ಆ್ಯಪ್ನಗರ

'ಕಾಪ್ಟರ್‌ ಹಗರಣದಲ್ಲಿ ಗುರಿಯಾಗಿದ್ದು ಸಂತೋಷ'

ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ತನ್ನನ್ನು ಗುರಿ ಮಾಡಿರುವುದಕ್ಕೆ ಸಂತೋಷವಾಗಿದೆ ಎಂದು ಕಾಂಗ್ರೆಸ್ ಉಪಾಧಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಏಜೆನ್ಸೀಸ್ 3 May 2016, 4:35 pm
ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ತನ್ನನ್ನು ಗುರಿ ಮಾಡಿರುವುದಕ್ಕೆ ಸಂತೋಷವಾಗಿದೆ ಎಂದು ಕಾಂಗ್ರೆಸ್ ಉಪಾಧಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅವರ ಆಪ್ತನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಈ ಪ್ರತಿಕ್ರಿಯೆ ನೀಡಿದರು.
Vijaya Karnataka Web agustawestland scam i am happy to be targeted rahul gandhi says
'ಕಾಪ್ಟರ್‌ ಹಗರಣದಲ್ಲಿ ಗುರಿಯಾಗಿದ್ದು ಸಂತೋಷ'


ರಾಹುಲ್ ಮತ್ತು ಅವರ ಆಪ್ತ ಕಾನಿಷ್ಕ ಸಿಂಗ್ ಅವರು ಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಗ್ಯುಡೊ ಹಸ್ಚ್ಕೆಜತೆ ಸಂಪರ್ಕ ಹೊಂದಿದ್ದಾರೆ. 2009ರ ಕಾಮನ್ವೆಲ್ತ್ ಹಗರಣದಲ್ಲೂ ಎಮಾರ್‌ -ಎಂಜಿಎಫ್‌ ನಿರ್ದೇಶಕ ಗ್ಯುಡೊ ಅವರ ಹೆಸರು ಕೇಳಿ ಬಂದಿತ್ತು ಎಂದು ಬಿಜೆಪಿ ಸಂಸದರಾದ ಕೀರ್ತಿ ಸೋಮಯ್ಯ ಆರೋಪಿಸಿದ್ದರು. ಕಾಮನ್‌ವೆಲ್ತ್ ಹಗರಣದಲ್ಲಿ ಭಾಗಿಯಾಗಿರುವ ಎಮಾರ್‌ -ಎಂಜಿಎಫ್ ಜತೆ ಕಾನಿಷ್ಕ ಸಿಂಗ್ ಹೊಂದಿರುವ ಸಂಬಂಧದ ತನಿಖೆ ನಡೆಸಬೇಕು ಎಂದು ಕೀರ್ತಿ ಅವರು ಸಿಐಡಿ ಮತ್ತು ಇಡಿಗೆ ಕೋರಿದ್ದರು.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಭಾಗಿಯಾಗಿರುವುದಾಗಿ ಕೀರ್ತಿ ಅವರು ಮಾಡಿರುವ ಆರೋಪ ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದು ಕಾನಿಷ್ಕ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕೀರ್ತಿ ಅವರು ಮಾಡಿರುವ ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ ಎಂದು ಕಾನಿಷ್ಕ ಸವಾಲು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ