ಆ್ಯಪ್ನಗರ

ಜೈಷ್ ಎ ಮೊಹಮ್ಮದ್‌ ಅಂಗ ಸಂಸ್ಥೆ ಅಲ್‌-ಬದರ್‌ ಉಗ್ರ ಸಂಘಟನೆಯ ನೇಮಕ ಪ್ರಕ್ರಿಯೆ ನಿರಾತಂಕ

ಭಾರತೀಯ ವಾಯುಪಡೆಯು ವಾಯುದಾಳಿ ಮೂಲಕ ಉಗ್ರರ ನೆಲೆಗಳನ್ನು ನಾಶಪಡಿಸಿದ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾ ಪ್ರದೇಶದಲ್ಲಿ ಹೊಸದಾಗಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಶಾಂತಿಯ ದ್ಯೋತಕವಾಗಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗುರುವಾರ ಸಂಸತ್‌ನಲ್ಲಿ ಘೋಷಣೆ ಮಾಡಿದ ಸಮಯದಲ್ಲಿಯೇ ಅಲ್‌- ಬದರ್‌ ಸಹ ನೇಮಕ ಪ್ರಕ್ರಿಯೆ ಶುರು ಮಾಡುವ ಘೋಷಣೆ ಮಾಡಿದ್ದು ವಿಪರ್ಯಾಸ.

Vijaya Karnataka 3 Mar 2019, 7:41 am
ಶ್ರೀನಗರ: ವಿಶ್ವಸಂಸ್ಥೆಯು ಜೈಷೆ ಮೊಹಮದ್‌ ಉಗ್ರ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂದು ಭಾರತ ಪ್ರಯತ್ನ ತೀವ್ರಗೊಳಿಸಿದೆ. ಆದರೆ ಜೈಷೆ ಮೊಹಮದ್‌ ಸಂಘಟನೆಯ ಅಂಗಸಂಸ್ಥೆಯಾದ ಅಲ್‌-ಬದರ್‌ 'ಉಗ್ರರ ನೇಮಕ' ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
Vijaya Karnataka Web masood azhar


ಭಾರತೀಯ ವಾಯುಪಡೆಯು ವಾಯುದಾಳಿ ಮೂಲಕ ಉಗ್ರರ ನೆಲೆಗಳನ್ನು ನಾಶಪಡಿಸಿದ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾ ಪ್ರದೇಶದಲ್ಲಿ ಹೊಸದಾಗಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಶಾಂತಿಯ ದ್ಯೋತಕವಾಗಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗುರುವಾರ ಸಂಸತ್‌ನಲ್ಲಿ ಘೋಷಣೆ ಮಾಡಿದ ಸಮಯದಲ್ಲಿಯೇ ಅಲ್‌- ಬದರ್‌ ಸಹ ನೇಮಕ ಪ್ರಕ್ರಿಯೆ ಶುರು ಮಾಡುವ ಘೋಷಣೆ ಮಾಡಿದ್ದು ವಿಪರ್ಯಾಸ.

ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದ ಸ್ಥಳೀಯ ಭಾಷೆ ಪಾಷ್ತೊದಲ್ಲಿ ಮಾತನಾಡಿರುವ ಸಂಘಟನೆ ವಕ್ತಾರ, ಭಾರತದ ವಾಯುದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಸಂಘಟನೆ ಸೇರುವಂತೆ ಮನವಿ ಮಾಡಿದ್ದಾನೆ, ಜತೆಗೆ ಪಾಕಿಸ್ತಾನ ಸೇನೆ ಮತ್ತು ಜಿಹಾದಿಗಳು ಒಂದೇ ಎಂದೂ ಹೇಳಿದ್ದಾನೆ. ಈತನ ವಿಡಿಯೊ ಸಂದೇಶವನ್ನು ಭಾರತೀಯ ಗುಪ್ತಚರ ವಿಭಾಗದ ಅಧಿಕಾರಿಗಳು ತುರ್ಜುಮೆ ಮಾಡಿದ್ದಾರೆ.

1998ರಿಂದಲೂ ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿರುವ ಅಲ್‌-ಬದರ್‌, ಜಮಾತೆ ಇಸ್ಲಾಮಿ ಜತೆಯೂ ನಿಕಟ ಸಂಬಂಧ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ