ಆ್ಯಪ್ನಗರ

ಕೇದಾರನಾಥ: ಪ್ರಧಾನಿ ಭೇಟಿ ಬಳಿಕ 45 ದಿನದಲ್ಲಿ ದಾಖಲೆ ಸಂಖ್ಯೆಯ 7.3 ಲಕ್ಷ ಯಾತ್ರಿಕರ ಭೇಟಿ

2013ರಲ್ಲಿ 3.33 ಲಕ್ಷ ಮಂದಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಆ ವರ್ಷ ಹಿಮಪ್ರವಾಹ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಈ ಅನಾಹುತದ ಬಳಿಕ 2014ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದವರ ಸಂಖ್ಯೆ ಕೇವಲ 40,922. 2015ರಲ್ಲಿ ಮತ್ತೆ 1.5 ಲಕ್ಷಕ್ಕೇರಿತು. 2016ರಲ್ಲಿ 3.09 ಲಕ್ಷ ಮಂದಿ ಆಗಮಿಸಿದ್ದರು. 2017ರಲ್ಲಿ 4.71 ಲಕ್ಷ ಹಾಗೂ 2018ರಲ್ಲಿ 7.32 ಮಂದಿ ಕೇದಾರನಾಥನಿಗೆ ಪೂಜೆ ಸಲ್ಲಿಸಿದ್ದರು ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

TNN 24 Jun 2019, 8:25 am
ಡೆಹ್ರಾಡೂನ್: ಈ ವರ್ಷದ ಚಾರ್‌ ಧಾಮ್‌ ಯಾತ್ರೆ ಆರಂಭವಾಗಿ 45 ದಿನಗಳಲ್ಲಿ ಉತ್ತರಾಖಂಡದ ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ 7 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ. ಈ ಸಂಖ್ಯೆ ಇತಿಹಾಸದಲ್ಲೇ ಅತ್ಯಧಿಕವಾಗಿದೆ. 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು.
Vijaya Karnataka Web Kedarnath Shrine


2018ರ ಆರು ತಿಂಗಳ ಯಾತ್ರಾ ಅವಧಿಯಲ್ಲಿ 7.32 ಲಕ್ಷ ಯಾತ್ರಿಕರು ಕೇದಾರನಾಥನ ದರ್ಶನ ಪಡೆದಿದ್ದರು. ಆದರೆ ಈ ವರ್ಷ ಮೊದಲ 45 ದಿನಗಳಲ್ಲೇ ಯಾತ್ರಿಕರ ಸಂಖ್ಯೆ 7.35 ಲಕ್ಷ ದಾಟಿದೆ.

ಕೆಲವು ಬಾರಿ ಒಂದೇ ದಿನ 36,000ಕ್ಕೂ ಅಧಿಕ ಯಾತ್ರಿಕರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದೂ ಸಹ ಒಂದು ದಾಖಲೆಯೇ ಆಗಿದೆ. ಜೂನ್ 7ರಂದು 36,179 ಮಂದಿ ಭಕ್ತರು ಕೇದಾರನಾಥ ಮಂದಿರವನ್ನು ಸಂದರ್ಶಿಸಿದ್ದರು. ಬಳಿಕ ಜೂನ್ 10ರಂದು 36,021 ಮಂದಿ ದೇಗುಲಕ್ಕೆ ಆಗಮಿಸಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಅವರು ಆಗಾಗ್ಗೆ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದು, ಇತ್ತೀಚೆಗೆ ಲೋಕಸಭೆ ಚುನಾವಣೆಯ ಕೊನೆಯ ಹಂತದ ವೇಳೆ ಅವರು ಕೇದಾರನಾಥದ ಗುಹೆಯಲ್ಲಿ ಒಂದು ದಿನ ಪೂರ್ತಿ ಧ್ಯಾನ ಮಗ್ನರಾಗಿದ್ದುದು ಇಡೀ ಜಗತ್ತಿನ ಗಮನ ಸೆಳೆದಿತ್ತು. ಮೋದಿ ಅವರಿಂದ ಪ್ರೇರಣೆ ಪಡೆದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

'ಇನ್ನೂ ಐದು ತಿಂಗಳ ಕಾಲ ಯಾತ್ರಾ ಅವಧಿಯಿದೆ. ಅಕ್ಟೋಬರ್‌ ಹೊತ್ತಿಗೆ ಯಾತ್ರೆ ಅಂತ್ಯಗೊಳ್ಳು ವೇಳೆಗೆ 15 ಲಕ್ಷಕ್ಕೂ ಅಧಿಕ ಯಾತ್ರಿಕರು ಕೇದಾರನಾಥ ಮಂದಿರವನ್ನು ಸಂದರ್ಶಿಸುವ ನಿರೀಕ್ಷೆಯಿದೆ' ಎಂದು ಬದರಿ-ಕೇದಾರನಾಥ ಮಂದಿ ಸಮಿತಿ ಸಿಇಓ ಬಿ.ಡಿ ಸಿಂಗ್ ಹೇಳುತ್ತಾರೆ.

ಗಢವಾಲ್ ಮಂಡಲ ವಿಕಾಸ ನಿಗಮದ ಜನರಲ್ ಮ್ಯಾನೇಜರ್ ಬಿಎಲ್ ರಾಣಾ ಕೂಡ ಈ ಬಾರಿ ಯಾತ್ರಿಕರ ಸಂಖ್ಯೆ ಹೆಚ್ಚಲು ಪ್ರಧಾನಿ ಮೋದಿ ಅವರೇ ಕಾರಣ ಎನ್ನುತ್ತಾರೆ. ಕೇದಾರನಾಥ ಪ್ರಧಾನಿ ಮೋದಿ ಅವರ ಹೃದಯಕ್ಕೆ ಅತ್ಯಂತ ಆಪ್ತವಾದ ಕ್ಷೇತ್ರ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಖುದ್ದಾಗಿ ನಿಗಾವಹಿಸುತ್ತಿದ್ದಾರೆ. ಪ್ರಧಾನಿ ಭೇಟಿ ಬಳಿಕ ಧ್ಯಾನ ಗುಹೆಗೆ ಬೇಡಿಕೆಯೂ ಹೆಚ್ಚಿದೆ' ಎಂದು ಅವರು ತಿಳಿಸಿದರು.

2013ರಲ್ಲಿ 3.33 ಲಕ್ಷ ಮಂದಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಆ ವರ್ಷ ಹಿಮಪ್ರವಾಹ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಈ ಅನಾಹುತದ ಬಳಿಕ 2014ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದವರ ಸಂಖ್ಯೆ ಕೇವಲ 40,922. 2015ರಲ್ಲಿ ಮತ್ತೆ 1.5 ಲಕ್ಷಕ್ಕೇರಿತು. 2016ರಲ್ಲಿ 3.09 ಲಕ್ಷ ಮಂದಿ ಆಗಮಿಸಿದ್ದರು. 2017ರಲ್ಲಿ 4.71 ಲಕ್ಷ ಹಾಗೂ 2018ರಲ್ಲಿ 7.32 ಮಂದಿ ಕೇದಾರನಾಥನಿಗೆ ಪೂಜೆ ಸಲ್ಲಿಸಿದ್ದರು ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ