ಆ್ಯಪ್ನಗರ

ಜಗನ್‌ ಪಕ್ಷ ಸೇರಿದ ನಟ ಅಲಿ

ಅಲಿ ಆಂಧ್ರಪ್ರದೇಶದ ರಾಜಮುಂಡ್ರಿಯವರು. ಅಧ್ಯಕ್ಷ ಜಗನ್ಮೋಹನ ರೆಡ್ಡಿ ಅವರು ಎಲ್ಲರನ್ನೂ ಪಕ್ಷಕ್ಕೆ ಬರ ಮಾಡಿಕೊಂಡರು.

Vijaya Karnataka 12 Mar 2019, 5:00 am
ಹೈದರಾಬಾದ್‌: ಲೋಕಸಭೆ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಅನೇಕ ನಾಯಕರು ಎನ್‌.ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ ಬಿಟ್ಟು ವೈ.ಎಸ್‌.ರಾಜಶೇಖರ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.
Vijaya Karnataka Web ali

ಮಾಜಿ ಶಾಸಕರಾದ ಚಲ್ಲಾ ರಾಮಕೃಷ್ಣ ರೆಡ್ಡಿ ಹಾಗೂ ಮೊದುಗುಲ ವೇಣುಗೋಪಾಲ ರೆಡ್ಡಿ, ಮುಖಂಡರಾದ ದಾದಿ ವೀರಭದ್ರರಾವ್‌, ಅವರ ಪುತ್ರ ದಾದಿ ರತ್ನಾಕರ ಸೋಮವಾರ ವೈಎಸ್‌ಆರ್‌ ಪಕ್ಷ ಸೇರಿದ್ದಾರೆ. ಖ್ಯಾತ ಹಾಸ್ಯ ನಟ ಅಲಿ ಜಗನ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲಿ ಆಂಧ್ರಪ್ರದೇಶದ ರಾಜಮುಂಡ್ರಿಯವರು. ಅಧ್ಯಕ್ಷ ಜಗನ್ಮೋಹನ ರೆಡ್ಡಿ ಅವರು ಎಲ್ಲರನ್ನೂ ಪಕ್ಷಕ್ಕೆ ಬರ ಮಾಡಿಕೊಂಡರು. ಮಾಜಿ ಶಾಸಕಿ ಹಾಗೂ ನಟಿ ಜಯಸುಧಾ ಅವರು ತಮ್ಮ ಪುತ್ರ ನಿಹಾರ್‌ ಕಪೂರ್‌ ಜತೆ ಟಿಡಿಪಿ ತೊರೆದು ಜಗನ್‌ ಪಕ್ಷ ಸೇರಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ನ ಮಾಜಿ ಶಾಸಕಿ ಗೌರು ಚರಿತ್ರಾ ರೆಡ್ಡಿ ಹಾಗೂ ಅವರ ಪತಿ ಗೌರು ವೆಂಕಟ ರೆಡ್ಡಿ ಶನಿವಾರ ಟಿಡಿಪಿ ಸೇರಿದ್ದಾರೆ.
ಪವನ್‌ ಪಟ್ಟಿ ರೆಡಿ: ನಟ ಪವನ್‌ ಕಲ್ಯಾಣ್‌ ಅವರ ಜನ ಸೇನಾ ಪಾರ್ಟಿ ಲೋಕಸಭೆ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಹೆಸರನ್ನು ಸೋಮವಾರ ಪ್ರಕಟಿಸಿದೆ. ರಾಜಮಹೆಂದ್ರವರಂ (ಗ್ರಾಮಿಣ) ಕ್ಷೇತ್ರದಿಂದ ಬಿಜೆಪಿಯ ಮಾಜಿ ಶಾಸಕ ಅಕುಲ ಸತ್ಯನಾರಾಯಣ ಹಾಗೂ ಅಮಲಾಪುರಂ (ಮೀಸಲು) ಕ್ಷೇತ್ರದಿಂದ ನಿವೃತ್ತ ಅಧಿಕಾರಿ ಡಿ.ಎಂ.ಆರ್‌. ಶೇಖರ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ''ಏಳು ಲೋಕಸಭಾ ಕ್ಷೇತ್ರ ಹಾಗೂ 32 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ. ಎಲ್ಲ ಅಭ್ಯರ್ಥಿಗಳ ಪಟ್ಟಿ ಸಿದ್ಧವಿದ್ದು, ಎರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು,'' ಎಂದು ಪವನ್‌ ಕಲ್ಯಾಣ್‌ ಟ್ವೀಟ್‌ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಏ.11ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ