ಆ್ಯಪ್ನಗರ

ರೈತರ ಸಾವಿನ ನಡುವೆ ಕೃಷಿ ಸಚಿವರ ಯೋಗ ಪ್ರಚಾರ

ರೈತರ ಪ್ರತಿಭಟನೆ ನಡುವೆಯೂ ಕೇಂದ್ರ ಕೃಷಿ ಸಚಿವ ಬಾಬಾ ರಾಮ್‌ ದೇವ್‌ ಜತೆ ಯೋಗ ಆಸನ ಮಾಡಿ ಯೋಗಾಭ್ಯಾಸ ಪ್ರಚಾರ ಮಾಡುವಲ್ಲಿ ನಿರತರಾಗಿದ್ದರು.

Huffington Post India 9 Jun 2017, 1:49 pm
ಪಾಟ್ನಾ: ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಆದರೆ ಇದಕ್ಕೂ ತನಗೂ ಏನೂ ಸಂಬಂಧ ಇಲ್ಲದಂತೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಬಾಬಾ ರಾಮ್‌ ದೇವ್‌ ಜತೆ ಯೋಗಾಸನ ಮಾಡಿ ಯೋಗ ಪ್ರಚಾರದಲ್ಲಿ ನಿರತರಾಗಿದ್ದಾರೆ
Vijaya Karnataka Web agriculture ministers response to reporters on farmers deaths
ರೈತರ ಸಾವಿನ ನಡುವೆ ಕೃಷಿ ಸಚಿವರ ಯೋಗ ಪ್ರಚಾರ


ಕೇಂದ್ರ ಸಚಿವರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೌದು! ಮಧ್ಯ ಪ್ರದೇಶದ ಮಂದಸೌರ್‌ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಾವು ದಿನೇ ದಿನೆ ಏರುತ್ತಿದೆ, ಇದರ ಜತೆಯಲ್ಲಿಯೇ ರೈತರ ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಆದರೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮಾತ್ರ ಬಿಹಾರದಲ್ಲಿ ಆಯೋಜಿಸಲಾಗಿದ್ದ ಬಾಬಾ ರಾಮ್ ದೇವ್ ಯೋಗ ಕ್ಯಾಂಪ್‌ಗೆ ತೆರಳಿ ಯೋಗಾಭ್ಯಾಸ ಮಾಡುತ್ತಿದ್ದರು.

ಮಂದಸೌರ್‌ನ ರೈತರ ಸಾವಿನ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಯೋಗಾಭ್ಯಾಸ ಮಾಡಿ ಎಂಬ ಉಚಿತ ಸಲಹೆಯನ್ನೂ ಮೋಹನ್‌ ಸಿಂಗ್‌ ನೀಡಿದ್ದಾರೆ. ಕೃಷಿ ಸಚಿವರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಿಹಾರದ ಆಡಳಿತ ಪಕ್ಷಗಳಾದ ಜೆಡಿಯು, ಆರ್ ಜೆಡಿ ಖಂಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ