ಆ್ಯಪ್ನಗರ

ಅಯೋಧ್ಯೆ ಭೂಮಿ ಪೂಜೆ ಬೆನ್ನಲ್ಲಿಯೇ ಮಥುರಾ ಕೃಷ್ಣ ಜನ್ಮಭೂಮಿ ವಿಮೋಚನೆಗೆ ಟ್ರಸ್ಟ್‌ ಸ್ಥಾಪನೆ

ಅಯೋಧ್ಯೆಯಲ್ಲಿ ಐದು ಶತಮಾನಗಳ ಸುದೀರ್ಘ ಹೋರಾಟದ ಬಳಿಕ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಚಾಲನೆ ದೊರೆತ ಬೆನ್ನಲ್ಲೇ, ಮಥುರಾದಲ್ಲೂ 'ಕೃಷ್ಣ ಜನ್ಮಭೂಮಿ ವಿಮೋಚನಾ ಚಳವಳಿ' ಕಾವು ತೀವ್ರವಾಗಿದೆ. ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ್‌ ಎಂಬ ಹೊಸ ಟ್ರಸ್ಟ್‌ ರಚನೆಯಾಗಿದೆ.

Agencies 6 Aug 2020, 11:16 pm
ಮಥುರಾ: ಅಯೋಧ್ಯೆಯಲ್ಲಿ ಐದು ಶತಮಾನಗಳ ಸುದೀರ್ಘ ಹೋರಾಟದ ಬಳಿಕ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತ ಬೆನ್ನಲ್ಲೇ, ಮಥುರಾದಲ್ಲೂ 'ಕೃಷ್ಣ ಜನ್ಮಭೂಮಿ ವಿಮೋಚನಾ ಚಳವಳಿ' ಕಾವು ಪಡೆದುಕೊಂಡಿದೆ. ಇದಕ್ಕಾಗಿ 14 ರಾಜ್ಯಗಳ 80 ಧಾರ್ಮಿಕ ಮುಖಂಡರನ್ನು ಒಳಗೊಂಡ 'ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ್‌' ಎಂಬ ಹೊಸ ಟ್ರಸ್ಟ್‌ ಅನ್ನು ರಚನೆ ಮಾಡಲಾಗಿದೆ.
Vijaya Karnataka Web after ayodhya now krishna janmabhoomi trust set up in mathura
ಅಯೋಧ್ಯೆ ಭೂಮಿ ಪೂಜೆ ಬೆನ್ನಲ್ಲಿಯೇ ಮಥುರಾ ಕೃಷ್ಣ ಜನ್ಮಭೂಮಿ ವಿಮೋಚನೆಗೆ ಟ್ರಸ್ಟ್‌ ಸ್ಥಾಪನೆ


''ಪ್ರಸ್ತುತ ಶ್ರೀಕೃಷ್ಣ ಜನ್ಮಭೂಮಿ ವಿಮೋಚನೆಗಾಗಿ ಸಹಿ ಅಭಿಯಾನ ಶುರು ಮಾಡಿದ್ದೇವೆ. ಬಳಿಕ ದೇಶಾದ್ಯಂತ ಚಳವಳಿ ಪ್ರಾರಂಭ ಮಾಡುತ್ತೇವೆ,'' ಎಂದು ಟ್ರಸ್ಟ್‌ನ ಮುಖ್ಯಸ್ಥ ಆಚಾರ್ಯ ದೇವಮುರಾರಿ ಬಾಪು,'' ಗುರುವಾರ ಮಾಹಿತಿ ನೀಡಿದ್ದಾರೆ.

ವಿವಾದವೇನು?
ಮಥುರಾದಲ್ಲಿ ಕೃಷ್ಣ ದೇಗುಲದ ಬಳಿಯೇ ಇರುವ ಶಾಹಿ ಈದ್ಗಾ ಮಸೀದಿ ವಿವಾದದ ಕೇಂದ್ರ ಬಿಂದು. ಇಲ್ಲೂ ಕೂಡಾ ಅಯೋಧ್ಯೆ ಮಾದರಿಯಲ್ಲೇ ಮಸೀದಿ ನಿರ್ಮಾಣಕ್ಕೆ ಮೂಲ ದೇವಾಲಯವನ್ನು ನೆಲಸಮ ಮಾಡಲಾಗಿದೆ.

ಮೋದಿಯೇ ರಾಮ ಜನ್ಮಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿ..! 29 ವರ್ಷದ ಶಪಥಕ್ಕೆ ಸಿಗಲಿದೆ ಅಂತ್ಯ

ಇದಕ್ಕೆ ಐತಿಹಾಸಿಕ ಪುರಾವೆಗಳೂ ಇವೆ ಎನ್ನಲಾಗಿದೆ. ಮಸೀದಿಯ ಪಕ್ಕದಲ್ಲೇ ಇರುವ 4.5 ಎಕರೆ ಭೂಮಿಯ ಮೇಲೆ ಟ್ರಸ್ಟ್‌ ಹಕ್ಕು ಪ್ರತಿಪಾದಿಸಿದೆ. ದೇಗುಲದಿಂದ ಆಯೋಜಿಸುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕಗಳಿಗೆ ಈ ಜಾಗವನ್ನು ಬಳಸಲು ಉದ್ದೇಶಿಸಲಾಗಿದೆ.

ಅಯೋಧ್ಯೆಯಂತೆ ಕಾಶಿ, ಮಥುರಾದಲ್ಲಿಯೂ ಮಸೀದಿ ತೆರವುಗೊಳಿಸಿ ಮಂದಿರ ನಿರ್ಮಾಣ: ಈಶ್ವರಪ್ಪ ವಿವಾದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ