ಆ್ಯಪ್ನಗರ

ವಾಟ್ಸಪ್ ವದಂತಿಗೆ ಹೆದರಿ ಲಸಿಕೆ ಬೇಡ ಎಂದ ಮದ್ರಸಾಗಳು

ಮಕ್ಕಳಿಗೆ ಲಸಿಕೆ ಹಾಕಿಸಿದರೆ ಅದರಿಂದ ನಪುಂಸಕತೆ ಉಂಟಾಗುತ್ತದೆ. ಹೀಗಾಗಿ ಮದ್ರಸಾಗಳಿಗೆ ಲಸಿಕೆ ಹಾಕಲು ಬರುವ ದಿನ ಮಕ್ಕಳು ಮನೆಯಲ್ಲಿರಿ. ಲಸಿಕೆ ಹಾಕಿಸಿಕೊಳ್ಳಬೇಡಿ ಎಂಬ ವದಂತಿಯೊಂದು ವಾಟ್ಸಪ್‌ನಲ್ಲಿ ಹರಿದಾಡಿದೆ.

Vijaya Karnataka Web 21 Dec 2018, 1:36 pm
ಮೀರತ್: ಲಸಿಕೆ ಹಾಕಿಸಿಕೊಂಡರೆ ನಪುಂಸಕತೆ ಉಂಟಾಗಲಿದೆ, ಹೀಗಾಗಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂಬ ವದಂತಿಯೊಂದು ವಾಟ್ಸಪ್‌ನಲ್ಲಿ ಹರಡಿದ್ದರಿಂದ ಉತ್ತರ ಪ್ರದೇಶದ ಸುಮಾರು 100 ಮದ್ರಸಾಗಳು ರುಬೆಲ್ಲಾ ಲಸಿಕೆ ಹಾಕಲು ಬಂದ ಆರೋಗ್ಯಾಧಿಕಾರಿಗಳನ್ನು ವಾಪಸ್ ಕಳುಹಿಸಿವೆ.
Vijaya Karnataka Web Vaccine


ಮಕ್ಕಳಿಗೆ ಲಸಿಕೆ ಹಾಕಿಸಿದರೆ ಅದರಿಂದ ನಪುಂಸಕತೆ ಉಂಟಾಗುತ್ತದೆ. ಹೀಗಾಗಿ ಮದ್ರಸಾಗಳಿಗೆ ಲಸಿಕೆ ಹಾಕಲು ಬರುವ ದಿನ ಮಕ್ಕಳು ಮನೆಯಲ್ಲಿರಿ. ಲಸಿಕೆ ಹಾಕಿಸಿಕೊಳ್ಳಬೇಡಿ ಎಂಬ ವದಂತಿಯೊಂದು ವಾಟ್ಸಪ್‌ನಲ್ಲಿ ಹರಿದಾಡಿದೆ.

ಇದರಿಂದಾಗಿ ಸಾವಿರಾರು ಮಕ್ಕಳು ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳುವಿಕೆಯಿಂದ ದೂರ ಉಳಿದಿದ್ದಾರೆ.

ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಜತೆಗೆ ಮೀರತ್ ನಗರ ಖಾಜಿಯ ಮೂಲಕ ಮದ್ರಸಾಗಳಿಗೆ ಅಧಿಕಾರಿಗಳ ಪ್ರವೇಶಕ್ಕೆ ಅವಕಾಶ ನೀಡಿ, ಮಕ್ಕಳಿಗೆ ಲಸಿಕೆ ಹಾಕಿಸಲು ಅನುವು ಮಾಡಿಕೊಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ