ಆ್ಯಪ್ನಗರ

ಅದ್ನಾನ್‌ ಸಮಿ- ಅಬ್ದುಲ್ಲಾ ಟ್ವೀಟ್‌ವಾರ್‌

ಗಾಯಕ ಅದ್ನಾನ್‌ ಸಮಿ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ನಡುವೆ ಟ್ವೀಟ್‌ ವಾರ್‌ ನಡೆದಿದೆ.

TNN 8 Oct 2017, 10:25 pm

ಹೊಸದಿಲ್ಲಿ: ಶ್ರೀನಗರದಲ್ಲಿ ಶನಿವಾರ ಆಯೋಜಿತವಾಗಿದ್ದ ಗಾಯಕ ಅದ್ನಾನ್‌ ಸಮಿಯ ಸಂಗೀತ ಕಚೇರಿಯ ಫೋಟೊ ಸಮಿ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ನಡುವಿನ ಟ್ವಿಟ್ಟರ್‌ ಸಮರಕ್ಕೆ ಕಾರಣವಾಗಿದೆ.

Vijaya Karnataka Web adnan sami omar abdullah spat over formers kashmir concert
ಅದ್ನಾನ್‌ ಸಮಿ- ಅಬ್ದುಲ್ಲಾ ಟ್ವೀಟ್‌ವಾರ್‌


ಟ್ವಿಟ್ಟರ್‌ ಬಳಕೆದಾರರೊಬ್ಬರು ಸಮಿ ಗಾನಗೋಷ್ಠಿ ಆರಂಭಕ್ಕೂ ಮುನ್ನದ ಖಾಲಿ ಕುರ್ಚಿಗಳಿದ್ದ ಫೋಟೋ ಹಾಕಿ, 'ಕಾರ್ಯಕ್ರಮ ಆರಂಭಕ್ಕೂ ಮುನ್ನ ' ಎಂದು ಕ್ಯಾಪ್ಶನ್‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಒಮರ್‌, ''ಇದು ನಿಜವಾಗಲೂ ಶೋಚನೀಯ. ಇಷ್ಟು ಹೊತ್ತಿಗೆ ಆ ಖಾಲಿ ಸೀಟುಗಳು ಭರ್ತಿಯಾಗಿರಬಹುದು ಎಂದು ಭಾವಿಸುತ್ತೇನೆ. ಸಂಜೆಯೊಂದನ್ನು ಜನರಿಗೆ ಶಾಂತಿಯುತ ಪರಿಸರವಾಗಿ ಸಂಗೀತ ಬದಲಾಯಿಸಬಲ್ಲದು,'' ಎಂದರು.

ಆದರೆ ಇದು ಸಮಿಗೆ ಸರಿ ಬರಲಿಲ್ಲ. ವಾಗ್ಯುದ್ಧಕ್ಕೆ ಇಳಿದ ಸಮಿ, ''ನೀವು ಮಾಜಿ ಮುಖ್ಯಮಂತ್ರಿ. ಸಂಗೀತಗೋಷ್ಠಿಗೆ ನೀವಿಷ್ಟು ಧೃತಿಗೆಡಬಾರದು. ನಿಮಗೆ ಖಾಲಿ ಕುರ್ಚಿ ಎಂದು ಹೇಳಿದ ಸುದ್ದಿ ಮೂಲ ಸರಿಯಿಲ್ಲ. ಇಲ್ಲಿದೆ ನೋಡಿ ಫೋಟೋಸ್‌,'' ಎಂದು ಜನರಿಂದ ತುಂಬಿದ್ದ ಗೋಷ್ಠಿಯ ಫೋಟೊಗಳನ್ನು ಸಮಿ ಹಾಕಿದ್ದಾರೆ.

ಇದಕ್ಕೆ ಉತ್ತರಿಸಿದ ಅಬ್ದುಲ್ಲಾ,''ನಿಮ್ಮ ಸಂಗೀತ ಕಚೇರಿಗೆ ಜನ ತುಂಬುತ್ತಾರೆ ಎಂದು ನಂಬಿಕೆ ಹೊಂದುವುದು ನನ್ನನ್ನು ಹೇಗೆ ಧೃತಿಗೆಡಿಸುತ್ತದೆ? ಜನ ಸಂಗೀತಸಂಜೆಯಿಂದ ಖುಷಿಗೊಂಡರೆಂದು ನನಗೆ ಸಂತಸವಾಗಿದೆ. ನಾನು ಒಂದು ಕಾಲದಲ್ಲಿ ನಿಮ್ಮ ಸಂಗೀತ ಇಷ್ಟಪಡುತ್ತಿದ್ದೆ,'' ಎಂದಿದ್ದಾರೆ.

ಇದು ಹೀಗೇ ಮುಂದುವರಿದು, ಕಡೆಗೆ ಸಮಿ ಅಬ್ದುಲ್ಲಾರನ್ನು 'ವಿಕೃತ, ದಾರುಣ ಸೋಲುಂಡವರು' ಎಂದು ಹೀಯಾಳಿಸಿದ್ದಾರೆ. ಅದಕ್ಕೆ ಮಾಜಿ ಸಿಎಂ, 'ಸಮಿಗೆ ಗಾಸಿಪ್‌ ಕಾಲಂನಲ್ಲಿ ಹೆಸರು ಕಂಡುಕೊಳ್ಳುವ ಆಸೆ' ಎಂದು ತಿರುಗೇಟು ನೀಡಿದ್ದಾರೆ.

ಅಂತೂ ಸೇರಿಗೆ ಸವ್ವಾಸೇರು ಎಂದು ಇವರು ನಡೆಸಿದ ಕಾಗೆಜಗಳ ಹಲ ಟ್ವಿಟ್ಟರಿಗರಿಗೆ ಬಿಟ್ಟಿ ಮನರಂಜನೆ ನೀಡಿದೆ.

Adnan Sami, Omar Abdullah spat over former’s Kashmir concert

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ