿ ಮಾರಾಟ ಮಾಡಿ ಹಣ ಸಂಪಾದಿಸಿರುವ ಬಗ್ಗೆಯೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಜಮೀನು, ಮನೆಗಳು ತನ್ನ ಪತ್ನಿ ಹೆಸರಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.