ಆ್ಯಪ್ನಗರ

ಕಾಶ್ಮೀರದ ಸ್ವಾತಂತ್ರ್ಯಕ್ಕೆ ರಕ್ತಪಾತ: ಭಾರತಕ್ಕೆ ಅಲ್ ಕೈದಾ ಮುಖ್ಯಸ್ಥನ ಎಚ್ಚರಿಕೆ

ಭಾರತದ ಮೇಲೆ ದಾಳಿ ಮಾಡಲು ಉಗ್ರ ಸಂಘಟನೆ ಅಲ್ ಕೈದಾ ಮುಖ್ಯಸ್ಥ ಕರೆ ನೀಡಿದ್ದಾನೆ.

TIMESOFINDIA.COM 10 Jul 2019, 3:06 pm
ಹೊಸದಿಲ್ಲಿ: ಭಾರತೀಯ ಸೈನ್ಯ ಮತ್ತು ಭಾರತದ ಮೇಲೆ ನಿರಂತರ ದಾಳಿಗೆ ಕರೆ ನೀಡಿರುವ ಅಲ್ ಕೈದಾ ಮುಖ್ಯಸ್ಥ ಐಮಾನ್ ಇಲ್ ಜವಾಹರಿ ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಬದ್ಧ ಎಂದು ಹೇಳಿದ್ದಾನೆ.
Vijaya Karnataka Web Al Kaida


ಅಷ್ಟೇ ಅಲ್ಲ ಗಡಿಯಲ್ಲಿ ಉಗ್ರವಾದದ ಬೆಂಕಿಗೆ ತುಪ್ಪ ಸುರಿಯುತ್ತಿರುವುದು ಪಾಕಿಸ್ತಾನ ಎಂಬ ಸತ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ಮಾತುಗಳನ್ನಾಡಿದ್ದಾನೆ.

ಏಕತ್ರ ಮನಸ್ಸಿನಿಂದ ಭಾರತೀಯ ಸೇನೆ ಮತ್ತು ಸರಕಾರದ ಮೇಲೆ ನಿರಂತರ ದಾಳಿ ನಡೆಸಿ, ಭಾರತದ ಆರ್ಥಿಕತೆಗೆ ಹೊಡೆತ ನೀಡಬೇಕು ಮತ್ತು ಭಾರತದ ಜಂಘಾಬಲವನ್ನು ಉಡುಗಿಸಬೇಕು ಎಂದಾತ ಕರೆ ಕೊಟ್ಟಿದ್ದಾನೆ. ಆದರೆ ಕಾಶ್ಮೀರದ ಮಸೀದಿಗಳು, ಮಾರುಕಟ್ಟೆಗಳು ಮತ್ತು ಮುಸ್ಲಿಮರ ಒಟ್ಟುಗೂಡಿಸುವ ಸ್ಥಳಗಳನ್ನು ಗುರಿಯಾಗಿಸಬೇಡಿ ಎಂದು ಜವಾಹರಿ ಉಗ್ರರಿಗೆ ಸಂದೇಶ ನೀಡಿದ್ದಾನೆ.

ಜತೆಗೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಮುಕ್ತಗೊಳಿಸಲು ನಮ್ಮ ಸಂಘಟನೆ ಬದ್ಧವಾಗಿದೆ, ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಮುಜಾಹಿದೀನ್‌ಗಳಿಗೆ ಅಲ್ ಕೈದಾ ಸೂಕ್ತ ತರಬೇತಿ ನೀಡುತ್ತಿದೆ ಎಂದಾತ ಹೇಳಿದ್ದಾನೆ.

ಆತ ತನ್ನ ಭಾಷಣದ ಮಧ್ಯೆ ಮೇ ತಿಂಗಳಲ್ಲಿ ಭದ್ರತಾ ಪಡೆಗಳಿಂದ ಹತ್ಯೆಯಾದ ಭಯೋತ್ಪಾದಕ ಜಾಕಿರ್ ಮೂಸಾ ಬಗ್ಗೆ ನೇರವಾಗಿ ಉಲ್ಲೇಖಿಸಲಿಲ್ಲ, ಆದರೆ ಆತನ ಮಾತಿನ ಮಧ್ಯೆ ಸ್ಕ್ರೀನ್ ಮೇಲೆ ಮೂಸಾ ಭಾವಚಿತ್ರ ಮೂಡಿ ಮರೆಯಾಯಿತು.

ಅಪಘಾನಿಸ್ತಾನದಲ್ಲಿ ಅಮೆರಿಕ ವಿರುದ್ಧ ಜಿಹಾದ್ ಎಲ್ಲಾ ಮುಸ್ಲಿಮರ "ವೈಯಕ್ತಿಕ ಬಾಧ್ಯತೆ" ಎಂದಾತ ಪ್ರಚೋದನೆ ನೀಡುತ್ತಿರುವುದು ವೀಡಿಯೋದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ