ಆ್ಯಪ್ನಗರ

ಎಸಿ ವ್ಯವಸ್ಥೆ ಇಲ್ಲದ ವಿಮಾನ: ಇಡೀ ದಿನ ಕಾದ ಪ್ರಯಾಣಿಕರು

ಸಿಂಗಾಪುರಕ್ಕೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು 24 ತಾಸಿಗೂ ಹೆಚ್ಚು ಕಾಲ ಕಾಯ್ದು ಬಸವಳಿದ ಪ್ರಕರಣ ವರದಿಯಾಗಿದೆ...

Vijaya Karnataka 16 Oct 2018, 7:57 am
ತಿರುಚ್ಚಿ: ಸಿಂಗಾಪುರಕ್ಕೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು 24 ತಾಸಿಗೂ ಹೆಚ್ಚು ಕಾಲ ಕಾಯ್ದು ಬಸವಳಿದ ಪ್ರಕರಣ ವರದಿಯಾಗಿದೆ.
Vijaya Karnataka Web Air India


ಸಿಂಗಾಪುರದಿಂದ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬಂದ ಎಎಕ್ಸ್‌ಬಿ 682 ಏರ್‌ ಇಂಡಿಯಾ ವಿಮಾನ, ಪುನಃ 115 ಪ್ರಯಾಣಿಕರನ್ನು ಹೊತ್ತು 4.10ಕ್ಕೆ ಹೊರಡಬೇಕಿತ್ತು. ಟೇಕಾಫ್‌ ಆಗುವ ಪೂರ್ವ ವಿಮಾನದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂದು ಪ್ರಯಾಣಿಕರು ದೂರಿದರು. ಈ ಬಗ್ಗೆ ಪೈಲಟ್‌ ಏರ್‌ಪೋರ್ಟ್‌ ಟರ್ಮಿನಲ್‌ ಮತ್ತು ಎಟಿಸಿ ಟವರ್‌ಗೆ ಮಾಹಿತಿ ನೀಡಿದರು. ತಂತ್ರಜ್ಞರ ತಂಡ ಸಮಸ್ಯೆ ಪತ್ತೆಗೆ ಕಸರತ್ತು ನಡೆಸಿತು. ಆದರೆ, ತಕ್ಷಣಕ್ಕೆ ಏನಾಗಿದೆ ಎನ್ನುವುದು ತಿಳಿಯದೇ ಹೋದಾಗ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರನ್ನೂ ಕೆಳಗಿಳಿಸಲಾಯಿತು. ನಂತರ ಅದು ತಕ್ಷಣಕ್ಕೆ ಬಗೆಹರಿಯದ ಸಮಸ್ಯೆ ಎಂದು ಹೇಳಿ, ಪ್ರಯಾಣಿಕರಿಗೆ ಸಮೀಪದ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಸೋಮವಾರ ಸಂಜೆ ಬೇರೊಂದು ವಿಮಾನ ಹತ್ತಿಸಿ ಪ್ರಯಾಣಿಕರನ್ನು ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ