ಹೊಸದಿಲ್ಲಿ: ಜನರು ಸೂಕ್ತ ರೀತಿಯಲ್ಲಿ ಕೋವಿಡ್ 19 ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸದೆ ಹೋದಲ್ಲಿ ಮುಂದಿನ 6-8 ವಾರಗಳಲ್ಲಿ ಭಾರತದಲ್ಲಿ ಮೂರನೇ ಅಲೆ ಸೋಂಕು ಏಳುವುದು ನಿಶ್ಚಿತ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಗಣನೀಯ ಪ್ರಮಾಣದಲ್ಲಿ ಜನರು ಲಸಿಕೆ ಪಡೆಯುವವರೆಗೂ, ಪ್ರತಿಯೊಬ್ಬರೂ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರದಂತಹ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
'ಕೋವಿಡ್ ನಟವಳಿಕೆಗಳನ್ನು ಪಾಲಿಸದೆ ಹೋದರೆ ಕೊರೊನಾ ವೈರಸ್ ಮೂರನೇ ಅಲೆ ಆರರಿಂದ ಎಂಟು ವಾರಗಳಲ್ಲಿ ಉಂಟಾಗಬಹುದು. ಲಸಿಕೆ ಅಭಿಯಾನವು ಚುರುಕುಗೊಳ್ಳುವವರೆಗೂ ನಾವು ಮತ್ತೊಂದು ಬೃಹತ್ ಅಲೆಯನ್ನು ತಡೆಯಲು ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕಾಗಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಾದಲ್ಲಿ ಪ್ರದೇಶವಾರು ಲಾಕ್ಡೌನ್ಗಳನ್ನು ಮತ್ತು ಕಟ್ಟುನಿಟ್ಟಾದ ಸರ್ವೇಕ್ಷಣೆಗಳನ್ನು ನಡೆಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಲ್ಲಿ ಕೋವಿಡ್ ಹಾಟ್ಸ್ಪಾಟ್ಗಳಲ್ಲಿ ಆಕ್ರಮಣಕಾರಿ ಸರ್ವೇಕ್ಷಣಾ ತಂತ್ರಗಳು ಹಾಗೂ ಲಾಕ್ಡೌನ್ಗಳನ್ನು ಜಾರಿಗೊಳಿಸಬೇಕಿದೆ. ನಿರ್ದಿಷ್ಟ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾದಾಗ ಮತ್ತು ಪಾಸಿಟಿವಿಟಿ ದರ ಶೇ 5ಕ್ಕಿಂತ ಹೆಚ್ಚಾದಾಗ ಪ್ರದೇಶವಾರು ಲಾಕ್ಡೌನ್ ಹಾಗೂ ಕಂಟೇನ್ಮೆಂಟ್ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಆದರೆ, ಯಾವುದೇ ಹಂತದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾದರೂ ರಾಷ್ಟ್ರಮಟ್ಟದಲ್ಲಿ ಲಾಕ್ಡೌನ್ ವಿಧಿಸುವ ಅಗತ್ಯವಿಲ್ಲ. ಏಕೆಂದರೆ ಇದು ಆರ್ಥಿಕತೆಗೆ ಹೊಡೆತ ನೀಡಲಿದೆ ಎಂದು ಹೇಳಿದ್ದಾರೆ.
ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಹಾನಿ ಮಾಡಲಿದೆ ಎಂಬ ವರದಿಗಳಿಗೆ ಯಾವುದೇ ಪುರಾವೆ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಮೂರನೇ ಅಲೆ ಅನಿವಾರ್ಯ
ಭಾರತದಲ್ಲಿ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಬರಲಿದೆ ಎಂದು ಕೆಲವು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ತಡೆಯಲು ಆಗುವುದಿಲ್ಲ ಮತ್ತು ಇದು ಅನಿವಾರ್ಯ ಎಂದೂ ಹೇಳಿದ್ದಾರೆ. ಅಕ್ಟೋಬರ್ ವೇಳೆಗೆ ಮುಂದಿನ ಅಲೆಯನ್ನು ಭಾರತ ಎದುರಿಸಲಿದೆ ಎಂದು ಅನೇಕ ವೈದ್ಯಕೀಯ ಪರಿಣತರು ಅಭಿಪ್ರಾಯಪಟ್ಟಿರುವುದಾಗಿ ರಾಯಿಟರ್ಸ್ ನಡೆಸಿರುವ ಸಮೀಕ್ಷೆ ತಿಳಿಸಿದೆ.
ಎರಡನೆಯ ಅಲೆಗಿಂತಲೂ ಮುಂದಿನ ಅಲೆಯನ್ನು ಉತ್ತಮ ರೀತಿಯಲ್ಲಿ ಎದುರಿಸಬಹುದಾಗಿದ್ದರೂ, ಸಾಂಕ್ರಾಮಿಕವು ಇನ್ನೂ ಕನಿಷ್ಠ ಇಂದು ವರ್ಷ ಕಾಲ ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯಾಗಿ ಉಳಿಯಲಿದೆ ಎಂದು ತಜ್ಞರು ಹೇಳಿದ್ದಾರೆ.
'ಕೋವಿಡ್ ನಟವಳಿಕೆಗಳನ್ನು ಪಾಲಿಸದೆ ಹೋದರೆ ಕೊರೊನಾ ವೈರಸ್ ಮೂರನೇ ಅಲೆ ಆರರಿಂದ ಎಂಟು ವಾರಗಳಲ್ಲಿ ಉಂಟಾಗಬಹುದು. ಲಸಿಕೆ ಅಭಿಯಾನವು ಚುರುಕುಗೊಳ್ಳುವವರೆಗೂ ನಾವು ಮತ್ತೊಂದು ಬೃಹತ್ ಅಲೆಯನ್ನು ತಡೆಯಲು ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕಾಗಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಾದಲ್ಲಿ ಪ್ರದೇಶವಾರು ಲಾಕ್ಡೌನ್ಗಳನ್ನು ಮತ್ತು ಕಟ್ಟುನಿಟ್ಟಾದ ಸರ್ವೇಕ್ಷಣೆಗಳನ್ನು ನಡೆಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಲ್ಲಿ ಕೋವಿಡ್ ಹಾಟ್ಸ್ಪಾಟ್ಗಳಲ್ಲಿ ಆಕ್ರಮಣಕಾರಿ ಸರ್ವೇಕ್ಷಣಾ ತಂತ್ರಗಳು ಹಾಗೂ ಲಾಕ್ಡೌನ್ಗಳನ್ನು ಜಾರಿಗೊಳಿಸಬೇಕಿದೆ. ನಿರ್ದಿಷ್ಟ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾದಾಗ ಮತ್ತು ಪಾಸಿಟಿವಿಟಿ ದರ ಶೇ 5ಕ್ಕಿಂತ ಹೆಚ್ಚಾದಾಗ ಪ್ರದೇಶವಾರು ಲಾಕ್ಡೌನ್ ಹಾಗೂ ಕಂಟೇನ್ಮೆಂಟ್ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಆದರೆ, ಯಾವುದೇ ಹಂತದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾದರೂ ರಾಷ್ಟ್ರಮಟ್ಟದಲ್ಲಿ ಲಾಕ್ಡೌನ್ ವಿಧಿಸುವ ಅಗತ್ಯವಿಲ್ಲ. ಏಕೆಂದರೆ ಇದು ಆರ್ಥಿಕತೆಗೆ ಹೊಡೆತ ನೀಡಲಿದೆ ಎಂದು ಹೇಳಿದ್ದಾರೆ.
ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಹಾನಿ ಮಾಡಲಿದೆ ಎಂಬ ವರದಿಗಳಿಗೆ ಯಾವುದೇ ಪುರಾವೆ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಮೂರನೇ ಅಲೆ ಅನಿವಾರ್ಯ
ಭಾರತದಲ್ಲಿ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಬರಲಿದೆ ಎಂದು ಕೆಲವು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ತಡೆಯಲು ಆಗುವುದಿಲ್ಲ ಮತ್ತು ಇದು ಅನಿವಾರ್ಯ ಎಂದೂ ಹೇಳಿದ್ದಾರೆ. ಅಕ್ಟೋಬರ್ ವೇಳೆಗೆ ಮುಂದಿನ ಅಲೆಯನ್ನು ಭಾರತ ಎದುರಿಸಲಿದೆ ಎಂದು ಅನೇಕ ವೈದ್ಯಕೀಯ ಪರಿಣತರು ಅಭಿಪ್ರಾಯಪಟ್ಟಿರುವುದಾಗಿ ರಾಯಿಟರ್ಸ್ ನಡೆಸಿರುವ ಸಮೀಕ್ಷೆ ತಿಳಿಸಿದೆ.
ಎರಡನೆಯ ಅಲೆಗಿಂತಲೂ ಮುಂದಿನ ಅಲೆಯನ್ನು ಉತ್ತಮ ರೀತಿಯಲ್ಲಿ ಎದುರಿಸಬಹುದಾಗಿದ್ದರೂ, ಸಾಂಕ್ರಾಮಿಕವು ಇನ್ನೂ ಕನಿಷ್ಠ ಇಂದು ವರ್ಷ ಕಾಲ ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯಾಗಿ ಉಳಿಯಲಿದೆ ಎಂದು ತಜ್ಞರು ಹೇಳಿದ್ದಾರೆ.