ಆ್ಯಪ್ನಗರ

Akhilesh Yadav: ''ಈ ಬಾರಿ ಅಧಿಕಾರದಿಂದ ತ್ಯಜಿಸಿ'' - ಪ್ರಧಾನಿ ಮೋದಿಗೆ ಅಖಿಲೇಶ್‌ ಯಾದವ್ ಟಾಂಗ್

2014ರ ಲೋಕಸಭೆ ಚುನಾವಣೆಗೂ ಮುನ್ನ 'ಅಬ್‌ ಕೀ ಬಾರ್ ಮೋದಿ ಸರ್ಕಾರ್' ( ಈ ಬಾರಿ ಮೋದಿ ಸರಕಾರ ) ಎಂಬ ಮೋದಿಯ ಘೋಷವಾಕ್ಯ ಜನಪ್ರಿಯತೆ ಗಳಿಸಿತ್ತು. ಈ ಹಿನ್ನೆಲೆ, ಪ್ರಧಾನಿ ಮೋದಿಯ ಘೋಷ ವಾಕ್ಯಕ್ಕೆ ಟಾಂಗ್ ನೀಡಿದ ಉತ್ತರಪ್ರದೇಶ ಮಾಜಿ ಸಿಎಂ, 'ಅಬ್‌ ಕೀ ಬಾರ್, ಖೋ ದೀ ಸರ್ಕಾರ್' ( ಈ ಬಾರಿ ಅಧಿಕಾರದಿಂದ ತ್ಯಜಿಸಬೇಕಾಗುತ್ತದೆ)' ಎಂದು ಮಂಗಳವಾರ ಟ್ವೀಟ್ ಮಾಡಿ ಬಿಜೆಪಿ ಹಾಗೂ ಪ್ರಮುಖವಾಗಿ ಪ್ರಧಾನಿ ಮೋದಿಯನ್ನು ವ್ಯಂಗ್ಯ ಮಾಡಿದ್ದಾರೆ.

Vijaya Karnataka Web 12 Dec 2018, 2:10 pm
ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನೆಡೆಯಾಗಿದ್ದು, ಐದೂ ರಾಜ್ಯಗಳಲ್ಲಿ ಅಧಿಕಾರ ಪಡೆಯಲು ವಿಫಲವಾಗಿದೆ. ಅಲ್ಲದೆ, ಅಧಿಕಾರದಲ್ಲಿದ್ದ ಉತ್ತರ ಭಾರತದ ಮೂರು ಪ್ರಮುಖ ರಾಜ್ಯಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಪ್ರಧಾನಿ ಮೋದಿಯ 2014 ರ ಪ್ರಮುಖವಾದ ಘೋಷವಾಕ್ಯವನ್ನು ಬದಲಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
Vijaya Karnataka Web Akhilesh Yadav


2014ರ ಲೋಕಸಭೆ ಚುನಾವಣೆಗೂ ಮುನ್ನ 'ಅಬ್‌ ಕೀ ಬಾರ್ ಮೋದಿ ಸರ್ಕಾರ್' ( ಈ ಬಾರಿ ಮೋದಿ ಸರಕಾರ ) ಎಂಬ ಮೋದಿಯ ಘೋಷವಾಕ್ಯ ಜನಪ್ರಿಯತೆ ಗಳಿಸಿತ್ತು. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಈ ಘೋಷವಾಕ್ಯ ಕೂಡ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು. ಆದರೆ, ಮಂಗಳವಾರ ನಡೆದ ಪಂಚರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಹಿನ್ನೆಡೆಯಾಗಿರುವುದು ಗೋಚರವಾಗುತ್ತಿದ್ದಂತೆ, ಪ್ರಧಾನಿ ಮೋದಿಯ ಘೋಷ ವಾಕ್ಯಕ್ಕೆ ಟಾಂಗ್ ನೀಡಿದ ಉತ್ತರಪ್ರದೇಶ ಮಾಜಿ ಸಿಎಂ, 'ಅಬ್‌ ಕೀ ಬಾರ್, ಖೋ ದೀ ಸರ್ಕಾರ್' ( ಈ ಬಾರಿ ಅಧಿಕಾರದಿಂದ ತ್ಯಜಿಸಬೇಕಾಗುತ್ತದೆ)' ಎಂದು ಮಂಗಳವಾರ ಟ್ವೀಟ್ ಮಾಡಿ ಬಿಜೆಪಿ ಹಾಗೂ ಪ್ರಮುಖವಾಗಿ ಪ್ರಧಾನಿ ಮೋದಿಯನ್ನು ವ್ಯಂಗ್ಯ ಮಾಡಿದ್ದಾರೆ.

ಅಲ್ಲದೆ ಇದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿದ್ದ ಅಖಿಲೇಶ್‌, ಮಹಾಘಟಬಂಧನಕ್ಕೆ ಬೆಂಬಲ ನೀಡಿದ್ದಾರೆ.'' ಒಂದೊಂದೇ ಸೇರಿಕೊಂಡು ಹನ್ನೊಂದಾದರೆ ಅಧಿಕಾರದಲ್ಲಿರುವ ದೊಡ್ಡವರು ಅಥವಾ ಅತಿ ಎತ್ತರದವರು ಸಹ ಧೂಳು ಹಿಡಿಯಬೇಕಾಗುತ್ತದೆ'' ಎಂದು ಮಹಾಘಟಬಂಧನಕ್ಕೆ ಬೆಂಬಲ ಸೂಚಿಸಿ ಪರೋಕ್ಷವಾಗಿ ಅಖಿಲೇಶ್‌ ಯಾದವ್ ಟ್ವೀಟ್‌ ಮಾಡಿದ್ದಾರೆ. ಪಂಚರಾಜ್ಯ ಚುನಾವಣೆ, ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ನೀಡದೆ ಸಮಾಜವಾದಿ ಪಕ್ಷ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು.

ಆದರೆ, ಮಂಗಳವಾರ ಅವರು ಈ ರೀತಿ ಟ್ವೀಟ್ ಮಾಡಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಮತ್ತೆ ಬಲ ಬಂದಂತಾಗಿದೆ. ಹಹೀಗಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷ ಮಹಾಮೈತ್ರಿಕೂಟಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ