ಆ್ಯಪ್ನಗರ

ವಾಯುಪಡೆಯ ಹೊಸ ಮಾರ್ಷಲ್‌ 'ರಾಕೇಶ್ ಕುಮಾರ್ ಸಿಂಗ್‌ ಭದೌರಿಯಾ'

ಭಾರತೀಯ ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್‌ ಭದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದಿನ ಏರ್‌ ಮಾರ್ಷಲ್ ಬಿ.ಎಸ್‌. ಧನೋವಾ ಅವರು ನೂತನ ಮುಖ್ಯಸ್ಥರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

TIMESOFINDIA.COM 30 Sep 2019, 3:37 pm
ಹೊಸದಿಲ್ಲಿ: ಭಾರತೀಯ ವಾಯುಸೇನೆಯ ನೂತನ ಮುಖ್ಯಸ್ಥರನ್ನಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್‌ ಭದೌರಿಯಾ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ನಿವೃತ್ತಿ ಹೊಂದುತ್ತಿರುವ ಏರ್‌ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರು ನೂತನ ಮುಖ್ಯಸ್ಥರಿಗೆ ಅಧಿಕಾರ ಹಸ್ತಾಂತರಿಸಿದರು.
Vijaya Karnataka Web Rakesh Kumar Singh Bhadauria


ಏರ್‌ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರು ಇಂದು (ಸೆ.30) ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಕೆಎಸ್ ಭದೌರಿಯಾ ಅವರನ್ನು ಸೆ.19ರಂದೇ ವಾಯುಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ವಾಯುಪಡೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಬಧೌರಿಯಾ, ಐಎಎಫ್ ನ ಸದರನ್ ಏರ್ ಕಮಾಂಡ್ ಮುಖ್ಯಸ್ಥರಾಗಿ ಮಾರ್ಚ್ 2017 ರಿಂದ ಆಗಸ್ಟ್ 2018 ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಬಳಿಕ ವಾಯುಪಡೆಯ ತರಬೇತಿ ಕಮಾಂಡ್ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಭದೌರಿಯಾ ಅವರು ಈ ಹಿಂದೆ ಪ್ರಸ್ತುತ ವಾಯು ಸೇನಾ ಸಿಬ್ಬಂದಿ ವಿಭಾಗದ ಉಪಾಧ್ಯಕ್ಷರಾಗಿದ್ದರು. ಮೇ. 1 ರಂದು ಭದೌರಿಯಾ ಅವರು ಏರ್ ಮಾರ್ಷಲ್ ಅನಿಲ್ ಖೋಸ್ಲಾ ಅವರ ನಂತರ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದಕ್ಕೂ ಮೊದಲು ಭದೌರಿಯಾ ಐಎಎಫ್‌ನ ಬೆಂಗಳೂರು ಮೂಲದ ತರಬೇತಿ ಕಮಾಂಡ್‌ನ ಮುಖ್ಯಸ್ಥರಾಗಿದ್ದರು ಮತ್ತು ಉಪ ಮುಖ್ಯಸ್ಥರಾಗಿ ಅವರ ಹಿಂದಿನ ಅವಧಿಯಲ್ಲಿ, ಫ್ರಾನ್ಸ್‌ನೊಂದಿಗಿನ 36 ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಭಾರತೀಯ ಮಾತುಕತೆ ತಂಡದ ಅಧ್ಯಕ್ಷರಾಗಿದ್ದರು.

1980ರ ಜೂನ್ 15 ರಂದು ವಾಯುಪಡೆಯ ಗೌರವದ ಜೊತೆ ಅವರು ವಾಯುಸೇನೆಯ ಫೈಟರ್ ವಿಭಾಗಕ್ಕೆ ಸೇರಿದ್ದರು.
ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್, ಸೆಂಟ್ರಲ್ ಏರ್ ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿ ಮತ್ತು 2016 ರ ಜನವರಿ 28 ರಿಂದ ಫೆಬ್ರವರಿ 28 ರವರೆಗೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.

ಭದೌರಿಯಾ ಅವರು ಮಾರ್ಚ್ 1, 2017 ರಿಂದ ದಕ್ಷಿಣ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಆಗಸ್ಟ್ 1, 2018 ರಂದು ಬೆಂಗಳೂರು ಮೂಲದ ತರಬೇತಿ ಕಮಾಂಡ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಭದೌರಿಯಾ ಅವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಸುಮಾರು 4000 ಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ