ಆ್ಯಪ್ನಗರ

ನಾಸ್ತಿಕನಾಗಲು ತಡೆದ ಗುಜರಾತ್‌ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

​ಹಿಂದೂ ಧರ್ಮದಿಂದ ನಾಸ್ತಿಕನಾಗಿ ಪರಿವರ್ತನೆಗೊಳ್ಳಲು ಅಹಮದಾಬಾದ್‌ನ ಜಿಲ್ಲಾಧಿಕಾರಿ ಮತಾಂತರ ವಿರೋಧಿ ಕಾನೂನಿನಡಿ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಉಪಾಧ್ಯಾಯ ಅವರು ಜುಲೈ 2018ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

TOI.in 19 Apr 2019, 11:36 am
ಅಹಮದಾಬಾದ್‌: ನಾಸ್ತಿಕ ಎಂಬ ನಾಗರಿಕ ದರ್ಜೆಯನ್ನು ಏಕೆ ಕೊಡಲು ಸಾಧ್ಯವಿಲ್ಲ? ಎಂದು ಗುಜರಾತ್‌ ಸರಕಾರವನ್ನು ಅಲ್ಲಿನ ಹೈಕೋರ್ಟ್‌ ಪ್ರಶ್ನಿಸಿದೆ.
Vijaya Karnataka Web Upadhyaya


35 ವರ್ಷದ ರಿಕ್ಷಾ ಚಾಲಕ ರಾಜೀವ್‌ ಉಪಾಧ್ಯಾಯ ಅವರು ನಾಸ್ತಿಕ ದರ್ಜೆಯನ್ನು ನೀಡಲು ಗುಜರಾತ್‌ ಸರಕಾರ ನಿರಾಕರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಗುರುವಾರ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಮುಖ್ಯನ್ಯಾಯಮೂರ್ತಿ ಎ ಎಎಸ್‌ ದಾವೆ ಮತ್ತು ನ್ಯಾ. ಬಿರೆನ್‌ ವೈಷ್ಣವ್‌ ಅವರನ್ನು ಒಳಗೊಂಡ ಹೈಕೋರ್ಟ್‌ ಪೀಠ ಗುಜರಾತ್‌ ಸರಕಾರಕ್ಕೆ ನೋಟಿಸ್‌ ನೀಡಿದೆ.

ಹಿಂದೂ ಧರ್ಮದಿಂದ ನಾಸ್ತಿಕನಾಗಿ ಪರಿವರ್ತನೆಗೊಳ್ಳಲು ಅಹಮದಾಬಾದ್‌ನ ಜಿಲ್ಲಾಧಿಕಾರಿ ಮತಾಂತರ ವಿರೋಧಿ ಕಾನೂನಿನಡಿ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಉಪಾಧ್ಯಾಯ ಅವರು ಜುಲೈ 2018ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

2003ರಲ್ಲಿ ಗುಜರಾತ್‌ ಸರಕಾರ, ಯಾವುದೇ ನಾಗರಿಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತನೆಗೊಳ್ಳಲು ಕಡ್ಡಾಯವಾಗಿ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕು ಎಂಬ ಕಾನೂನು ರೂಪಿಸಿದೆ. ಉಪಾಧ್ಯಾಯ ಅವರು ಹಿಂದೂ ಧರ್ಮದ ಗರೊಡಾ ಬ್ರಾಹ್ಮಿಣ್‌ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ