ಆ್ಯಪ್ನಗರ

ಬಾಬ್ರಿ: ಆಡ್ವಾಣಿ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಇಂದು

ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ಕೋರ್ಟ್‌, ಬಿಜೆಪಿ ವರಿಷ್ಠ ಎಲ್‌.ಕೆ.ಆಡ್ವಾಣಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಆರೋಪಪಟ್ಟಿ ಸಲ್ಲಿಸುವಂತೆ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲಲಿತ್‌ ಕುಮಾರ್‌ ಸಿಂಗ್‌ ಅವರಿಗೆ ಆದೇಶಿಸಿದೆ.

Vijaya Karnataka Web 25 May 2017, 8:15 am

ಲಖನೌ: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ಕೋರ್ಟ್‌, ಬಿಜೆಪಿ ವರಿಷ್ಠ ಎಲ್‌.ಕೆ.ಆಡ್ವಾಣಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಆರೋಪಪಟ್ಟಿ ಸಲ್ಲಿಸುವಂತೆ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲಲಿತ್‌ ಕುಮಾರ್‌ ಸಿಂಗ್‌ ಅವರಿಗೆ ಆದೇಶಿಸಿದೆ. ಗುರುವಾರ ಈ ಸಂಬಂಧ ಪರಿಷ್ಕೃತ ಆರೋಪಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಕಳೆದ ತಿಂಗಳು ಸುಪ್ರೀಂಕೋರ್ಟ್‌, ಆಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಕೆಲ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಪ್ರಕರಣವನ್ನು ಅಲಹಾಬಾದ್‌ ಹೈಕೋರ್ಟ್‌ ಕೈಬಿಟ್ಟಿದ್ದನ್ನು ಪುನರಾರಂಭಿಸುವಂತೆ ಆದೇಶಿಸಿತ್ತು. ಹೈಕೋರ್ಟ್‌ ನಿಲುವು ಪ್ರಶ್ನಿಸಿ ಈ ಹಿಂದೆ ಸಿಬಿಐ ಸುಪ್ರೀಂ ಮೊರೆ ಹೋಗಿತ್ತು.

ಈ ಮಧ್ಯೆ ಸಿಬಿಐ ವಿಶೇಷ ಕೋರ್ಟ್‌, ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಶಿವಸೇನೆ ಸಂಸದ ಸತೀಶ್‌ ಪ್ರಧಾನ್‌ ಅವರಿಗೆ ಜಾಮೀನು ನೀಡಿದೆ. ''20,000 ಸಾವಿರ ರೂ.ಮೊತ್ತದ ಎರಡು ಶ್ಯೂರಿಟಿ ಹಾಗೂ ಇಷ್ಟೇ ಮೊತ್ತದ ವೈಯಕ್ತಿಕ ಬಾಂಡ್‌ ಪಡೆಯುವಂತೆ ಸೂಚಿಸಿ, ನ್ಯಾಯಾಧೀಶ ಎಸ್‌.ಕೆ.ಯಾದವ್‌ ಜಾಮೀನು ಮಂಜೂರು ಮಾಡಿದರು.

ಮೇ 20ರಿಂದ ವಿಚಾರಣೆ ನಡೆಸುತ್ತಿರುವ ಕೋರ್ಟ್‌, ಈಗಾಗಲೇ ಆರೋಪಿಗಳಾಗಿರುವ ವಿಎಚ್‌ಪಿ ಮುಖಂಡರಾದ ರಾಮ್‌ ವಿಲಾಸ್‌ ವೇದಾಂತಿಗೆ (59) ಚಂಪತ್‌ ರಾಯ್‌ (71), ಬೈಕುಂತ್‌ ಲಾಲ್‌ ಶರ್ಮಾ (88), ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ (79) ಮತ್ತು ಧರ್ಮದಾಸ್‌ ಮಹಾರಾಜ್‌ (68) ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆರನೇ ಆರೋಪಿ ಸತೀಶ್‌ ಪ್ರಧಾನ್‌ಗೆ ಈ ಬೇಲ್‌ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ