ಆ್ಯಪ್ನಗರ

ಪಾಕ್‌ ದಾಳಿಗೆ ಪ್ರತೀಕಾರ: ಹೇಳೋದಲ್ಲ, ಮಾಡಿ ತೋರಿಸ್ತೀವಿ ಎಂದ ಸೇನೆ

ಕದನ ವಿರಾಮ ಉಲ್ಲಂಘಿಸಿ ನಾಲ್ವರು ಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಕ್ಕೆ 'ಸದ್ದಿಲ್ಲದೇ ಉತ್ತರ' ನೀಡುತ್ತೇವೆ ಎಂದು ಭಾರತೀಯ ಸೇನೆ ಹೇಳಿದೆ.

Vijaya Karnataka Web 5 Feb 2018, 4:28 pm
ಹೊಸದಿಲ್ಲಿ: ಕದನ ವಿರಾಮ ಉಲ್ಲಂಘಿಸಿ ನಾಲ್ವರು ಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಕ್ಕೆ 'ಸದ್ದಿಲ್ಲದೇ ಉತ್ತರ' ನೀಡುತ್ತೇವೆ ಎಂದು ಭಾರತೀಯ ಸೇನೆ ಹೇಳಿದೆ.
Vijaya Karnataka Web action will speak for itself army on pakistans aggression killing 4 soldiers in jk
ಪಾಕ್‌ ದಾಳಿಗೆ ಪ್ರತೀಕಾರ: ಹೇಳೋದಲ್ಲ, ಮಾಡಿ ತೋರಿಸ್ತೀವಿ ಎಂದ ಸೇನೆ


'ಪ್ರತೀಕಾರದ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಕೆಲಸವೇ ಉತ್ತರ ನೀಡುತ್ತದೆ' ಎಂದು ಸೇನಾ ಸಿಬ್ಬಂದಿಗಳ ಉಪಮುಖ್ಯಸ್ಥ ಶರತ್‌ ಚಂದ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಭಾನುವಾರ ಪಾಕ್‌ ಪಡೆಗಳು ನಡೆಸಿದ ಅಪ್ರಚೋದಿತ ಶೆಲ್‌ ದಾಳಿಗೆ ಒಬ್ಬ ಸೇನಾಧಿಕಾರಿ ಸೇರಿದಂತೆ ನಾಲ್ವರು ಯೋಧರು ಬಲಿಯಾಗಿದ್ದರು.

ಕಳೆದ 40 ದಿನಗಳಲ್ಲಿ ಪಾಕ್‌ ದಾಳಿಗೆ ಬಲಿಯಾದ ಎರಡನೇ ಕ್ಯಾಪ್ಟನ್‌ ಕಪಿಲ್‌ ಕುಂಡು ಅವರಾಗಿದ್ದಾರೆ.

ಪಾಕಿಸ್ತಾನದ ಕೃತ್ಯಗಳನ್ನು ಕ್ಷಮಿಸುವುದಿಲ್ಲ. ಅದರ ದುಸ್ಸಾಹಸ ದುಬಾರಿಯಾಗಿ ಪರಿಣಮಿಸಲಿದೆ ಎಂದು ಗೃಹಖಾತೆ ರಾಜ್ಯಸಚಿವ ಹನ್ಸ್‌ರಾಜ್ ಆಹಿರ್‌ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ