ಆ್ಯಪ್ನಗರ

ಬುದ್ಧಿ ಕಲಿಯದ ಪಾಕ್‌ಗೆ ತಕ್ಕ ಪ್ರತ್ಯುತ್ತರ: ರಾಜನಾಥ್‌

ಪವಿತ್ರ ರಮ್ಜಾನ್‌ ಮಾಸದಲ್ಲಿ ಭಾರತ ಕದನ ವಿರಾಮ ಕಾಯ್ದುಕೊಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಶತ್ರು ರಾಷ್ಟ್ರದ ದಾಳಿಗೆ ಯಾವ ರೀತಿಯ ಪ್ರತೀಕಾರ ನೀಡುತ್ತೀರಿ ಎಂದು ನಮ್ಮ ಸರಕಾರ ಭದ್ರತಾ ಪಡೆಗಳನ್ನು ಕೇಳುತ್ತಾ ಕೂರುವುದಿಲ್ಲ. ತಕ್ಕ ಪ್ರತೀಕಾರ ಕೊಟ್ಟೇ ಕೊಡುತ್ತಾರೆ ಎಂದು ಹೇಳುವ ಮೂಲಕ ಗೃಹ ಸಚಿವ ರಾಜನಾಥ್‌ ಸಿಂಗ್‌ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

Vijaya Karnataka 23 May 2018, 8:09 am
ಹೊಸದಿಲ್ಲಿ: ಪವಿತ್ರ ರಮ್ಜಾನ್‌ ಮಾಸದಲ್ಲಿ ಭಾರತ ಕದನ ವಿರಾಮ ಕಾಯ್ದುಕೊಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಶತ್ರು ರಾಷ್ಟ್ರದ ದಾಳಿಗೆ ಯಾವ ರೀತಿಯ ಪ್ರತೀಕಾರ ನೀಡುತ್ತೀರಿ ಎಂದು ನಮ್ಮ ಸರಕಾರ ಭದ್ರತಾ ಪಡೆಗಳನ್ನು ಕೇಳುತ್ತಾ ಕೂರುವುದಿಲ್ಲ. ತಕ್ಕ ಪ್ರತೀಕಾರ ಕೊಟ್ಟೇ ಕೊಡುತ್ತಾರೆ ಎಂದು ಹೇಳುವ ಮೂಲಕ ಗೃಹ ಸಚಿವ ರಾಜನಾಥ್‌ ಸಿಂಗ್‌ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.
Vijaya Karnataka Web 287584-rajnath-singh


ಗಡಿ ಭದ್ರತಾ ಪಡೆಯ 16ನೇ ಸಂಸ್ಥಾಪನಾ ದಿನಾಚರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪಾಕ್‌ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಆ ರಾಷ್ಟ್ರವನ್ನು ತರಾಟೆಗೆ ತೆಗೆದುಕೊಂಡರು. ಭಾರತ ಶಾಂತಿ ಬಯಸಿದರೂ ನಮ್ಮ ನೆರೆಯ ದೇಶ ಸರಿದಾರಿಗೆ ಬರುತ್ತಿಲ್ಲ. ಪೆಟ್ಟು ಬಿದ್ದರೂ ಬುದ್ಧಿ ಕಲಿಯದ ನೆರೆರಾಷ್ಟ್ರದ ಈ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟಕರವಾಗಿದೆ. ನಿಜಕ್ಕೂ ಇದು ಸಂಶೋಧನಾ ವಿಷಯವಾಗಿದೆ ಎಂದು ಹೇಳಿದರು.

ಶತ್ರುಗಳತ್ತ ಮೊದಲು ಗುಂಡು ಹಾರಿಸಬಾರದು ಎಂದು ಬಿಎಸ್‌ಎಫ್‌ ಹಾಗೂ ಇತರ ಭದ್ರತಾ ಪಡೆಗಳಿಗೆ ಸರಕಾರ ಸೂಚಿಸಿದೆ. ಒಂದೊಮ್ಮೆ ಶತ್ರು ಪಡೆಗಳಿಂದ ನಿಮ್ಮತ್ತ ಗುಂಡು ಬಂದರೆ, ಅದಕ್ಕೆ ಯಾವ ರೀತಿಯ ದಿಟ್ಟ ಪ್ರತ್ಯುತ್ತರ ನೀಡಬೆಕೆಂಬುದು ನಿಮಗೆ ಬಿಟ್ಟದ್ದು. ಈ ವಿಚಾರದಲ್ಲಿ ಸರಕಾರ ನಿಮ್ಮನ್ನು ಪ್ರಶ್ನಿಸುತ್ತಾ ಕೂರುವುದಿಲ್ಲ ಎಂದು ಹೇಳಿದರು.

ಸ್ಮಾರ್ಟ್‌ ಬೇಲಿ:
ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಭಾಗವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ರಕ್ಷಿಸುವುದರತ್ತ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಬೇಲಿಯನ್ನು ಹಾಕುವ ಕಾರ್ಯ ಕೆಲವೇತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ನಾಲ್ವರು ನಾಗರಿಕರಿಗೆ ಗಾಯ
: ಶೋಪಿಯಾನ್‌ನಲ್ಲಿ ಪ್ರತಿಭಟನಾ ನಿರತ ಗುಂಪುಗಳನ್ನು ಚದುರಿಸಲು ಸೇನೆ ಹಾರಿಸಿದ ಗುಂಡಿಗೆ ಸಹೋದರಿಯರಿಬ್ಬರು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಸ್ಥಳೀಯರು ಮಸೀದಿಯೊಂದರ ಬಳಿ ಇಫ್ತಿಯಾರ್‌ ಕೂಟ ಆಯೋಜಿಸಲು ಹಾಕಿದ್ದ ಟೆಂಟ್‌ಅನ್ನು ಸೇನೆ ತೆರವುಗೊಳಿಸಿದ್ದೇ ಸಂಘರ್ಷ ಭುಗಿಲೇಳಲು ಕಾರಣವಾಗಿದೆ.

ಪಾಕ್‌ ಮತ್ತೆ ಪುಂಡಾಟ:
ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಪುಂಡಾಟ ನಡೆಸಿದೆ. ಪಾಕ್‌ ಪಡೆಗಳು ಮಂಗಳವಾರ ಜಮ್ಮು ಜಿಲ್ಲೆಯ ಅರ್ನಿಯಾ, ಆರ್‌ಎಸ್‌ ಪುರ ಸೆಕ್ಟರ್‌, ಕಠುವಾ ಜಿಲ್ಲೆಯ ಹಿರಾನಗರ ಸೆಕ್ಟರ್‌ ಗಡಿಯ ಮುಂಚೂಣಿ ಠಾಣೆ ಹಾಗೂ ಜನವಸತಿ ಪ್ರದೇಶಗಳ ಮೇಲೆ ಮೊರ್ಟಾರ್‌ ಶೆಲ್‌ ದಾಳಿ ನಡೆಸಿವೆ. ಭಾರತೀಯ ಪಡೆಗಳು ದಿಟ್ಟ ಪ್ರತಿದಾಳಿ ನಡೆಸಿ ಪಾಕ್‌ ರೇಂಜರ್ಸ್‌ಗಳನ್ನು ಹಿಮ್ಮೆಟ್ಟಿಸಿವೆ. ಪಾಕ್‌ ದಾಳಿಗೆ 70 ವರ್ಷದ ವೃದ್ಧೆ ಸೇರಿದಂತೆ ಐವರು ನಾಗರಿಕರು ಬಲಿಯಾಗಿದ್ದಾರೆ. ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ