ಆ್ಯಪ್ನಗರ

ಇಟಲಿಯಲ್ಲಿ ಸಿಲುಕಿದ್ದ 263 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಸ್ವಾತಿ ರಾವಲ್‌

ಇಟಲಿಯಲ್ಲಿ ಸಿಲುಕಿದ್ದ 263 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಕೊಂಡು ಬಂದ ಪೈಲೆಟ್‌ ಸ್ವಾತಿ ರಾವಲ್‌ ಅವರಿಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

TOI.in 24 Mar 2020, 6:21 pm
ಅಹಮದಾಬಾದ್‌: ಚೀನಾ ಬಳಿಕ ಕೊರೊನಾ ವೈರಸ್‌ನಿಂದ ಹೆಚ್ಚು ಜನ ಸಾವನ್ನಪ್ಪಿರುವ ದೇಶಕ್ಕೆ ಹೋಗಿ, ಅಲ್ಲಿರುವ ಭಾರತೀಯರನ್ನು ಕರೆದುಕೊಂಡು ಬನ್ನಿ ಎಂದರೆ ಯಾರು ತಾನೆ ಮುಂದೆ ಹೋಗುತ್ತಾರೆ? ಅಲ್ಲಿ ಹೋಗಿ ತಮಗೆಲ್ಲಿ ಕೊರೊನಾ ಸೋಂಕು ಅಂಟಿ ಬಿಡುತ್ತದೋ ಎಂದು ಹಿಂಜರಿಯುವವರೇ ಅಧಿಕ. ಇಂತಹ ಸಂದರ್ಭದಲ್ಲಿ ಸೋಂಕಿಗೆ ಹೆದರದೆ ಇಟಲಿ ಹೋಗಿ, ಅಲ್ಲಿ ಸಿಲುಕಿದ್ದ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬಂದ ಧೀರೆ ಸ್ವಾತಿ ರಾವಲ್‌.
Vijaya Karnataka Web air india pilot swati raval


ಸ್ವಾತಿ ಗುಜರಾತ್‌ನ ಅಹಮದಾಬಾದ್‌ ನಿವಾಸಿ. ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಿಸುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೇಂದ್ರ ಸರಕಾರ ವಿಮಾನಯಾನವನ್ನು ರದ್ದು ಪಡಿಸಿತ್ತು. ಪರಿಣಾಮ ಇಟಲಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವು ಭಾರತೀಯರು ರೋಮ್‌ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು.

ಇಟಲಿಯಲ್ಲಿ ಸಿಲುಕಿದ್ದ ಭಾರತೀಯರಿಗಾಗಿ ಅವರ ಕುಟುಂಬದವರು ಸಹಾಯ ಮಾಡುವಂತೆ ಕೇಂದ್ರ ಸರಕಾರವನ್ನು ನಿರಂತರವಾಗಿ ಕೋರಿಕೆ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಪೈಲೆಟ್‌ ಸ್ವಾತಿ ಅವರಿಗೆ ಭಾರತೀಯರನ್ನು ಕರೆದುಕೊಂಡು ಬರುವಂತೆ ವಿನಂತಿ ಬಂದಾಗ ತಕ್ಷಣ ಒಪ್ಪಿಕೊಂಡು ಸೇವೆ ಮಾಡಿದ್ದಾರೆ. ಈ ಮೂಲಕ ತನ್ನ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.

ಕೊರೊನಾ ಭೀತಿ ಬಿಡಿ: ಗುರುಗ್ರಾಮದಲ್ಲಿ ಗುಣಮುಖರಾದ್ರು 11 ಇಟಲಿ ಪ್ರವಾಸಿಗರು!

ಮಾರ್ಚ್‌ 21ರಂದು ಮಗಳು ಸ್ವಾತಿ ನನಗೆ ಫೋನ್‌ ಮಾಡಿ ಇಟಲಿ ಹೋಗುತ್ತಿರುವುದಾಗಿ ತಿಳಿಸಿದಳು. ಅಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆ ತರಲು 22 ವಿಮಾನ ಸಿಬ್ಬಂದಿ ಜೊತೆ ಹೋಗಲು ಅನುಮತಿ ಕೇಳಿದಳು. ತಕ್ಷಣ ಹೋಗಿ ಕರೆದುಕೊಂಡು ಬರಲು ಒಪ್ಪಿಗೆ ನೀಡಿದೆ ಎಂದು ಸ್ವಾತಿ ಅವರ ತಂದೆ ಎಸ್‌ ಡಿ ರಾವಲ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

''ನಾನು ಅರಣ್ಯ ಅಧಿಕಾರಿಯಾಗಿದ್ದೆ. ನನಗೆ ಸರಕಾರದ ಕೆಲಸದ ಬಗ್ಗೆ ಗೊತ್ತಿದೆ. ರೋಮ್‌ ವಿಮಾನ ನಿಲ್ದಾಣಕ್ಕೆ ಹೋದಾಗ ಎಲ್ಲಾ ಭಾರತೀಯ ಪ್ರಯಾಣಿಕರು ಸಿದ್ಧರಾಗಿದ್ದರು. ತಕ್ಷಣ ಅವರನ್ನು ವಿಮಾನದಲ್ಲಿ ಹತ್ತಿಸಿಕೊಂಡು ದಿಲ್ಲಿಗೆ ತಂದು ಬಿಟ್ಟಿದ್ದಾಳೆ. ನನ್ನ ಮಗಳ ಕಾರ್ಯಕ್ಕೆ ನನಗೆ ಹೆಮ್ಮೆಯಿದೆ. ನನಗೆ ಮಗಳ ಸುರಕ್ಷತೆ ಬಗ್ಗೆ ಪ್ರಯಾಣದುದ್ದಕ್ಕೂ ಚಿಂತೆಯಾಗುತ್ತಿತ್ತು. ಆದರೆ ಉಳಿದ ಸಿಬ್ಬಂದಿ ಜತೆ ನನ್ನ ಮಗಳು ಎಲ್ಲರನ್ನು ಸುರಕ್ಷಿತವಾಗಿ ಕರೆತಂದಳು ಎಂಬ ಸುದ್ದಿ ಸಿಗುತ್ತಿದ್ದಂತೆ ತುಂಬ ಖುಷಿಯಾಯಿತು ಎಂದು ರಾವಲ್‌ ವಿವರಿಸದರು.

ಸ್ವಾತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರಾಯ್‌ ಬರೇಲಿಯಲ್ಲಿ ಪೈಲೆಟ್‌ ಆಗಿ ತರಬೇತಿ ಪಡೆದಿದ್ದಾರೆ. 2006ರಿದಂ ಏರ್‌ ಇಂಡಿಯಾದ ಪೈಲೆಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೊನಾ ವೈರಸ್‌: ವಾಟ್ಸಾಪ್‌ಗಳಲ್ಲಿ ಬರೋದನ್ನೆಲ್ಲಾ ನಂಬದಿರಿ, ಇಲ್ಲಿದೆ ನೈಜ ಮಾಹಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ