ಆ್ಯಪ್ನಗರ

ಉಳಿದ ದೇವರುಗಳ ಜಾತಿ ಹೇಳಿ: ಸಿಎಂ ಯೋಗಿಗೆ ಅಖಿಲೇಶ್‌ ಆಗ್ರಹ

ದಯವಿಟ್ಟು ಎಲ್ಲ ದೇವರ ಜಾತಿ ಹೇಳಿ.. ನನ್ನಜಾತಿಗೆ ಸೇರಿದ ದೇವರನ್ನು ಪ್ರಾರ್ಥಿಸಲು ಅನುಕೂಲ- ಎಂದು ಯೋಗಿಗೆ ಟಾಂಗ್‌ ಕೊಟ್ಟ ಅಖಿಲೇಶ್‌ ಯಾದವ್!

Vijaya Karnataka 13 Dec 2018, 5:00 am
ಲಖನೌ: ''ಯೋಗಿ ಆದಿತ್ಯನಾಥ್‌ ಅವರೇ, ನೀವು ಹನುಮಂತ ದಲಿತ ಅಂತ ಹೇಳಿದಿರಿ.. ದಯವಿಟ್ಟು ಉಳಿದ ದೇವರುಗಳ ಜಾತಿಯನ್ನೂ ಬಹಿರಂಗಪಡಿಸಿ. ಆಗ ನನಗೆ ನನ್ನ ಜಾತಿಯ ದೇವರಲ್ಲಿ ಪ್ರಾರ್ಥನೆ ಮಾಡಲು ಸುಲಭವಾಗುತ್ತದೆ,''- ಇದು ಸಮಾಜವಾದಿ ಪಕ್ಷ ನಾಯ ನಾಯಕ ಅಖಿಲೇಶ್‌ ಯಾದವ್‌ ಅವರ ಮನವಿ!
Vijaya Karnataka Web BNG-1212-2-2-AKHILESHYADAV2

ರಾಜಸ್ಥಾನದ ಆಳ್ವಾರ್‌ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಯಲಿಯಲ್ಲಿ ಯೋಗಿ ಅವರು, ''ಹನುಮಂತ ಅರಣ್ಯವಾಸಿ, ದಮನಿತ ಮತ್ತು ದಲಿತ.'' ಎಂದಿದ್ದರು. ಇದಕ್ಕೆ ಅಖಿಲೇಶ್‌ ಅವರು ತಡವಾಗಿ ಟಾಂಗ್‌ ನೀಡಿದ್ದಾರೆ.
ಆದಿತ್ಯನಾಥ್‌ ಅವರ ಈ ಹೇಳಿಕೆಗೆ ಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಯ ಬಹರಿಚ್‌ ಸಂಸದೆ ಸಾವಿತ್ರಿ ಬಾಯಿ ಫುಲೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ