ಆ್ಯಪ್ನಗರ

ಯೋಗಿ ಆದಿತ್ಯನಾಥ್‌ಗೆ 'ಪ್ರೀತಿ' ಪದದ ಅರ್ಥ ತಿಳಿದಿದೆಯೇ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪ್ರೀತಿ ಎಂದರೆ ಏನು ತಿಳಿದಿದಿಯೇ? ಹೀಗೇಂದು ರಾಜ್ಯ ಸಭಾ ಸದಸ್ಯ ಮತ್ತು ಸಮಾಜವಾದಿ ಪಕ್ಷದ ಹಿರೀಯ ಮುಖಂಡ ನರೇಶ್‌ ಅಗರ್ವಾಲ್‌ ಪ್ರಶ್ನಿಸಿದ್ದಾರೆ.

TNN 6 Nov 2017, 8:24 pm
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪ್ರೀತಿ ಎಂದರೆ ಏನು ತಿಳಿದಿದಿಯೇ? ಹೀಗೇಂದು ರಾಜ್ಯ ಸಭಾ ಸದಸ್ಯ ಮತ್ತು ಸಮಾಜವಾದಿ ಪಕ್ಷದ ಹಿರೀಯ ಮುಖಂಡ ನರೇಶ್‌ ಅಗರ್ವಾಲ್‌ ಪ್ರಶ್ನಿಸಿದ್ದಾರೆ.
Vijaya Karnataka Web adityanath will not know what love is sp leader on anti romeo squad
ಯೋಗಿ ಆದಿತ್ಯನಾಥ್‌ಗೆ 'ಪ್ರೀತಿ' ಪದದ ಅರ್ಥ ತಿಳಿದಿದೆಯೇ?


ರಾಜ್ಯದಲ್ಲಿರುವ ಆ್ಯಂಟಿ ರೋಮಿಯೋ ತಂಡದ ಕುರಿತು ವಿರೋಧ ವ್ಯಕ್ತ ಪಡಿಸಿರುವ ನರೇಶ್‌, ಮದುವೆಯಾಗದೇ ಉಳಿದ ಸನ್ಯಾಸಿಗೆ ಪ್ರೀತಿ ಅಂದರೆ ಹೇಗೆ ತಿಳಿಯುತ್ತದೆ, ಅದರ ಅರ್ಥವೂ ಅವರಿಗೆ ತಿಳಿದಿಲ್ಲ, ರೋಮಿಯೋ ಯಾರೆಂದೂ ಸಹ ಆತನಿಗೆ ಗೊತ್ತಿರಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಯುವಜನತೆಯ ಖಾಸಗಿ ವಿಚಾರದಲ್ಲಿ ಸರಕಾರ ಮೂಗು ತೂರಿಸಬೇಕಾದ ಅವಶ್ಯಕತೆ ಇಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಯುವ ಜನಾಂಗವೇ ಬಿಜೆಪಿಯನ್ನು ಕಿತ್ತೆಸೆಯುತ್ತದೆ ಎಂದು ನರೇಶ್‌ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ತನ್ನ ಪಕ್ಷದ ಕಾರ್ಯಕರ್ತರಿಗೆ ತಾನೆ ದೇವರು ಎಂದು ಹೇಳಿರುವ ನರೇಶ್‌, ಒಂದು ವೇಳೆ ಇವರಿಗೆ ಸರಕಾರ ತೊಂದರೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಪಕ್ಷ ಆಡಳಿತದಲ್ಲಿದ್ದರೂ ತನ್ನ ಬೆಂಬಲಿಗರ ಬೆಳವಣಿಗೆಗೆ ಪೂರಕವಾದ ಯಾವುದೇ ಕೆಲಸವನ್ನು ಸರಕಾರ ಮಾಡುತ್ತಿಲ್ಲ, ಬದಲಾಗಿ ಅವರ ಹಕ್ಕನ್ನೇ ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ನರೇಶ್‌ ಆರೋಪಿಸಿದ್ದಾರೆ.

adityanath will not know what love is: sp leader on 'anti-romeo' squad

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ