ಹೊಸದಿಲ್ಲಿ: ಬಿಜೆಪಿ ಅಬ್ಬರದ ಮುಂದೆ ನೆಲಕಚ್ಚಿರುವ ಕಾಂಗ್ರೆಸ್ಗೆ ಕಾಯಕಲ್ಪ ನೀಡಬೇಕು ಎನ್ನುವ ತಮ್ಮ ಪ್ರತಿಪಾದನೆಯನ್ನು ಪಕ್ಷದ 'ಭಿನ್ನ ಧೋರಣೆಯ ನಾಯಕರು' ಪುನರುಚ್ಚರಿಸಿದ್ದಾರೆ.
"ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಪಕ್ಷದ ಒಳಿತಿಗಾಗಿ ಮಾಡಿರುವ ಸಲಹೆಗಳು ಅವು. ಅವುಗಳಿಗೆ ನಾವು ಬದ್ಧರಾಗಿದ್ದೇವೆ," ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸ್ಪಷ್ಟ ಪಡಿಸಿದ್ದಾರೆ.
"ಪಕ್ಷವು ಐತಿಹಾಸಿಕ ಕುಸಿತ ಕಂಡಿದೆ. ಅದನ್ನು ಪುನರುಜ್ಜೀವನಗೊಳಿಸಬೇಕಾದ ತುರ್ತು ಅಗತ್ಯ ಇದೆ. ಪಕ್ಷವನ್ನು ಸಬಲಗೊಳಿಸುವ ಕಾರ್ಯದಲ್ಲಿ ನಾವೆಲ್ಲರೂ ಪಾಲುದಾರರಾಗಲು ಬಯಸುತ್ತೇವೆ. ಸೋನಿಯಾ ನಾಯಕತ್ವವನ್ನು ಟೀಕಿಸದೇ ಅವರ ಇದುವರೆಗಿನ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದೇವೆ," ಎಂದು ಸಿಬಲ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ; ಕಾಂಗ್ರೆಸ್ ಮುಖಂಡನ ಆಗ್ರಹ
"ಪಕ್ಷದಲ್ಲಿ ಆಗಬೇಕಾಗಿರುವ ಸಂಘಟನಾತ್ಮಕ ಸುಧಾರಣೆ ಕುರಿತು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವೆಯೇ ವಿನಾ ನಾಯಕತ್ವ ಬದಲಾವಣೆಗೆ ಆಗ್ರಹಿಸಿಲ್ಲ. ನಮ್ಮ ಪತ್ರವನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ," ಎಂದು ಪತ್ರಕ್ಕೆ ಸಹಿ ಹಾಕಿರುವ ನಾಯಕರಲ್ಲಿ ಒಬ್ಬರಾದ ಜಿತಿನ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
"ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಪಕ್ಷದ ಒಳಿತಿಗಾಗಿ ಮಾಡಿರುವ ಸಲಹೆಗಳು ಅವು. ಅವುಗಳಿಗೆ ನಾವು ಬದ್ಧರಾಗಿದ್ದೇವೆ," ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸ್ಪಷ್ಟ ಪಡಿಸಿದ್ದಾರೆ.
"ಪಕ್ಷವು ಐತಿಹಾಸಿಕ ಕುಸಿತ ಕಂಡಿದೆ. ಅದನ್ನು ಪುನರುಜ್ಜೀವನಗೊಳಿಸಬೇಕಾದ ತುರ್ತು ಅಗತ್ಯ ಇದೆ. ಪಕ್ಷವನ್ನು ಸಬಲಗೊಳಿಸುವ ಕಾರ್ಯದಲ್ಲಿ ನಾವೆಲ್ಲರೂ ಪಾಲುದಾರರಾಗಲು ಬಯಸುತ್ತೇವೆ. ಸೋನಿಯಾ ನಾಯಕತ್ವವನ್ನು ಟೀಕಿಸದೇ ಅವರ ಇದುವರೆಗಿನ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದೇವೆ," ಎಂದು ಸಿಬಲ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ; ಕಾಂಗ್ರೆಸ್ ಮುಖಂಡನ ಆಗ್ರಹ
"ಪಕ್ಷದಲ್ಲಿ ಆಗಬೇಕಾಗಿರುವ ಸಂಘಟನಾತ್ಮಕ ಸುಧಾರಣೆ ಕುರಿತು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವೆಯೇ ವಿನಾ ನಾಯಕತ್ವ ಬದಲಾವಣೆಗೆ ಆಗ್ರಹಿಸಿಲ್ಲ. ನಮ್ಮ ಪತ್ರವನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ," ಎಂದು ಪತ್ರಕ್ಕೆ ಸಹಿ ಹಾಕಿರುವ ನಾಯಕರಲ್ಲಿ ಒಬ್ಬರಾದ ಜಿತಿನ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.