ಹೊಸ ದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟ 8,500 ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ.
2020ರ ಏಪ್ರಿಲ್ನಿಂದ ಎನ್ಪಿಆರ್ ಪ್ರಕ್ರಿಯೆ ಆರಂಭವಾಗಲಿದೆ. ಎನ್ಪಿಆರ್ ಎಂದರೆ ಭಾರತದ ‘ಸಾಮಾನ್ಯ ನಿವಾಸಿ’ಗಳ ಪಟ್ಟಿ ಎನ್ನಬಹುದು. 6 ತಿಂಗಳು ಅಥವಾ ಅದಕ್ಕಿಂತಾ ಹೆಚ್ಚು ಕಾಲ ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ನೆಲೆಸಿದ್ದರೆ ಆತನನ್ನು ಅಲ್ಲಿನ ‘ಸಾಮಾನ್ಯ ನಿವಾಸಿ’ ಎಂದು ಗುರ್ತಿಸಲಾಗುತ್ತದೆ.
2010ರಲ್ಲಿ ನಡೆದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾದರಿಯಲ್ಲೇ ಈ ಕಾರ್ಯವೂ ನಡೆಯಲಿದೆ. ಮನೆ ಮನೆಗೂ ಬರುವ ಸರ್ಕಾರಿ ಅಧಿಕಾರಿಗಳು ಅಲ್ಲಿನ ನಿವಾಸಿಗಳ ಮಾಹಿತಿ ಪಡೆಯಲಿದ್ದಾರೆ. ಕಳೆದ ಬಾರಿ 2011ರಿಂದ ಆರಂಭವಾದ ಪ್ರಕ್ರಿಯೆ 2015ಕ್ಕೆ ಮುಕ್ತಾಯವಾಗಿತ್ತು.
'ಕಲ್ಲು ಹೊಡೆದಿದ್ದೂ ತಪ್ಪು, ಗುಂಡು ಹೊಡೆದಿದ್ದೂ ತಪ್ಪು': ಮಂಗಳೂರು ಗಲಭೆಗೆ ಕಾರಣ ಕೇಳಿದ್ರು ಎಚ್ಡಿಕೆ
ಈ ಬಾರಿ ಜನಸಂಖ್ಯಾ ನೋಂದಣಿ ಡಿಜಿಟಲೀಕರಣವಾಗಿದೆ. ಮನೆ ಮನೆಗೂ ತೆರಳಿ ಅಲ್ಲಿನ ಸಾಮಾನ್ಯ ನಿವಾಸಿಗಳ ಮಾಹಿತಿ ಪಡೆಯುವ ಕಾರ್ಯ ಒಂದು ವರ್ಷದೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ದೇಶಾದ್ಯಂತ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯಾ ನೋಂದಣಿ ನಡೆಯಲಿದೆ. ಕಳೆದ ಆಗಸ್ಟ್ನಲ್ಲೇ ಈ ಬಗ್ಗೆ ಅಧಿಸೂಚನೆ ಕೂಡಾ ಹೊರಬಿದ್ದಿದೆ.
ಅಸ್ಸಾಂ ಹೊರತುಪಡಿಸಿ ಮಿಕ್ಕೆಲ್ಲಾ ರಾಜ್ಯಗಳಲ್ಲೂ ಜನಸಂಖ್ಯಾ ನೋಂದಣಿ ಕಾರ್ಯ ನಡೆಯಲಿದೆ. 1 ಏಪ್ರಿಲ್ 2020ರಿಂದ ಆರಂಭವಾಗಿ 30 ಸೆಪ್ಟೆಂಬರ್ 2020ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ. 1955ರ ಪೌರತ್ವ ಕಾಯ್ದೆ ಹಾಗೂ 2003ರ ಪೌರತ್ವ ನಿಯಮಗಳ ಅನುಸಾರ ಈ ಜನಗಣತಿ ನಡೆಯಲಿದೆ.
ಮಂಗಳೂರು ಪೌರತ್ವ ಗಲಭೆಗೆ ಹೊಸ ಟ್ವಿಸ್ಟ್ , ಮೂಟೆಯಲ್ಲಿತ್ತು ರಾಶಿ ರಾಶಿ ಕಲ್ಲು ! ವಿಡಿಯೋದಲ್ಲಿ ಏನಿದೆ
ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯೂ ಈ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಭಿಯಾನದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯ ಗುರುತಿನ ದಾಖಲೆಯನ್ನೂ ಸಂಗ್ರಹಿಸಿ ಇಡುವ ಮಹತ್ತರ ಅಭಿಯಾನ ಇದಾಗಿದೆ.
ಮಂಗಳೂರು ಗಲಭೆ ಪೂರ್ವನಿಯೋಜಿತ ; ಗೃಹ ಸಚಿವ ಬೊಮ್ಮಾಯಿ ಗಂಭೀರ ಆರೋಪ
2020ರ ಏಪ್ರಿಲ್ನಿಂದ ಎನ್ಪಿಆರ್ ಪ್ರಕ್ರಿಯೆ ಆರಂಭವಾಗಲಿದೆ. ಎನ್ಪಿಆರ್ ಎಂದರೆ ಭಾರತದ ‘ಸಾಮಾನ್ಯ ನಿವಾಸಿ’ಗಳ ಪಟ್ಟಿ ಎನ್ನಬಹುದು. 6 ತಿಂಗಳು ಅಥವಾ ಅದಕ್ಕಿಂತಾ ಹೆಚ್ಚು ಕಾಲ ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ನೆಲೆಸಿದ್ದರೆ ಆತನನ್ನು ಅಲ್ಲಿನ ‘ಸಾಮಾನ್ಯ ನಿವಾಸಿ’ ಎಂದು ಗುರ್ತಿಸಲಾಗುತ್ತದೆ.
2010ರಲ್ಲಿ ನಡೆದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾದರಿಯಲ್ಲೇ ಈ ಕಾರ್ಯವೂ ನಡೆಯಲಿದೆ. ಮನೆ ಮನೆಗೂ ಬರುವ ಸರ್ಕಾರಿ ಅಧಿಕಾರಿಗಳು ಅಲ್ಲಿನ ನಿವಾಸಿಗಳ ಮಾಹಿತಿ ಪಡೆಯಲಿದ್ದಾರೆ. ಕಳೆದ ಬಾರಿ 2011ರಿಂದ ಆರಂಭವಾದ ಪ್ರಕ್ರಿಯೆ 2015ಕ್ಕೆ ಮುಕ್ತಾಯವಾಗಿತ್ತು.
'ಕಲ್ಲು ಹೊಡೆದಿದ್ದೂ ತಪ್ಪು, ಗುಂಡು ಹೊಡೆದಿದ್ದೂ ತಪ್ಪು': ಮಂಗಳೂರು ಗಲಭೆಗೆ ಕಾರಣ ಕೇಳಿದ್ರು ಎಚ್ಡಿಕೆ
ಈ ಬಾರಿ ಜನಸಂಖ್ಯಾ ನೋಂದಣಿ ಡಿಜಿಟಲೀಕರಣವಾಗಿದೆ. ಮನೆ ಮನೆಗೂ ತೆರಳಿ ಅಲ್ಲಿನ ಸಾಮಾನ್ಯ ನಿವಾಸಿಗಳ ಮಾಹಿತಿ ಪಡೆಯುವ ಕಾರ್ಯ ಒಂದು ವರ್ಷದೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ದೇಶಾದ್ಯಂತ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯಾ ನೋಂದಣಿ ನಡೆಯಲಿದೆ. ಕಳೆದ ಆಗಸ್ಟ್ನಲ್ಲೇ ಈ ಬಗ್ಗೆ ಅಧಿಸೂಚನೆ ಕೂಡಾ ಹೊರಬಿದ್ದಿದೆ.
ಅಸ್ಸಾಂ ಹೊರತುಪಡಿಸಿ ಮಿಕ್ಕೆಲ್ಲಾ ರಾಜ್ಯಗಳಲ್ಲೂ ಜನಸಂಖ್ಯಾ ನೋಂದಣಿ ಕಾರ್ಯ ನಡೆಯಲಿದೆ. 1 ಏಪ್ರಿಲ್ 2020ರಿಂದ ಆರಂಭವಾಗಿ 30 ಸೆಪ್ಟೆಂಬರ್ 2020ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ. 1955ರ ಪೌರತ್ವ ಕಾಯ್ದೆ ಹಾಗೂ 2003ರ ಪೌರತ್ವ ನಿಯಮಗಳ ಅನುಸಾರ ಈ ಜನಗಣತಿ ನಡೆಯಲಿದೆ.
ಮಂಗಳೂರು ಪೌರತ್ವ ಗಲಭೆಗೆ ಹೊಸ ಟ್ವಿಸ್ಟ್ , ಮೂಟೆಯಲ್ಲಿತ್ತು ರಾಶಿ ರಾಶಿ ಕಲ್ಲು ! ವಿಡಿಯೋದಲ್ಲಿ ಏನಿದೆ
ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯೂ ಈ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಭಿಯಾನದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯ ಗುರುತಿನ ದಾಖಲೆಯನ್ನೂ ಸಂಗ್ರಹಿಸಿ ಇಡುವ ಮಹತ್ತರ ಅಭಿಯಾನ ಇದಾಗಿದೆ.
ಮಂಗಳೂರು ಗಲಭೆ ಪೂರ್ವನಿಯೋಜಿತ ; ಗೃಹ ಸಚಿವ ಬೊಮ್ಮಾಯಿ ಗಂಭೀರ ಆರೋಪ