ಆ್ಯಪ್ನಗರ

ರಾಜ್ಯಪಾಲ, ರಾಹುಲ್‌ ನಡುವೆ ಮುಂದುವರಿದ ಮಾತಿನಸಮರ

''ಕಣಿವೆ ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಸರಕಾರ ಹೇಳುವಂತೆ ಅಲ್ಲಿ ಸಾಧಾರಣ ಪರಿಸ್ಥಿತಿ ಇಲ್ಲ,'' ಎಂದು ಸೋಮವಾರ ರಾಹುಲ್‌ ಗಾಂಧಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಮಲಿಕ್‌, ''ಹೆಲಿಕಾಪ್ಟರ್‌ ಕಳುಹಿಸುವೆ. ಖುದ್ದು ಬಂದು ನೋಡಿ,'' ಎಂದು ಹೇಳಿದ್ದರು.

PTI 14 Aug 2019, 5:00 am
ಶ್ರೀನಗರ: ಜಮ್ಮು-ಕಾಶ್ಮೀರ ಭೇಟಿ ವಿಚಾರವಾಗಿ ರಾಜ್ಯಪಾಲ ಸತ್ಯಪಾಲ ಮಲಿಕ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವಿನ ಮಾತಿನ ಸಮರ ಮಂಗಳವಾರ ತೀವ್ರಗೊಂಡಿದೆ.
Vijaya Karnataka Web satyapal


''ಖುದ್ದು ನೀವೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ , ನಿಮಗೆ ಹೆಲಿಕಾಪ್ಟರ್‌ ಕಳುಹಿಸುತ್ತೇನೆ,'' ಎಂದಿದ್ದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಗೆ ರಾಹುಲ್‌ ಗಾಂಧಿ ಅವರು, ''ನಿಮ್ಮ ಆಹ್ವಾನವನ್ನು ಸ್ವೀಕರಿಸಿ ಪ್ರತಿಪಕ್ಷಗಳ ನಾಯಕರ ನಿಯೋಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಭೇಟಿ ನೀಡಲಿದೆ. ನಿಮ್ಮ ಹೆಲಿಕಾಪ್ಟರ್‌ ನಮಗೆ ಬೇಡ, ಆದರೆ ಸ್ಥಳೀಯ ಜನರನ್ನು ಭೇಟಿ ಮಾಡಿ ಮಾತನಾಡಿಸುವ ಸ್ವಾತಂತ್ರ್ಯ ಕೊಡಿ '' ಎಂದು ಟ್ವಿಟರ್‌ ಮೂಲಕ ಟಾಂಗ್‌ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ರಾಜ್ಯಪಾಲರ ಪರವಾಗಿ ಹೇಳಿಕೆ ಬಿಡುಗಡೆ ಮಾಡಿದ ರಾಜಭವನದ ವಕ್ತಾರರು, ''ಗಡಿಯಾಚೆಯಿಂದ ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಗೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸುತ್ತಿದ್ದಾರೆ. ಹಲವು ಭಾರತೀಯ ಸುದ್ದಿವಾಹಿನಿಗಳಲ್ಲಿನ ವರದಿ ನೋಡಿ ರಾಹುಲ್‌ ಅವರು ಇಲ್ಲಿನ ಸ್ಥಿತಿ ಬಗ್ಗೆ ತಿಳಿಯಬಹುದು. ಸುಪ್ರೀಂಕೋರ್ಟ್‌ಗೆ ಕೂಡ ಸರಕಾರ ಸ್ಥಿತಿಗತಿ ವರದಿ ಸಲ್ಲಿಸಿದೆ. ಪ್ರತಿಪಕ್ಷ ನಾಯಕರ ನಿಯೋಗ ಕರೆದುಕೊಂಡು ಬರುವ ಇಂಗಿತ ವ್ಯಕ್ತಪಡಿಸಿರುವ ರಾಹುಲ್‌ ಅವರು ಕಣಿವೆಯಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಅವರು ಹಲವು ಷರತ್ತುಗಳನ್ನು ಹಾಕಿರುವ ಹಿನ್ನೆಲೆಯಲ್ಲಿ ರಾಹುಲ್‌ ಭೇಟಿ ವಿಚಾರವನ್ನು ಸ್ಥಳೀಯ ಪೊಲೀಸರು ಮತ್ತು ಆಡಳಿತದ ನಿರ್ಧಾರಕ್ಕೆ ಬಿಡಲಾಗಿದೆ'', ಎಂದಿದ್ದಾರೆ.

''ಕಣಿವೆ ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಸರಕಾರ ಹೇಳುವಂತೆ ಅಲ್ಲಿ ಸಾಧಾರಣ ಪರಿಸ್ಥಿತಿ ಇಲ್ಲ,'' ಎಂದು ಸೋಮವಾರ ರಾಹುಲ್‌ ಗಾಂಧಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಮಲಿಕ್‌, ''ಹೆಲಿಕಾಪ್ಟರ್‌ ಕಳುಹಿಸುವೆ. ಖುದ್ದು ಬಂದು ನೋಡಿ,'' ಎಂದು ಹೇಳಿದ್ದರು.

.............................
ಮಲಿಕ್‌ ಸಾಹೇಬರೇ, ರಾಹುಲ್‌ ಗಾಂಧಿ ಅವರಿಗಷ್ಟೇ ಏಕೆ ಆಹ್ವಾನ? ಸರ್ವಪಕ್ಷಗಳ ನಿಯೋಗವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಆಹ್ವಾನಿಸಿ ಎಂದು ಲೋಕಸಭೆಯಲ್ಲಿ ಮನವಿ ಮಾಡಿದ್ದೆ. ಅಂತಹ ಭೇಟಿಯನ್ನು ನೀವೇ ಆಯೋಜಿಸಿ.

- ಶಶಿ ತರೂರ್‌, ಕಾಂಗ್ರೆಸ್‌ ಸಂಸದ

ಹತಾಶೆ ಮತ್ತು ದಿಕ್ಸೂಚಿ ಇಲ್ಲದ ನಾಯಕತ್ವದಿಂದಾಗಿ ಕಾಂಗ್ರೆಸ್‌ ಮುಖಂಡರು 370ನೇ ರದ್ದತಿ ಕುರಿತಂತೆ ಭಿನ್ನ ಸ್ವರದಲ್ಲಿ ಮಾತನಾಡುತ್ತಿದ್ದಾರೆ.

- ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ಜಮ್ಮು-ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್‌ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. 370ನೇ ವಿಧಿ ರದ್ದುಪಡಿಸಿರುವುದು ಅಸಾಂವಿಧಾನಿಕ ಕ್ರಮ.

- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ