ಪಟನಾ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕೌಟುಂಬಿಕ ಬಿಕ್ಕಟ್ಟುಗಳು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಪತಿ ತೇಜ್ಪ್ರತಾಪ್ ಯಾದವ್ ಒಬ್ಬ ಮಾದಕ ವ್ಯಸನಿ ಎಂದು ಆರೋಪಿಸಿದ್ದ ಲಾಲು ಹಿರಿಯ ಸೊಸೆ ಐಶ್ವರ್ಯ ರಾಯ್ , ಈಗ ತಮ್ಮ ವೈವಾಹಿಕ ಜೀವನದ ಸಮಸ್ಯೆಗಳಿಗೆ ಲಾಲು ಪುತ್ರಿ ಮೀಸಾ ಭಾರ್ತಿ ಕಾರಣ ಎಂದು ದೂರಿದ್ದಾರೆ.
ಶ್ರೀಕೃಷ್ಣನಾದ ತೇಜ್ ಪ್ರತಾಪ್; ವೈರಲ್ ಆಯ್ತು ಈ ಅವತಾರ
''ತೇಜ್ ಪ್ರತಾಪ್ ಜತೆಗೆ ನಾನು ಸಂತೋಷವಾಗಿ ಜೀವನ ನಡೆಸುವುದು ಮೀಸಾಗೆ ಇಷ್ಟವಿಲ್ಲ. ಜತೆಗೆ ಪದೇಪದೆ ವಿಷ ಸೇವಿಸುವ ಬೆದರಿಕೆಯನ್ನು ತಾಯಿ ರಾಬ್ಡಿ ದೇವಿಗೆ ತೇಜ್ಪ್ರತಾಪ್ ಒಡ್ಡುತ್ತಿದ್ದರು. ಹಾಗಾಗಿ ಬೇರೆ ದಾರಿ ಕಾಣದೆ ಆ ಮನೆಯಿಂದ ಹೊರಬಂದೆ,'' ಎಂದು ಐಶ್ವರ್ಯ ಹೇಳಿರುವ ವಿಡಿಯೊ ವೈರಲ್ ಆಗಿದೆ.
ನನ್ನ ಕುಟುಂಬವೆಲ್ಲ ಪತ್ನಿ ಪರ, ಇನ್ನು ಅಪ್ಪನ ಮಾತು ಕೇಳಲ್ಲ: ಲಾಲು ಪುತ್ರ ತೇಜ್ ಪ್ರತಾಪ್
2018ರ ಮೇನಲ್ಲಿತೇಜ್ಪ್ರತಾಪ್ ಮತ್ತು ಐಶ್ವರ್ಯ ವಿವಾಹ ನಡೆದಿತ್ತು. ಕೆಲವೇ ತಿಂಗಳಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಶ್ರೀಕೃಷ್ಣನಾದ ತೇಜ್ ಪ್ರತಾಪ್; ವೈರಲ್ ಆಯ್ತು ಈ ಅವತಾರ
''ತೇಜ್ ಪ್ರತಾಪ್ ಜತೆಗೆ ನಾನು ಸಂತೋಷವಾಗಿ ಜೀವನ ನಡೆಸುವುದು ಮೀಸಾಗೆ ಇಷ್ಟವಿಲ್ಲ. ಜತೆಗೆ ಪದೇಪದೆ ವಿಷ ಸೇವಿಸುವ ಬೆದರಿಕೆಯನ್ನು ತಾಯಿ ರಾಬ್ಡಿ ದೇವಿಗೆ ತೇಜ್ಪ್ರತಾಪ್ ಒಡ್ಡುತ್ತಿದ್ದರು. ಹಾಗಾಗಿ ಬೇರೆ ದಾರಿ ಕಾಣದೆ ಆ ಮನೆಯಿಂದ ಹೊರಬಂದೆ,'' ಎಂದು ಐಶ್ವರ್ಯ ಹೇಳಿರುವ ವಿಡಿಯೊ ವೈರಲ್ ಆಗಿದೆ.
ನನ್ನ ಕುಟುಂಬವೆಲ್ಲ ಪತ್ನಿ ಪರ, ಇನ್ನು ಅಪ್ಪನ ಮಾತು ಕೇಳಲ್ಲ: ಲಾಲು ಪುತ್ರ ತೇಜ್ ಪ್ರತಾಪ್
2018ರ ಮೇನಲ್ಲಿತೇಜ್ಪ್ರತಾಪ್ ಮತ್ತು ಐಶ್ವರ್ಯ ವಿವಾಹ ನಡೆದಿತ್ತು. ಕೆಲವೇ ತಿಂಗಳಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.