ಆ್ಯಪ್ನಗರ

ಮೋಸ್ಟ್‌ ವಾಂಟೆಡ್‌ ಅಲ್‌ ಕೈದಾ ಭಯೋತ್ಪಾದಕ ಮುಜಾಹಿರಿ ಅರೆಸ್ಟ್

ಭಾರತದಲ್ಲಿಯುವಕರಿಗೆ ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಪ್ರಚೋದಿಸುವುದು. ಬಳಿಕ ಅವರನ್ನು ಪಾಕ್‌ಗೆ ತರಬೇತಿಗಾಗಿ ಕಳುಹಿಸುವುದು ಉಗ್ರ ಮುಜಾಹಿರಿಯ ಕೃತ್ಯವಾಗಿತ್ತು.

PTI 23 Sep 2019, 6:09 am
ಜಮ್‌ಶೆಡ್‌ ಪುರ: ಭಾರತದಲ್ಲಿ ಪಾಕ್‌ ಪೋಷಿತ ಉಗ್ರ ಸಂಘಟನೆ ಅಲ್‌ ಕೈದಾಕ್ಕೆ ಭದ್ರ ನೆಲೆ ಕಲ್ಪಿಸುವ ಹೊಣೆ ಹೊತ್ತಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕಲಿಮುದ್ದೀನ್‌ ಮುಜಾಹಿರಿಯನ್ನು ಜಾರ್ಖಂಡ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web terror


ಟಾಟಾ ನಗರದ ರೈಲು ನಿಲ್ದಾಣದಲ್ಲಿಉಗ್ರ ನಿಗ್ರಹ ವಿಭಾಗದ ಪೊಲೀಸರು ಮುಜಾಹಿರಿಯನ್ನು ಪತ್ತೆ ಮಾಡಿ ಸೆರೆ ಹಿಡಿದಿದ್ದಾರೆ.

ಭಾರತದಲ್ಲಿ ಯುವಕರಿಗೆ ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಪ್ರಚೋದಿಸುವುದು. ಬಳಿಕ ಅವರನ್ನು ಪಾಕ್‌ಗೆ ತರಬೇತಿಗಾಗಿ ಕಳುಹಿಸುವುದು ಉಗ್ರ ಮುಜಾಹಿರಿಯ ಕೃತ್ಯವಾಗಿತ್ತು. ಜಮ್‌ಶೆಡ್‌ಪುರ ಮೂಲದವನಾದ ಮುಜಾಹಿರಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಉತ್ತರಪ್ರದೇಶ, ಗುಜರಾತ್‌, ಪಶ್ಚಿಮ ಬಂಗಾಳಕ್ಕೆ ವೇಷ ಮರೆಸಿಕೊಂಡು ಸಂಚರಿಸಿ ಯುವಕರನ್ನು ಭೇಟಿ ಮಾಡುತ್ತಿದ್ದ. ಉಗ್ರರ ದಾಳಿಗೆ ನೆರವು ನೀಡಿದ ಹಾಗೂ ಸಂಚು ರೂಪಿಸಿದ ಹಲವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಎಡಿಜಿಪಿ ಎಂ.ಎಲ್‌. ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಮತ್ತು ಇತರ ವಿದೇಶಗಳಿಗೂ ಉಗ್ರ ಮುಜಾಹಿರಿ ನಕಲಿ ಪಾಸ್‌ಪೋರ್ಟ್‌ ಹಾಗೂ ವೀಸಾ ಮೂಲಕ ಭೇಟಿ ನೀಡಿದ್ದಾನೆ. ಅಲ್ಲಿನ ಯುವಕರನ್ನು ಅಲ್‌ ಕೈದಾಗೆ ಸೇರುವಂತೆ ಪ್ರಚೋದಿಸಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಈತನ ಸಹಚರರಾಗಿದ್ದ ಮೊಹಮ್ಮದ್‌ ಅಬ್ದುಲ್‌ ರಹನ್‌ ಅಲಿಯಾಸ್‌ ಹೈದರ್‌ ಅಲಿಯಾಸ್‌ ಕಟ್ಕಿ, ಅಬ್ದುಲ್‌ ಸಮಿ ಅಲಿಯಾಸ್‌ ಉಜ್ಜೇರ್‌ ಅಲಿಯಾಸ್‌ ಹಸನ್‌ ಸದ್ಯ ತಿಹಾರ್‌ ಜೈಲಿನಲ್ಲಿ ಬಂಧಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ