ಆ್ಯಪ್ನಗರ

ರಸ್ತೆಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಅಂಕುಶ ಹಾಕಿದ ಅಲಿಗಢ ಜಿಲ್ಲಾಡಳಿತ

ಎರಡು ಸಮುದಾಯಗಳ ಸಂಘಟನೆಗಳನ್ನು ಕರೆಸಿ ಸಭೆ ನಡೆಸಿದ ಮ್ಯಾಜಿಸ್ಪ್ರೇಟ್‌ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ಮಂದಿರ ಮತ್ತು ಮಸೀದಿಗಳ ಒಳಗೆ ಮಾತ್ರ ನಿಗದಿಪಡಿಸಿ. ರಸ್ತೆಗಳಿಗೆ ಅದನ್ನು ತರಬೇಡಿ ಎಂದು ನಿರ್ದೇಶನ ನೀಡಿದೆ.

PTI 27 Jul 2019, 5:00 am
ಲಖನೌ: ರಸ್ತೆಗಳಲ್ಲಿ ಹನುಮಾನ್‌ ಚಾಲಿಸಾ ಪಠನೆ, ನಮಾಜ್‌ನಂಥ ಆಚರಣೆಗಳನ್ನು ಹಮ್ಮಿಕೊಳ್ಳಲು ಹಲವು ಸಂಘಟನೆಗಳು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗಾಗುವ ಅನನುಕೂಲ ತಪ್ಪಿಸಲು ಅಲಿಗಢ ಜಿಲ್ಲಾಡಳಿತ ಖಡಕ್‌ ಕ್ರಮಕ್ಕೆ ಮುಂದಾಗಿದೆ.
Vijaya Karnataka Web mike


ಮುಸ್ಲಿಂ ಸಮುದಾಯದವರು ಶುಕ್ರವಾರಗಳಂದು ನಮಾಜ್‌ ಮಾಡುವ ವೇಳೆ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಕೆಲವು ಸಂಘಟನೆಗಳು ಮಂಗಳವಾರದಂದು ಹನುಮಾನ್‌ ಚಾಲಿಸಾ ಪಠನೆ ಹಾಗೂ ಆರತಿಯನ್ನು ಕೂಡ ರಸ್ತೆಗಳಲ್ಲಿ ಮಾಡಲು ಆರಂಭಿಸಿ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆ ನೀಡುತ್ತಿವೆ ಎಂದು ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಜಿಲ್ಲಾಡಳಿತ ವರದಿ ನೀಡಿ ಕ್ರಮಕ್ಕೆ ಮನವಿ ಮಾಡಿತ್ತು. ಎರಡು ಸಮುದಾಯಗಳ ಸಂಘಟನೆಗಳನ್ನು ಕರೆಸಿ ಸಭೆ ನಡೆಸಿದ ಮ್ಯಾಜಿಸ್ಪ್ರೇಟ್‌ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ಮಂದಿರ ಮತ್ತು ಮಸೀದಿಗಳ ಒಳಗೆ ಮಾತ್ರ ನಿಗದಿಪಡಿಸಿ. ರಸ್ತೆಗಳಿಗೆ ಅದನ್ನು ತರಬೇಡಿ. ಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಯಾಗುವುದು ಬೇಡ ಎಂದು ನಿರ್ದೇಶನ ನೀಡಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಿಂದ ಜನಸಾಮಾನ್ಯರಿಗೆ ಅನನುಕೂಲವಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಡಳಿತ ಧಾರ್ಮಿಕ ಮುಖಂಡರಿಗೆ ಖಡಕ್‌ ಆದೇಶ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ