ಆ್ಯಪ್ನಗರ

ಗುಜರಾತ್‌ ಕತ್ತೆಗಳ ಪ್ರಚಾರ ಬೇಡ: ಬಿಗ್‌ ಬಿಗೆ ಅಖಿಲೇಶ್‌

ಉತ್ತರ ಪ್ರದೇಶದ ರಾಜಕೀಯ ಕೆಸರೆರಚಾಟದಲ್ಲಿ ಅನಗತ್ಯವಾಗಿ ಬಿಗ್ ಬಿ ಹೆಸರನ್ನು ಎಳೆಯಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 21 Feb 2017, 1:56 pm
ಲಖನೌ: ಉತ್ತರ ಪ್ರದೇಶದ ರಾಜಕೀಯ ಕೆಸರೆರಚಾಟದಲ್ಲಿ ಅನಗತ್ಯವಾಗಿ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಹೆಸರನ್ನು ಎಳೆಯಲಾಗಿದೆ. 'ಗುಜರಾತ್‌ ಕತ್ತೆ'ಗಳ ಪ್ರಚಾರ ಮಾಡದಂತೆ ಬಿಗ್‌ಬಿಗೆ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಮನವಿ ಮಾಡಿದ್ದಾರೆ.
Vijaya Karnataka Web akhilesh to big bbig b please dont endorse gujarats donkeys
ಗುಜರಾತ್‌ ಕತ್ತೆಗಳ ಪ್ರಚಾರ ಬೇಡ: ಬಿಗ್‌ ಬಿಗೆ ಅಖಿಲೇಶ್‌


ರಾಯ್‌ಬರೇಲಿ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರಮೋದಿ ಆರೋಪಕ್ಕೆ ಪ್ರತಿಯಾಗಿ ಅಖಿಲೇಶ್‌, ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರ ಗುಜರಾತ್‌ ಪ್ರವಾಸೋದ್ಯಮ ಜಾಹೀರಾತಿನ ಬಗ್ಗೆ ಕಟಕಿಯಾಡಿದ್ದಾರೆ.

'ಟಿವಿಯಲ್ಲಿ ಕತ್ತೆಗಳಿರುವ ಜಾಹೀರಾತು ಬರುತ್ತದೆ, ಈ ದೇಶದ ದೊಡ್ಡ ಸ್ಟಾರ್‌ ಬಳಿ ಒಂದು ಮನವಿ, ಗುಜರಾತಿನ ಕತ್ತೆಗಳ ಪ್ರಚಾರ ಮಾಡಬೇಡಿ', ಎಂದು ಅಮಿತಾಭ್‌ ಬಚ್ಚನ್‌ ಹೆಸರು ಪ್ರಸ್ತಾಪಿಸದೆ ಅಖಿಲೇಶ್‌ ಹೇಳಿದ್ದಾರೆ.

'ಗುಜರಾತಿನ ಜನ ಕತ್ತೆಗಳ ಜಾಹೀರಾತು ಮಾಡುತ್ತಿದ್ದರೂ, ಕೇವಲ ಸ್ಮಶಾನದ ಕೆಲಸ ಮಾಡುತ್ತಿದ್ದೇವೆ ಎಂದು ನಮ್ಮನ್ನು ದೂರುತ್ತಾರೆ,' ಎಂದು ಅಖಿಲೇಶ್‌ ಗುಡುಗಿದ್ದಾರೆ.

ಒಂದು ಗ್ರಾಮದಲ್ಲಿ ಕಬರಿಸ್ತಾನ್‌ (ಸಶ್ಮಾನ ) ಇದ್ದರೆ, ಸಂಶಾನ್‌ (ರುದ್ರಭೂಮಿ)ಯೂ ಇರಬೇಕು. ರಂಜಾನ್‌ಗೆ ಕರೆಂಟ್‌ ಇದ್ದರೆ, ದೀಪಾವಳಿಗೂ ಇರಬೇಕು ಭೇದ ಭಾವ ಸಲ್ಲದು' ಎನ್ನುವ ಮೂಲಕ ಉತ್ತರ ಪ್ರದೇಶದ ಆಡಳಿತಾರೂಢ ಎಸ್ಪಿ ತಾರತಮ್ಯ ಮಾಡುತ್ತಿದ್ದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಅಖಿಲೇಶ್‌ ತಿರುಗೇಟು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ