ಆ್ಯಪ್ನಗರ

ಸ್ನೇಹಿತೆ ಹಾಸ್ಟೆಲ್ ಬಿಟ್ಟು ಹೋದಳೆಂದು ಹೇರ್ ಡೈ ಸೇವಿಸಿ ಆತ್ಮಹತ್ಯೆ

ಮೃತಳನ್ನು ಶ್ರೀದೇವಿ ಎಂದು ಗುರುತಿಸಲಾಗಿದ್ದು, ಆಕೆ ,ಸ್ನೇಹಿತೆ ನಮೃತಾ ಜತೆ ನಾರಾಯಣಗುಡದಲ್ಲಿರುವ ಹಾಸ್ಟೆಲ್‌ನಲ್ಲಿ ತಂಗಿದ್ದಳು. ಅವರಿಬ್ಬರು ಉತ್ತಮ ಸ್ನೇಹಿತೆಯರಾಗಿದ್ದು, ಇಬ್ಬರು ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು.

TIMESOFINDIA.COM 20 May 2019, 3:34 pm
ಹೈದರಾಬಾದ್: ಸ್ನೇಹಿತೆಯನ್ನು ಅಗಲಿರಲಾಗದ ನೋವಿನಲ್ಲಿ 21 ವರ್ಷದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೈದರಾಬಾದಿನಲ್ಲಿ ಶನಿವಾರ ನಡೆದಿದೆ.
Vijaya Karnataka Web Dead Body


ಕಿಂಗ್‌ಕೊಟಿಯಲ್ಲಿ ಈ ಘಟನೆ ನಡೆದಿದ್ದು ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಳನ್ನು ಶ್ರೀದೇವಿ ಎಂದು ಗುರುತಿಸಲಾಗಿದ್ದು, ಆಕೆ ,ಸ್ನೇಹಿತೆ ನಮೃತಾ ಜತೆ ನಾರಾಯಣಗುಡದಲ್ಲಿರುವ ಹಾಸ್ಟೆಲ್‌ನಲ್ಲಿ ತಂಗಿದ್ದಳು. ಅವರಿಬ್ಬರು ಉತ್ತಮ ಸ್ನೇಹಿತೆಯರಾಗಿದ್ದು, ಇಬ್ಬರು ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು.

ಕೆಲ ದಿನಗಳ ಹಿಂದೆ ನಮೃತಾ ಹಾಸ್ಟೆಲ್ ಬಿಟ್ಟು ಹೋಗಿದ್ದು, ಇದರಿಂದ ಶ್ರೀದೇವಿ ಅತಿಯಾಗಿ ನೊಂದಿದ್ದಳು.

ಎರಡು ದಿನಗಳ ಹಿಂದೆ ನಮೃತಾ ಪರೀಕ್ಷೆಗೆಂದು ಬಂದಿದ್ದು, ಶ್ರೀದೇವಿ ಒತ್ತಾಯಪೂರ್ವಕವಾಗಿ ಆಕೆಯನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬಂದು ಕೋಣೆಯಲ್ಲಿ ಕೂಡಿ ಹಾಕಿದ್ದಳು. ಅಲ್ಲಿಂದ ತಪ್ಪಿಸಿಕೊಂಡು ಹೋದ ನಮೃತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಶನಿವಾರ, ಮತ್ತೆ ನಮೃತಾಳನ್ನು ತನ್ನ ಬಳಿ ಇರುವಂತೆ ಶ್ರೀದೇವಿ ಕೇಳಿಕೊಂಡಿದ್ದಾಳೆ. ಇಬ್ಬರ ನಡುವೆ ಗಂಟೆಗಳಷ್ಟು ಕಾಲ ಮಾತುಕತೆ ನಡೆದಿದ್ದು, ಅಲ್ಲಿರಲು ಒಪ್ಪದ ನಮೃತಾ ಹಾಸ್ಟೆಲ್ ಬಿಟ್ಟು ನಡೆದಿದ್ದಾಳೆ. ಇದರಿಂದ ನೊಂದ ಶ್ರೀದೇವಿ ಹೇರ್ ಡೈ ಸೇವಿಸಿದ್ದಾಳೆ.

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಶ್ರೀದೇವಿ ನಮೃತಾ ವಿಷಯದಲ್ಲಿ ಬಹಳ ಪಾಸೆಸಿವ್ ಆಗಿದ್ದೇ ಈ ದುಡುಕಿನ ನಿರ್ಧಾರಕ್ಕೆ ಕಾರಣವಾಯ್ತು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ