ಆ್ಯಪ್ನಗರ

ಆದಿತ್ಯ ಆಳ್ವ ಬೆನ್ನತ್ತಿದ ಸಿಸಿಬಿ, ಮುಂಬಯಿಯ ವಿವೇಕ್‌ ಒಬೆರಾಯ್‌‌ ಮನೆಯಲ್ಲಿ ಶೋಧ

ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವಾನ ಇರುವಿಕೆ ಕುರಿತು ವಿವೇಕ್‌ ಒಬೆರಾಯ್‌ಗೆ ಮಾಹಿತಿ ಇರುವ ಅನುಮಾನ ಇದ್ದು, ನ್ಯಾಯಾಲಯದಿಂದ ವಾರೆಂಟ್ ಪಡೆದ ಸಿಸಿಬಿ ಪೊಲೀಸರು ಅವರ ನಿವಾಸದಲ್ಲಿ ಶೋಧ ನಡೆಸಿದರು.

Vijaya Karnataka 15 Oct 2020, 3:22 pm
ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಆಳ್ವ, ತನ್ನ ಸಂಬಂಧಿ ಹಾಗೂ ಬಾಲಿವುಡ್‌ ನಟ ವಿವೇಕ್‌ ಓಬೆರಾಯ್‌ ಮನೆಯಲ್ಲಿ ಅಡಗಿಕೊಂಡಿರಬಹುದು ಎಂಬ ಅನುಮಾನದ ಮೇಲೆ ಗುರುವಾರ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
Vijaya Karnataka Web Bengaluru CCB search actor Vivek Oberois house
ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಹಾಗೂ ಆದಿತ್ಯ ಆಳ್ವ


ಆದಿತ್ಯ ಆಳ್ವಾಗೆ ಅವರ ಅಕ್ಕನ ಗಂಡ, ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಮುಂಬಯಿ ನಿವಾಸದಲ್ಲಿ ಆಶ್ರಯ ನೀಡಿರುವ ಶಂಕೆಯ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಮುಂಬಯಿಗೆ ತೆರಳಿ ಅವರ ಮನೆಯಲ್ಲಿ ಶೋಧ ನಡೆಸಿದರು.

ಆದಿತ್ಯ ಆಳ್ವಾನ ಇರುವಿಕೆ ಕುರಿತು ವಿವೇಕ್‌ ಒಬೆರಾಯ್‌ಗೆ ಮಾಹಿತಿ ಇರುವ ಅನುಮಾನ ಇದ್ದು, ನ್ಯಾಯಾಲಯದಿಂದ ವಾರೆಂಟ್ ಪಡೆದು ಸಿಸಿಬಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡರು.

ಆದಿತ್ಯ ಆಳ್ವ, ಶಿವಪ್ರಕಾಶ್‌ ಪತ್ತೆಗೆ ಸಿಸಿಬಿಯಿಂದ ಲುಕ್‌ಔಟ್‌ ನೋಟಿಸ್‌ ಜಾರಿ

“ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ವಿವೇಕ್‌ ಒಬೆರಾಯ್‌ ಆತನ ಸಂಬಂಧಿಯಾಗಿದ್ದು, ಆತ ಅಲ್ಲಿದ್ದಾನೆ ಎಂಬ ಮಾಹಿತಿ ನಮಗೆ ಬಂದಿತ್ತು. ಹಾಗಾಗಿ ನಾವು ಪರಿಶೀಲನೆ ಮಾಡಬೇಕಾಗಿತ್ತು. ಈ ಕಾರಣಕ್ಕೆ ಕೋರ್ಟ್‌ನಿಂದ ವಾರಂಟ್‌ ಪಡೆದು ಕ್ರೈಂ ಬ್ರ್ಯಾಂಚ್‌ ತಂಡ ಅವರ ಮುಂಬಯಿ ನಿವಾಸಕ್ಕೆ ತೆರಳಿತ್ತು,” ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಕಳೆದ ತಿಂಗಳು ಆದಿತ್ಯ ಆಳ್ವ ಅವರ ಬೆಂಗಳೂರು ನಿವಾಸದಲ್ಲಿ ಶೋಧ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ