ಆ್ಯಪ್ನಗರ

India's Global Reputation: ವಾಯುದಾಳಿ ಬಳಿಕ ಜಾಗತಿಕವಾಗಿ ಹಿಗ್ಗಿತು ಭಾರತದ ಖ್ಯಾತಿ

ಮೊದಲ ಬಾರಿಗೆ ಪಾಕ್‌ ಗಡಿದಾಟಿ ವೈಮಾನಿಕ ದಾಳಿ ನಡೆಸುವ ಮೂಲಕ ತನ್ನ ತಾಕತ್ತು ಏನು ಎಂಬುದನ್ನೂ ಜಗತ್ತಿಗೆ ತಿಳಿಸಿದೆ. ಪಾಕಿಸ್ತಾನದ ವಾಯುಗಡಿ ಪ್ರವೇಶಿಸಿ ಅಲ್ಲಿನ ಉಗ್ರರ ಶಿಬಿರಗಳ ಮೇಲೆ ಬಾಂಬ್‌ ಎಸೆದು ಮಿಂಚಿನ ವೇಗದಲ್ಲಿ ಸುರಕ್ಷಿತವಾಗಿ ಮರಳಿ ಬರುವುದು ಸಾಮಾನ್ಯದ ಸಂಗತಿಯಲ್ಲ.

Vijaya Karnataka 27 Feb 2019, 10:19 am
ವಾಯುದಾಳಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಸಹಜವಾಗಿಯೇ ವೃದ್ಧಿಸಿದೆ. ದಾಳಿ ನೆಪದಲ್ಲಿ ಭಾರತ ನಾಗರಿಕ ವಸತಿ ಪ್ರದೇಶಗಳಿಗೆ ಎಲ್ಲೂ ಹಾನಿ ಮಾಡಿಲ್ಲ. ಟೆರರ್‌ ಕ್ಯಾಂಪ್‌ಗಳನ್ನಷ್ಟೇ ಆಯ್ದು ಕೊಂಡು ದಾಳಿ ನಡೆಸಿದೆ. ಈ ಮೂಲಕ ಭಾರತವು ಇಸ್ರೇಲ್‌ನಂತೆ ಏರ್‌ಸ್ಟ್ರೈಕ್‌ ನಡೆಸಿದ್ದರೂ ತಾನೊಂದು ಜವಾಬ್ದಾರಿಯುತ ರಾಷ್ಟ್ರ ಎಂಬ ಸಂದೇಶವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿದೆ.
Vijaya Karnataka Web Air Strike


ಮೊದಲ ಬಾರಿಗೆ ಪಾಕ್‌ ಗಡಿದಾಟಿ ವೈಮಾನಿಕ ದಾಳಿ ನಡೆಸುವ ಮೂಲಕ ತನ್ನ ತಾಕತ್ತು ಏನು ಎಂಬುದನ್ನೂ ಜಗತ್ತಿಗೆ ತಿಳಿಸಿದೆ. ಪಾಕಿಸ್ತಾನದ ವಾಯುಗಡಿ ಪ್ರವೇಶಿಸಿ ಅಲ್ಲಿನ ಉಗ್ರರ ಶಿಬಿರಗಳ ಮೇಲೆ ಬಾಂಬ್‌ ಎಸೆದು ಮಿಂಚಿನ ವೇಗದಲ್ಲಿ ಸುರಕ್ಷಿತವಾಗಿ ಮರಳಿ ಬರುವುದು ಸಾಮಾನ್ಯದ ಸಂಗತಿಯಲ್ಲ. ಇದೊಂದು ಎಂಟೆದೆಯ ಸಾಹಸದ ಕೆಲಸವೇ ಸರಿ. ನಿಗದಿತ ಮೂರು ಟಾರ್ಗೆಟ್‌ಗಳನ್ನು ಹೊಡೆದುರುಳಿಸಿ ಯಶಸ್ವಿ ಕಾರ್ಯಾ ಚರಣೆ ನಡೆಸಿದ ಹನ್ನೆರಡು ಮಿರಾಜ್‌ -2000 ವಿಮಾನಗಳನ್ನು ಮುನ್ನಡೆಸಿದ ಪೈಲಟ್‌ಗಳಿಗೆ ದೊಡ್ಡ ಸಲಾಂ ಎಂಬ ಮೆಚ್ಚುಗೆಯ ಮಾತುಗಳು ದೇಶಾದ್ಯಂತ ಕೇಳಿಬಂದಿವೆ.

ಸುಲಭವಲ್ಲ ಇಂಥ ದಾಳಿ: ಈ ಸಾಹಸಮಯ ಕಾರ್ಯಾಚರಣೆಯಲ್ಲಿ ಕೊಂಚ ಎಡವಟ್ಟಾಗಿದ್ದರೂ ಪಾಕ್‌ ವಿಮಾನಗಳು ನಮ್ಮ ಯುದ್ಧ ವಿಮಾನ ಗಳನ್ನು ಹೊಡೆದುರುಳಿಸುವ ಸಾಧ್ಯತೆಗಳಿದ್ದವು. ಆದರೆ ಇಂತಹದ್ದಕ್ಕೆ ಅವಕಾಶ ನೀಡದೇ ಪೈಲಟ್‌ಗಳು ಅಪ್ರತಿಮ ಶೌರ್ಯ ಮೆರೆದಿದ್ದಾರೆ.

ಪಾಕ್‌ಗೆ ಸಪ್ತ ಸಂಕಟಗಳು

ಫೆ.14ರ ಪುಲ್ವಾಮಾ ದಾಳಿ ಬಳಿಕ ಭಾರತ ಪಾಕಿಸ್ತಾನಕ್ಕೆ ದಿನಕ್ಕೊಂದರಂತೆ ಛಡಿ ಏಟು ನೀಡುತ್ತ ಬಂದಿದೆ.

1. ಪಾಕ್‌ಗೆ ನೀಡಿದ್ದ ‘ಪರಮಾಪ್ತ ದೇಶ’ ಸ್ಥಾನ ವಾಪಸ್‌; ಪಾಕ್‌ ವಸ್ತುಗಳ ಮೇಲೆ ಆಮದು ಸುಂಕ 200% ಏರಿಕೆ.
2. ಪುಲ್ವಾಮಾ ದಾಳಿ ನಡೆದು 100 ಗಂಟೆಯೊಳಗೇ ಮಾಸ್ಟರ್‌ಮೈಂಡ್‌, ಜೈಷೆ ಉಗ್ರ ಮುಖಂಡ ರಶೀದ್‌ ಘಾಜಿ ಹತ್ಯೆ
3. ಭಾರತದ ನದಿಗಳಿಂದ ನೀರು ಸ್ಥಗಿತಗೊಳಿಸುವ ಮೂಲಕ ಜಲದಿಗ್ಬಂಧನ
4. ಕಾಶ್ಮೀರದಲ್ಲಿರುವ ಪಾಕ್‌ ಬೆಂಬಲಿತ ಪ್ರತ್ಯೇಕತಾವಾದಿಗಳಿಗೆ ಭದ್ರತೆ ವಾಪಸ್‌
5. ಪ್ರಮುಖ ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲಿಕ್‌ ಸೇರಿದಂತೆ 150 ಪಾಕ್‌ ಬೆಂಬಲಿಗರ ಬಂಧನ
6. ಕುಲ್ಗಾಂ ಜಿಲ್ಲೆಯಲ್ಲಿ ಜೈಷೆ ಉಗ್ರರ ಎನ್‌ಕೌಂಟರ್‌
7. ಪಾಕ್‌ ಗಡಿಯೊಳಗೆ ನುಗ್ಗಿ ಜೈಷೆ ಉಗ್ರರ ತರಬೇತಿ ಶಿಬಿರದ ಮೇಲೆ ವಾಯುದಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ