ಆ್ಯಪ್ನಗರ

ಏಮ್ಸ್‌ನಿಂದ ಲಾಲು ಡಿಸ್‌ಚಾರ್ಜ್‌: ಹತ್ಯೆ ಷಡ್ಯಂತ್ರದ ಆರೋಪ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಭೇಟಿಯಾಗಿ ಹೋದ ಬೆನ್ನಲ್ಲೇ ಅವರ ಡಿಸ್ಚಾರ್ಜ್‌ಗೆ ಸಂಬಂಧಿಸಿದ ವಿವಾದ ತಲೆ ಎತ್ತಿದೆ.

TIMESOFINDIA.COM 30 Apr 2018, 8:51 pm
ಹೊಸದಿಲ್ಲಿ: ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳಿಗೆ ಇಲ್ಲಿನ ಏಮ್ಸ… ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರನ್ನು ಬಿಡುಗಡೆ ಮಾಡಲಾಗಿದೆ.
Vijaya Karnataka Web Lalu Prasad Yadav


ಲಾಲು ಅವರ ಆರೋಗ್ಯ ಸಾಕಷ್ಟು ಸುಧಾರಿಸಿರುವುದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಸಂಜೆಯೇ ರೈಲಿನ ಮೂಲಕ ಅವರನ್ನು ರಾಂಚಿಗೆ ಕರೆದೊಯ್ಯಲಾಯಿತು. ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಆದರೆ, ಏಮ್ಸ್‌ನಿಂದ ಬಿಡುಗಡೆಗೊಳಿಸಿದ ಕ್ರಮವನ್ನು ಲಾಲು ಪ್ರಸಾದ್‌ ತಮ್ಮನ್ನು ಮುಗಿಸಲು ಸಂಚು ಎಂದು ಆರೋಪಿಸಿದ್ದಾರೆ.

''ರಾಂಚಿ ಆಸ್ಪತ್ರೆಯಲ್ಲಿ ನನ್ನ ಚಿಕಿತ್ಸೆಗೆ ಯೋಗ್ಯ ವೈದ್ಯಕೀಯ ಸೌಕರ್ಯಗಳು ಇಲ್ಲದಿರುವುದರಿಂದ ಅಲ್ಲಿಗೆ ನನ್ನನ್ನು ವರ್ಗಾಯಿಸುವುದು ನನ್ನನ್ನು ಮುಗಿಸಿ ಬಿಡುವ ಸಂಚಿನ ಭಾಗವೇ ಆಗಿದೆ. ಇದನ್ನು ವಿರೋಧಿಸಿ ನಾನು ಆಸ್ಪತ್ರೆಗೆ ಪತ್ರ ಬರೆದಿದ್ದೇನೆ,'' ಎಂದು ಲಾಲು ಹೇಳಿದ್ದಾರೆ. ಮಾ. 29ರಿಂದಲೂ ರಾಹುಲ್‌ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬೆಂಬಲಿಗರ ಪ್ರತಿಭಟನೆ: ಈ ಮಧ್ಯೆ, ಲಾಲು ಅವರನ್ನು ರಾಂಚಿ ಆಸ್ಪತ್ರೆಗೆ ವರ್ಗಾಯಿಸುವುದನ್ನು ಖಂಡಿಸಿ ದಿಲ್ಲಿಯ ಏಮ್ಸ… ಆಸ್ಪತ್ರೆಯ ಮುಂದೆ ಸೋಮವಾರ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಏಮ್ಸ್‌ ಆಸ್ಪತ್ರೆಯ ಬಾಗಿಲಿನ ಗಾಜು ಒಡೆದ ಉದ್ರಿಕ್ತರು, ಭದ್ರತಾ ಸಿಬ್ಬಂದಿ ಮತ್ತು ನೌಕರರ ಮೇಲೆಯೂ ದಾಳಿ ನಡೆಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಮನೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ