ಆ್ಯಪ್ನಗರ

ಜುಬಾ: ಭಾರತೀಯರನ್ನು ರಕ್ಷಿಸಲು ಅಕ್ಷಯ್ ಮನವಿ

ಜುಬಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರ ಬಗ್ಗೆ ಅತೀವ ಕಾಳಜಿ ತೋರಿದ್ದಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್.

ಏಜೆನ್ಸೀಸ್ 14 Jul 2016, 3:34 pm
ಹೊಸದಿಲ್ಲಿ: ಕುವೈತ್‌ನಲ್ಲಿ ಸಿಕ್ಕಿ ಹಾಕಿಕೊಂಡ ಭಾರತೀಯರನ್ನು ರಕ್ಷಿಸುವ ವ್ಯಕ್ತಿಯೊಬ್ಬನ ಕಥಾಹಂದರವುಳ್ಳ 'ಏರ್‌ಲಿಫ್ಟ್' ಚಿತ್ರದ ನಾಯಕನಾಗಿ ನಟಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ದಕ್ಷಿಣ ಸುಡಾನ್‌ನ ಜುಬಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರ ಬಗ್ಗೆ ಅತೀವ ಕಾಳಜಿ ತೋರಿದ್ದಾರೆ.
Vijaya Karnataka Web akshay kumar appeals to sushma swaraj to speed up evacuation of indians from sudan
ಜುಬಾ: ಭಾರತೀಯರನ್ನು ರಕ್ಷಿಸಲು ಅಕ್ಷಯ್ ಮನವಿ


'ಜುಬಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಆದಷ್ಟು ಬೇಗ ರಕ್ಷಿಸಿ,' ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ಸರಕಾರಿ ಪರ ಮತ್ತು ವಿರೋಧ ಪಡೆಗಳ ನಡುವೆ ಭುಗಿಲೆದ್ದ ಕಲಹದಿಂದ ಜುಬಾದಲ್ಲಿ ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಪಡಪಾರದ ಪಾಡು ಪಡುತ್ತಿದ್ದಾರೆ.

ಅಕ್ಷಯ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ, 'ಭಾರತೀಯರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ,' ಎಂದು ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ