ಪಣಜಿ: ಅನಾರೋಗ್ಯಕ್ಕೆ ಒಳಗಾಗಿರುವ ಸಿಎಂ ಮನೋಹರ್ ಪರಿಕ್ಕರ್ ಅವರ ತಪಾಸಣೆಗಾಗಿ ದಿಲ್ಲಿಯ ಎಐಐಎಂಎಸ್ ವೈದ್ಯರ ತಂಡ ಭಾನುವಾರ ಗೋವಾಕ್ಕೆ ಆಗಮಿಸಿದೆ. ಇದೇ ವೇಳೆ, ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿಗಳ ಕಚೇರಿ ನಿರಾಕರಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದಿದೆ. ಕಳೆದ ಒಂದು ವರ್ಷದಿಂದ ಮೇದೋಜೀರಕ ಗ್ರಂಥಿ ಕ್ಯಾನ್ಸರ್ನಿಂದ ಬಳಲುತ್ತಿರುವ ಪರಿಕ್ಕರ್ ಅವರು ದೋನಾ ಪೌಲಾದಲ್ಲಿರುವ ಖಾಸಗಿ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಿಲ್ಲಿಯಲ್ಲಿ ಚಿಕಿತ್ಸೆ ನೀಡಿದ ತಂಡವೇ ಗೋವಾಕ್ಕೆ ಆಗಮಿಸಿದೆ. ''ಪರಿಕ್ಕರ್ ಅವರ ಆರೋಗ್ಯದ ಮಾನದಂಡಗಳೆಲ್ಲವೂ ತೃಪ್ತಿಕರವಾಗಿವೆ. ಆವರು ಸಕ್ರಿಯವಾಗಿ ಮತ್ತು ಜಾಗೃತರಾಗಿ ಇದ್ದಾರೆ,'' ಎಂದು ಹೇಳಿರುವ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಯಾವ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ಪರಿಕ್ಕರ್ ತಪಾಸಣೆಗೆ ಎಐಐಎಂಎಸ್ ವೈದ್ಯರ ಆಗಮನ, ಆರೋಗ್ಯ ಸ್ಥಿರ
ಶನಿವಾರ ರಾತ್ರಿ ಅವರನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಿಲ್ಲಿಯಲ್ಲಿ ಚಿಕಿತ್ಸೆ ನೀಡಿದ ತಂಡವೇ ಗೋವಾಕ್ಕೆ ಆಗಮಿಸಿದೆ.
Vijaya Karnataka 25 Feb 2019, 5:00 am