ಆ್ಯಪ್ನಗರ

ಮೂರು ವರ್ಷಗಳ ಬಳಿಕ ಕನ್ನಯ್ಯ, ಇತರ 9 ಮಂದಿ ವಿರುದ್ಧ ರಾಷ್ಟ್ರದ್ರೋಹದ ಆರೋಪ ಪಟ್ಟಿ

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಮತ್ತು ಇತರ 9 ಮಂದಿ ವಿರುದ್ಧ ಪ್ರಾಥಮಿಕ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದ್ದು, ಮೂರು ವರ್ಷಗಳ ಬಳಿಕ ಇದೀಗ ರಾಷ್ಟ್ರದ್ರೋಹ ಪ್ರಕರಣದ ವಿಚಾರಣೆಗೆ ಚಾಲನೆ ನೀಡಲಾಗಿದೆ.

Vijaya Karnataka Web 14 Jan 2019, 12:37 pm

ಹೈಲೈಟ್ಸ್‌:

  • ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆಗೆ ಅಗತ್ಯ ಅನುಮತಿಗಳನ್ನು ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಮುಂದುವರಿಯಲು ಅನುಮತಿಯಿಲ್ಲ ಎಂದು ತಿಳಿಸಲಾಗಿತ್ತು.
  • 'ಆದರೆ ಇದನ್ನು ಒಪ್ಪದ ಕನ್ನಯ್ಯ ಪೊಲೀಸರ ಜತೆ ವಾಗ್ವಾದಕ್ಕಿಳಿದ. ಬಳಿಕ ಘೋಷಣೆ ಕೂಗುತ್ತ ಗುಂಪನ್ನು ಮುಂದಕ್ಕೆ ಕರೆದೊಯ್ದ' ಎಂದು ಆರೋಪ ಪಟ್ಟಿ ಹೇಳಿದೆ.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿವಿಯ (ಜೆಎನ್‌ಯು) ಕೆಲವು ವಿದ್ಯಾರ್ಥಿಗಳ ಮೇಲೆ ಹೂಡಲಾದ ರಾಷ್ಟ್ರದ್ರೋಹ ಪ್ರಕರಣದ ವಿಚಾರಣೆಯನ್ನು ದಿಲ್ಲಿ ಪೊಲೀಸರು ಬರೋಬ್ಬರಿ ಮೂರು ವರ್ಷಗಳ ಬಳಿಕ ಆರಂಭಿಸಿದ್ದಾರೆ.
ದಿಲ್ಲಿ ಪೊಲೀಸರ ವಿಶೇಷ ತನಿಖಾ ದಳ ತನ್ನ ವಿಚಾರಣೆಯನ್ನು ಮುಗಿಸಿದ್ದು ರಾಷ್ಟ್ರದ್ರೋಹ ಪ್ರಕರಣದ ಮುಂದಿನ ಹಂತದ ವಿಚಾರಣೆಗೆ ದಿಲ್ಲಿ ಪೊಲೀಸ್ ಆಯುಕ್ತರ ಅನುಮತಿ ಕೇಳಿದೆ. ಜೆನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್, ಸಯ್ಯದ್ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ 10 ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಪೊಲೀಸರು ಸಜ್ಜಾಗಿದ್ದಾರೆ.

2018ರ ಸೆಪ್ಟೆಂಬರ್ 12ರಂದು ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಮೊದಲು ಪ್ರಕಟವಾದ ವರದಿಯಂತೆ, ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಇತರರು ಕಾಶ್ಮೀರಿ ನಿವಾಸಿಗಳಾಗಿದ್ದಾರೆ. ಆಖಿಬ್ ಹುಸೇನ್, ಮುಜೀಬ್ ಹುಸೇನ್, ಮುನೀಬ್ ಹುಸೇನ್, ಉಮರ್ ಗುಲ್, ರಯೀಸ್ ರಸೂಲ್, ಬಶರತ್ ಆಲಿ ಮತ್ತು ಖಾಲಿದ್ ಬಶೀರ್ ಭಟ್ ಇತರ ಆರೋಪಿಗಳು.

ಪಟಿಯಾಲಾ ಹೌಸ್ ಕೋರ್ಟಿನಲ್ಲಿ ಇಂದು ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.

ತನಿಖಾ ವರದಿ ಪ್ರಕಾರ, ಫೆಬ್ರವರಿ 9ರಂದು ಪ್ರತಿಭಟನೆಯ ನೇತೃತ್ವವನ್ನು ಕನ್ನಯ್ಯ ವಹಿಸಿದ್ದ. ಜೆಎನ್‌ಯುದಲ್ಲಿ ಯಾವುದೇ ಕಾರ್ಯಕ್ರಮ ಏರ್ಪಡಿಸಬೇಕಿದ್ದರೂ ಮೊದಲು ಪೊಲೀಸರ ಅನುಮತಿ ಪಡೆಯಬೇಕಿದ್ದು, ಆ ಪ್ರಕ್ರಿಯೆ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಗುಂಪನ್ನು ತಡೆದು, ಅನುಮತಿ ಪಡೆದಿಲ್ಲ ಎಂಬುದನ್ನು ತಿಳಿಸಲಾಗಿತ್ತು.

'ಆಗ ಕನ್ನಯ್ಯ ಮುಂದೆ ಬಂದು ಭದ್ರತಾ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ. ಬಳಿಕ ಘೋಷಣೆಗಳನ್ನು ಕೂಗುತ್ತ ಗುಂಪನ್ನು ಮುನ್ನಡೆಸಿದ' ಎಂದು ಆರೋಪ ಪಟ್ಟಿ ಹೇಳಿದೆ.

ವೀಡಿಯೋ: ಕನ್ನಯ್ಯ ಮತ್ತು ಇತರ 9 ಮಂದಿ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ