ಆ್ಯಪ್ನಗರ

ಚೀನಾ ಅಡ್ಡಿ: ಮಾನಸ ಸರೋವರಕ್ಕೆ ಬದಲಿ ಮಾರ್ಗ

ನಾಥುಲಾ ಪಾಸ್ ಮೂಲಕ ಟಿಬೆಟ್ ಪ್ರವೇಶಿಸಬೇಕಿದ್ದ ಮಾನಸ ಸರೋವರ ಯಾತ್ರಿಕರಿಗೆ ಚೀನಾ ತಡೆಯೊಡ್ಡಿದ ನಂತರ ಯಾತ್ರಿಕರು ಉತ್ತರಾಖಂಡದ ಮತ್ತೊಂದು ಮಾರ್ಗದ ಮೂಲಕ ಯಾತ್ರೆ ಕೈಗೊಂಡಿದ್ದಾರೆ.

Times Now 29 Jun 2017, 2:28 pm
ಪಿಥೋರಗಡ್: ನಾಥುಲಾ ಪಾಸ್ ಮೂಲಕ ಟಿಬೆಟ್ ಪ್ರವೇಶಿಸುತ್ತಿದ್ದ ಮಾನಸ ಸರೋವರ ಯಾತ್ರಿಕರಿಗೆ ಚೀನಾ ಅಡ್ಡಿ ಉಂಟುಮಾಡಿದ ನಂತರ ಯಾತ್ರಿಕರು ಉತ್ತರಾಖಂಡದ ಮಾರ್ಗದ ಮೂಲಕ ಯಾತ್ರೆ ಕೈಗೊಂಡಿದ್ದಾರೆ.
Vijaya Karnataka Web after chinas mansoravar threat pilgrims embark on holy yatra via uttarakhand route
ಚೀನಾ ಅಡ್ಡಿ: ಮಾನಸ ಸರೋವರಕ್ಕೆ ಬದಲಿ ಮಾರ್ಗ


ಧಾರ್ಚೂಲಾದ ಲಿಪುಲೇಖ್ ಪಾಸ್ ಮೂಲಕ 56 ಯಾತ್ರಿಕರ ಗುಂಪು ಯಾತ್ರೆ ಮುಗಿಸಿ ವಾಪಸ್ ಮರಳಿದ್ದಾರೆ ಎಂದು ಕುಮಾನ್ ಮಂಡಲ್ ವಿಕಾಸ್ ನಿಗಂ ಏಜೆನ್ಸಿ (ಕೆಎಂವಿಎಂ) ಬುಧವಾರ ದೃಢಪಡಿಸಿದೆ. ಈಗಾಗಲೇ ಎರಡನೇ ಬ್ಯಾಚ್ ಯಾತ್ರಿಕರು ಪರ್ಯಾಯ ಮಾರ್ಗದ ಮೂಲಕ ಚೀನಾ ತಲುಪಿದ್ದು, ಶೀಘ್ರದಲ್ಲಿಯೇ ವಾಪಸ್ ಮರಳುವ ನಿರೀಕ್ಷೆ ಇದೆ ಎಂದು ಸಂಸ್ಥೆ ತಿಳಿಸಿದೆ.

'ಉತ್ತರಾಖಂಡ ಮಾರ್ಗದ ಮೂಲಕ ಯಾತ್ರೆ ಸಲೀಸಾಗಿ ಮುಂದುವರೆಯುತ್ತಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ' ಎಂದು ಕೆಎಂವಿಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಧೀರಾಜ್ ಗಾರ್ಬಿಯಾಲ್ ತಿಳಸಿದ್ದಾರೆ.

ಲಿಪುಲೇಖ್ ಪಾಸ್ ಎನ್ನುವುದು ಮಾನಸ ಸರೋವರ ತಲಪುಲು ಬಳಸುವ ಹಳೆಯ ಮಾರ್ಗ. ಇದು ನಾಥು ಲಾ ಪಾಸ್ ದಾರಿಗಿಂತ ಉತ್ತಮವಾಗಿದ್ದು ಪ್ರಯಾಣದ ದಾರಿ ಕಡಿಮೆ ಮಾಡಲು ಸಹಾಯಕವಾಗಿದೆ.

ಗಡಿ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಚೀನಾ ಅನುಸರಿಸುತ್ತಿರುವ ಹಠಮಾರಿ ಧೋರಣೆಯಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ 47 ಯಾತ್ರಿಕರು ಸಂಕಷ್ಟದಲ್ಲಿ ಸಿಲುಕುವಂತಾಗಿತ್ತು.

ಭಾರತದ ಮನವಿ ಮೇರೆಗೆ ಟಿಬೆಟ್‌ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಚೀನಾ ಅವಕಾಶ ಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ