ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆ ಮೇಲೆ ಕುಡಿತ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಮುಂಬಯಿ ವ್ಯಕ್ತಿ ಶಂಕರ್ ಮಿಶ್ರಾನನ್ನು ದಿಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆತನನ್ನು ದಿಲ್ಲಿಗೆ ಮರಳಿ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 26ರಂದು ನ್ಯೂಯಾರ್ಕ್- ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ಆತನ ಪತ್ತೆಗೆ ಎರಡು ತಂಡಗಳನ್ನು ರಚಿಸಿದ್ದ ದಿಲ್ಲಿ ಪೊಲೀಸರು, ಒಂದು ತಂಡವನ್ನು ಆತ ನೆಲೆಸಿದ್ದ ಮುಂಬಯಿ ಹಾಗೂ ಆತನ ಸಹೋದರಿ ಇರುವ ಬೆಂಗಳೂರಿಗೆ ಕಳುಹಿಸಿದ್ದರು. ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಈ ವಿವಾದ ಭಾರಿ ಚರ್ಚೆಗೆ ಗ್ರಾಸವಾದ ಬಳಿಕ ಮತ್ತು ಆರೋಪಿಯನ್ನು ಬಂಧಿಸುವಂತೆ ಒತ್ತಡ ಹೆಚ್ಚಾದ ನಂತರ ತ್ವರಿತ ಕಾರ್ಯಾಚರಣೆ ನಡೆಸಿದ್ದ ದಿಲ್ಲಿ ಪೊಲೀಸರಿಗೆ ಆತ ಬೆಂಗಳೂರಿನಲ್ಲಿ ಅಡಗಿಕೊಂಡಿರುವ ಸುಳಿವು ಸಿಕ್ಕಿತ್ತು. ಬೆಂಗಳೂರಿಗೆ ಬಂದಿದ್ದ ದಿಲ್ಲಿ ಪೊಲೀಸರು, ಶಂಕರ್ ಮಿಶ್ರಾನ ಸಹೋದರಿಯನ್ನು ಭೇಟಿ ಮಾಡಿ ಪ್ರಶ್ನಿಸಿದ್ದರು. ಆತ ಬೆಂಗಳೂರಿನಲ್ಲಿಯೇ ಇರುವುದು ಖಚಿತವಾಗಿದ್ದರಿಂದ ಪೊಲೀಸರು ಇಲ್ಲಿಯೇ ಬೀಡುಬಿಟ್ಟಿದ್ದರು.
ಬೆಂಗಳೂರಿನ ಸಂಜಯನಗರದಲ್ಲಿರುವ ಸಹೋದರಿಯ ಮನೆಯಲ್ಲಿ ಮಿಶ್ರಾ ಅವಿತುಕೊಂಡಿದ್ದ ಎನ್ನಲಾಗಿದೆ. ಆತನ ಬಂಧನಕ್ಕೆ ದಿಲ್ಲಿ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸರು ಸಹಕಾರ ನೀಡಿದ್ದರು.
ಪತ್ತೆ ಮಾಡಿದ್ದು ಹೇಗೆ?
ಮಿಶ್ರಾನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೂ, ಆತ ತನ್ನ ಸ್ನೇಹಿತರ ಜತೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದ. ಇದು ಆತನ ಪತ್ತೆಗೆ ಪೊಲೀಸರಿಗೆ ನೆರವಾಗಿದೆ. 34 ವರ್ಷದ ಮಿಶ್ರಾ, ಕನಿಷ್ಠ ಒಂದು ಕಡೆ ತನ್ನ ಕ್ರೆಡಿಟ್/ ಡೆಬಿಟ್ ಕಾರ್ಡನ್ನು ಕೂಡ ಬಳಸಿದ್ದ.
ಆತನ ಫೋನ್, ಡಿಜಿಟಲ್ ಹೆಜ್ಜೆ ಗುರುತು ಹಾಗೂ ಬ್ಯಾಂಕ್ ವರ್ಗಾವಣೆಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಆತನ ಚಲನವಲನಗಳ ಮಾಹಿತಿ ದೊರಕಿತ್ತು.
"ದಿಲ್ಲಿ ಪೊಲೀಸರ ತಂಡವು ಬೆಂಗಳೂರಿನಲ್ಲಿ ಆರೋಪಿ ಶಂಕರ್ ಮಿಶ್ರಾನನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಆತನನ್ನು ದಿಲ್ಲಿಗೆ ಕರೆತರಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಉಪ ಪೊಲೀಸ್ ಆಯುಕ್ತ (ವಿಮಾನ ನಿಲ್ದಾಣ) ರವಿ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನ. 26ರಂದು ನಡೆದಿದ್ದ ಘಟನೆಯಲ್ಲಿ ಮಿಶ್ರಾ ವಿರುದ್ಧ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಂಸ್ಥೆಗೆ ಮಹಿಳೆ ಪತ್ರ ಬರೆದಿದ್ದರು. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಈ ದೂರಿನ ಆಧಾರದಲ್ಲಿ ಜ. 4ರಂದು ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಅಮೆರಿಕದ ಹಣಕಾಸು ಸೇವಾ ಕಂಪೆನಿ ವೆಲ್ಸ್ ಫಾರ್ಗೋದ ಭಾರತೀಯ ವಿಭಾಗದ ಉಪಾಧ್ಯಕ್ಷನಾಗಿದ್ದ ಶಂಕರ್ ಮಿಶ್ರಾನನ್ನು, ಕಂಪೆನಿಯು ಹುದ್ದೆಯಿಂದ ವಜಾಗೊಳಿಸಿದೆ.
ಎಲ್ಲವೂ ಸರಿಯಾಗಿತ್ತು...
ಮೂತ್ರ ವಿಸರ್ಜನೆ ಮಾಡಿದ್ದ ಬಳಿಕ ಆತನನ್ನು ಏರ್ ಇಂಡಿಯಾ ಸಿಬ್ಬಂದಿ ಮತ್ತೆ ತನ್ನ ಎದುರು ಕರೆತಂದಿದ್ದರು. ತನ್ನ ಹೆಂಡತಿ ಮಕ್ಕಳಿಗೆ ತೊಂದರೆಯಾಗಲಿದೆ. ದೂರು ನೀಡಬೇಡಿ ಎಂದು ಆತ ಅಂಗಲಾಚಿ ಕ್ಷಮೆ ಕೋರಿದ್ದ ಎಂದು ಮಹಿಳೆ ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆ ಜತೆ ಶಂಕರ್ ಮಿಶ್ರಾ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದ. ಜತೆಗೆ ಆಕೆಗೆ 15,000 ರೂ ಪರಿಹಾರವನ್ನೂ ನೀಡಿದ್ದ. ಘಟನೆ ನಂತರ ಆಕೆಯ ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಕೊಟ್ಟಿದ್ದ. ಆದರೆ ಒಂದು ತಿಂಗಳ ಬಳಿಕ ಮಹಿಳೆಯ ಮಗಳು, ಆ ಹಣವನ್ನು ವಾಪಸ್ ಕಳುಹಿಸಿ ಇದನ್ನು ಸ್ವೀಕರಿಸುವುದಿಲ್ಲ ಎಂದಿದ್ದರು ಎಂಬುದಾಗಿ ಮಿಶ್ರಾ ಪರ ವಕೀಲರು ಹೇಳಿದ್ದಾರೆ.
ಈ ವಿವಾದ ಭಾರಿ ಚರ್ಚೆಗೆ ಗ್ರಾಸವಾದ ಬಳಿಕ ಮತ್ತು ಆರೋಪಿಯನ್ನು ಬಂಧಿಸುವಂತೆ ಒತ್ತಡ ಹೆಚ್ಚಾದ ನಂತರ ತ್ವರಿತ ಕಾರ್ಯಾಚರಣೆ ನಡೆಸಿದ್ದ ದಿಲ್ಲಿ ಪೊಲೀಸರಿಗೆ ಆತ ಬೆಂಗಳೂರಿನಲ್ಲಿ ಅಡಗಿಕೊಂಡಿರುವ ಸುಳಿವು ಸಿಕ್ಕಿತ್ತು. ಬೆಂಗಳೂರಿಗೆ ಬಂದಿದ್ದ ದಿಲ್ಲಿ ಪೊಲೀಸರು, ಶಂಕರ್ ಮಿಶ್ರಾನ ಸಹೋದರಿಯನ್ನು ಭೇಟಿ ಮಾಡಿ ಪ್ರಶ್ನಿಸಿದ್ದರು. ಆತ ಬೆಂಗಳೂರಿನಲ್ಲಿಯೇ ಇರುವುದು ಖಚಿತವಾಗಿದ್ದರಿಂದ ಪೊಲೀಸರು ಇಲ್ಲಿಯೇ ಬೀಡುಬಿಟ್ಟಿದ್ದರು.
ಬೆಂಗಳೂರಿನ ಸಂಜಯನಗರದಲ್ಲಿರುವ ಸಹೋದರಿಯ ಮನೆಯಲ್ಲಿ ಮಿಶ್ರಾ ಅವಿತುಕೊಂಡಿದ್ದ ಎನ್ನಲಾಗಿದೆ. ಆತನ ಬಂಧನಕ್ಕೆ ದಿಲ್ಲಿ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸರು ಸಹಕಾರ ನೀಡಿದ್ದರು.
ಪತ್ತೆ ಮಾಡಿದ್ದು ಹೇಗೆ?
ಮಿಶ್ರಾನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೂ, ಆತ ತನ್ನ ಸ್ನೇಹಿತರ ಜತೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದ. ಇದು ಆತನ ಪತ್ತೆಗೆ ಪೊಲೀಸರಿಗೆ ನೆರವಾಗಿದೆ. 34 ವರ್ಷದ ಮಿಶ್ರಾ, ಕನಿಷ್ಠ ಒಂದು ಕಡೆ ತನ್ನ ಕ್ರೆಡಿಟ್/ ಡೆಬಿಟ್ ಕಾರ್ಡನ್ನು ಕೂಡ ಬಳಸಿದ್ದ.
ಆತನ ಫೋನ್, ಡಿಜಿಟಲ್ ಹೆಜ್ಜೆ ಗುರುತು ಹಾಗೂ ಬ್ಯಾಂಕ್ ವರ್ಗಾವಣೆಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಆತನ ಚಲನವಲನಗಳ ಮಾಹಿತಿ ದೊರಕಿತ್ತು.
"ದಿಲ್ಲಿ ಪೊಲೀಸರ ತಂಡವು ಬೆಂಗಳೂರಿನಲ್ಲಿ ಆರೋಪಿ ಶಂಕರ್ ಮಿಶ್ರಾನನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಆತನನ್ನು ದಿಲ್ಲಿಗೆ ಕರೆತರಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಉಪ ಪೊಲೀಸ್ ಆಯುಕ್ತ (ವಿಮಾನ ನಿಲ್ದಾಣ) ರವಿ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನ. 26ರಂದು ನಡೆದಿದ್ದ ಘಟನೆಯಲ್ಲಿ ಮಿಶ್ರಾ ವಿರುದ್ಧ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಂಸ್ಥೆಗೆ ಮಹಿಳೆ ಪತ್ರ ಬರೆದಿದ್ದರು. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಈ ದೂರಿನ ಆಧಾರದಲ್ಲಿ ಜ. 4ರಂದು ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಅಮೆರಿಕದ ಹಣಕಾಸು ಸೇವಾ ಕಂಪೆನಿ ವೆಲ್ಸ್ ಫಾರ್ಗೋದ ಭಾರತೀಯ ವಿಭಾಗದ ಉಪಾಧ್ಯಕ್ಷನಾಗಿದ್ದ ಶಂಕರ್ ಮಿಶ್ರಾನನ್ನು, ಕಂಪೆನಿಯು ಹುದ್ದೆಯಿಂದ ವಜಾಗೊಳಿಸಿದೆ.
ಎಲ್ಲವೂ ಸರಿಯಾಗಿತ್ತು...
ಮೂತ್ರ ವಿಸರ್ಜನೆ ಮಾಡಿದ್ದ ಬಳಿಕ ಆತನನ್ನು ಏರ್ ಇಂಡಿಯಾ ಸಿಬ್ಬಂದಿ ಮತ್ತೆ ತನ್ನ ಎದುರು ಕರೆತಂದಿದ್ದರು. ತನ್ನ ಹೆಂಡತಿ ಮಕ್ಕಳಿಗೆ ತೊಂದರೆಯಾಗಲಿದೆ. ದೂರು ನೀಡಬೇಡಿ ಎಂದು ಆತ ಅಂಗಲಾಚಿ ಕ್ಷಮೆ ಕೋರಿದ್ದ ಎಂದು ಮಹಿಳೆ ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆ ಜತೆ ಶಂಕರ್ ಮಿಶ್ರಾ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದ. ಜತೆಗೆ ಆಕೆಗೆ 15,000 ರೂ ಪರಿಹಾರವನ್ನೂ ನೀಡಿದ್ದ. ಘಟನೆ ನಂತರ ಆಕೆಯ ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಕೊಟ್ಟಿದ್ದ. ಆದರೆ ಒಂದು ತಿಂಗಳ ಬಳಿಕ ಮಹಿಳೆಯ ಮಗಳು, ಆ ಹಣವನ್ನು ವಾಪಸ್ ಕಳುಹಿಸಿ ಇದನ್ನು ಸ್ವೀಕರಿಸುವುದಿಲ್ಲ ಎಂದಿದ್ದರು ಎಂಬುದಾಗಿ ಮಿಶ್ರಾ ಪರ ವಕೀಲರು ಹೇಳಿದ್ದಾರೆ.