ಆ್ಯಪ್ನಗರ

ವಿಪಕ್ಷಗಳ ಕಲಾಪ ಬಹಿಷ್ಕಾರದ ನಡುವೆಯೇ ರಾಜ್ಯಸಭೆಯಲ್ಲಿ 7 ಮಸೂದೆ ಪಾಸ್‌..!

ಕೃಷಿ ಮಸೂದೆಗೆ ಸಂಬಂಧಿಸಿದಂತೆ 8 ರಾಜ್ಯಸಭಾ ಸದಸ್ಯರ ಅಮಾನತಿಗೆ ಪ್ರತಿಯಾಗಿ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿರುವ ನಡುವೆಯೇ ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ಕೇವಲ ಮೂರುವರೆ ಗಂಟೆಗಳಲ್ಲಿ 7 ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆದಿದೆ.

Agencies 22 Sep 2020, 8:37 pm
ಹೊಸದಿಲ್ಲಿ: ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿರುವ ನಡುವೆಯೇ ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ಕೇವಲ ಮೂರುವರೆ ಗಂಟೆಗಳಲ್ಲಿ 7 ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆದಿದೆ. ರಾಜ್ಯಸಭೆಯಲ್ಲಿ ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟೊಂದು ಮಸೂದೆಗಳು ಅಂಗೀಕಾರವಾಗಿರುವುದು ಇದೇ ಮೊದಲು ಎನ್ನಲಾಗಿದೆ.
Vijaya Karnataka Web after opposition boycott rajya sabha passes 7 major bills
ವಿಪಕ್ಷಗಳ ಕಲಾಪ ಬಹಿಷ್ಕಾರದ ನಡುವೆಯೇ ರಾಜ್ಯಸಭೆಯಲ್ಲಿ 7 ಮಸೂದೆ ಪಾಸ್‌..!


ಈ 7 ಮಸೂದೆಗಳಲ್ಲಿ ಪ್ರಮುಖವಾಗಿ ಧಾನ್ಯ, ದ್ವಿದಳ ಧಾನ್ಯ ಮತ್ತು ಈರುಳ್ಳಿಯನ್ನು ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದುಹಾಕುವ ಮಸೂದೆ ಮತ್ತು ಕಂಪನಿಗಳ ಕೆಲವು ಅಪರಾಧಗಳಿಗೆ ದಂಡ ರದ್ದುಪಡಿಸುವ ಮಸೂದೆಗಳು ಸೇರಿವೆ. ಹೆಚ್ಚಿನ ಮಸೂದೆಗಳ ಚರ್ಚೆಯಲ್ಲಿ ಸದಸ್ಯರ ಭಾಗವಹಿಸುವಿಕೆ ಬಹಳ ವಿರಳವಾಗಿತ್ತು, ಸಚಿವರ ಉತ್ತರಗಳು ಕೂಡ ಸಂಕ್ಷಿಪ್ತವಾಗಿತ್ತು.

ಮೊದಲನೆಯದಾಗಿ, ಹೊಸದಾಗಿ ಸ್ಥಾಪಿಸಲಾದ ಐದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು (ಐಐಐಟಿ) ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ ಧಾನ್ಯ, ಬೇಳೆ ಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕುವ ಮತ್ತು ಅವುಗಳ ಮೇಲಿನ ಸ್ಟಾಕ್ ಹೋಲ್ಡಿಂಗ್ ಮಿತಿ ತೆಗೆದುಹಾಕುವ ನಿರ್ಣಾಯಕ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗೆ ಅಂಗೀಕಾರ ಪಡೆಯಲಾಯಿತು.

ಠೇವಣಿದಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ಮೇಲ್ವಿಚಾರಣೆಗೆ ತರುವ ಬ್ಯಾಂಕ್ ನಿಯಂತ್ರಣ ಕಾಯ್ದೆಗೆ ಅಂಗೀಕಾರ ಸಿಕ್ಕಿತು. ಬಳಿಕ, ಕೆಲವು ಅಪರಾಧಗಳಿಗೆ ದಂಡ ತೆಗೆದುಹಾಕುವ ಕಂಪನಿಗಳ (ತಿದ್ದುಪಡಿ) ಮಸೂದೆ 2020 ಅನ್ನು ಅಂಗೀಕರಿಸಲಾಯಿತು.

ಕ್ಷಮಾಪಣೆ ಕೇಳಿದ ನಂತರ ರಾಜ್ಯಸಭೆ ಸದಸ್ಯರ ಅಮಾನತು ರದ್ದಿಗೆ ಚಿಂತನೆ - ರವಿಶಂಕರ್‌ ಪ್ರಸಾದ್‌

ಇನ್ನು, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ - 2020 ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆಯನ್ನು ಶೀಘ್ರವಾಗಿ ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು. ಬಳಿಕ, ತೆರಿಗೆ ಮತ್ತು ಇತರ ಕಾನೂನುಗಳು (ಕೆಲವು ನಿಬಂಧನೆಗಳ ವಿನಾಯಿತಿ ಮತ್ತು ತಿದ್ದುಪಡಿ) ಮಸೂದೆ - 2020ನ್ನು ಅಂಗೀಕರಿಸಲಾಯಿತು.

ಅಮಾನತುಗೊಂಡ 8 ಮಂದಿ ರಾಜ್ಯಸಭಾ ಸದಸ್ಯರ ಬೆಂಬಲಕ್ಕಾಗಿ 'ಉಪವಾಸ' ಮಾಡುತ್ತೇನೆ: ಶರದ್ ಪವಾರ್

ಭಾನುವಾರ ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ ವಿಪಕ್ಷಗಳು ಸಂಸದರು ಅಶಿಸ್ತಿನಿಂದ ನಡೆದುಕೊಂಡಿದ್ದರು. ಈ ಕಾರಣಕ್ಕೆ 8 ಸಂಸದರನ್ನು ಉಳಿದ ಅವಧಿಯ ಅಧಿವೇಶನಕ್ಕೆ ಅಮಾನತು ಮಾಡಲಾಗಿತ್ತು. ಈ ಕಾರಣದಿಂದ ವಿಪಕ್ಷಗಳು ಕಲಾಪ ಬಹಿಷ್ಕರಿಸಿ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ