ಆ್ಯಪ್ನಗರ

ನಾಪತ್ತೆಯಾಗುವ ಮೊದಲು ಅಡುಗೆ ಆಟವಾಡುತ್ತಿದ್ದ ಟ್ವಿಂಕಲ್

ಅಂದು ಮೇ 30. ಸಾವೇ ಎಂದರೇನು ಎಂದು ಅರಿಯದ ಪುಟಾಣಿ ಟ್ವಿಂಕಲ್‌ಗೆ ತನ್ನ ಸಾವಿನ ಊಹೆ ಎಲ್ಲಿಂದ ಬರಲು ಸಾಧ್ಯ. ಮನೆಯಿಂದ ನಾಪತ್ತೆಯಾಗುವ ಕೆಲವು ಕ್ಷಣಗಳ ಮೊದಲು ಅವಳು ಅಡುಗೆ ಆಟವನ್ನಾಡುತ್ತ ಕುಳಿತಿದ್ದಳು. ಆ ಆಟದ ಸಾಮಾನುಗಳು ಈಗಲೂ ಅದೇ ಸ್ಥಿತಿಯಲ್ಲಿವೆ. ಅದನ್ನು ನೋಡುತ್ತ ಮನೆಯವರೆಲ್ಲ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

TIMESOFINDIA.COM 9 Jun 2019, 2:43 pm
ಅಲಿಘಡ: ಆ ಕೋಣೆಯ ಮಧ್ಯದಲ್ಲಿ ಗುಲಾಬಿ ಬಣ್ಣದ ಒಂದು ಪುಟ್ಟ ಪ್ಲಾಸ್ಟಿಕ್ ಸಿಲಿಂಡರ್, ಗ್ಯಾಸ್ ಸ್ಟವ್ ಇದೆ. ಅದರ ಮೇಲೆ ಪುಟ್ಟ ಪಾತ್ರೆಗಳನ್ನಿಡಲಾಗಿದೆ. ಕೋಣೆಯ ಮೂಲೆ ಮೂಲೆಯಲ್ಲಿ ಆಕೆಯ ಚಪ್ಪಲಿಗಳು ಹರಡಿಕೊಂಡಿವೆ. ಇದು ದೇಶವನ್ನೇ ಬೆಚ್ಚಿ ಬೀಳಿಸಿದ ಪುಟ್ಟ ಟ್ವಿಂಕಲ್ ಮನೆಯ ಕೊಠಡಿಯೊಂದರ ದೃಶ್ಯ . ಆದರೆ ಅಡುಗೆ ಆಟ ಆಡಲು ಆ ಪುಟ್ಟ ಮಗು ಅಲ್ಲಿಲ್ಲ. ಪುಟ್ಟ ಕಾಲುಗಳನ್ನು ಆ ಚಪ್ಪಲಿಗಳನ್ನು ತೊಟ್ಟು ನಡೆದಾಡಲು ಅವಳಿಲ್ಲ.
Vijaya Karnataka Web twinkle 1


ಅಂದು ಮೇ 30. ಸಾವೇ ಎಂದರೇನು ಎಂದು ಅರಿಯದ ಪುಟಾಣಿ ಟ್ವಿಂಕಲ್‌ಗೆ ತನ್ನ ಸಾವಿನ ಊಹೆ ಎಲ್ಲಿಂದ ಬರಲು ಸಾಧ್ಯ. ಮನೆಯಿಂದ ನಾಪತ್ತೆಯಾಗುವ ಕೆಲವು ಕ್ಷಣಗಳ ಮೊದಲು ಅವಳು ಅಡುಗೆ ಆಟವನ್ನಾಡುತ್ತ ಕುಳಿತಿದ್ದಳು. ಆ ಆಟದ ಸಾಮಾನುಗಳು ಈಗಲೂ ಅದೇ ಸ್ಥಿತಿಯಲ್ಲಿವೆ. ಅದನ್ನು ನೋಡುತ್ತ ಮನೆಯವರೆಲ್ಲ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಕಳೆದ 7 ದಿನಗಳ ಹಿಂದೆ ಪ್ಲೇ ಸ್ಕೂಲ್‌ಗೆ ದಾಖಲಾತಿ ಮಾಡಲಾಗಿತ್ತು. ಬೆಳಗ್ಗೆದ್ದು ಶಾಲೆಗೆ ಹೋಗಲು ತಯಾರಾಗುವುದೆಂದರೆ ನನ್ನ ಮಗಳಿಗೆ ಬಹಳ ಖುಷಿ. ಅತಿ ಬುದ್ಧಿವಂತಳಾಗಿದ್ದ ಅವಳು ಪೊಲೀಸ್ ಅಧಿಕಾರಿಯಾಗಬೇಕೆಂಬುದು ನಮ್ಮ ಕನಸಾಗಿತ್ತು, ಮತ್ತೀಗ ಅವಳೇ ಇಲ್ಲ ಎಂದು ತಾಯಿ ಅಳುವಾಗ ಮನೆಯಲ್ಲಿ ನೆರೆದವರೆಲ್ಲ ಕಣ್ಣೀರಾಗುತ್ತಿದ್ದಾರೆ.

ಮದುವೆಯಾದ ಐದು ವರ್ಷದ ಬಳಿಕ ಮಗಳು ಹುಟ್ಟಿದ್ದಳು. ಆಕೆಯೊಂದಿಗೆ ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ನಮ್ಮ ಬದುಕಿನ ತುಂಬೀಗ ಕತ್ತಲೇ ಆವರಿಸಿದೆ ಎಂದು ತಂದೆ ಕಣ್ಣೀರಾಗುತ್ತಾರೆ.

ಮೇ 30ರಂದು ನಾಪತ್ತೆಯಾಗಿದ್ದ ಬಾಲಕಿ ಜೂನ್ 2 ರಂದು ಶವವಾಗಿ ಪತ್ತೆಯಾಗಿದ್ದಳು. ಕಸದ ರಾಶಿಯಲ್ಲಿ ಪುಟ್ಟ ಮಗುವಿನ ದೇಹದ ಅವಶೇಷವನ್ನು ನಾಯಿ ಎಳೆದಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಬೆಚ್ಚಿ ಬಿದ್ದು ಊರಿನವರಿಗೆ ವಿಷಯ ಮುಟ್ಟಿಸಿದ್ದ. ಆ ದೇಹದಲ್ಲಿ ಏನೂ ಇರಲಿಲ್ಲ . ಕಾಣೆಯಾದ ದಿನ ಆಕೆ ಧರಿಸಿದ್ದ ಬಟ್ಟೆ ನೆನಪಿಟ್ಟುಕೊಂಡಿದ್ದ ತಾಯಿ ತನ್ನದೇ ಮಗುವಿನ ದೇಹವೆಂದು ಗುರುತಿಸಿದ್ದಳು.

ಮಗುವಿನ ಅಜ್ಜ ಅವಳ ಸಾವಿಗೆ ತಾನೇ ಕಾರಣನಾದೆ ಎಂದು ಗೋಳಾಡುತ್ತಿದ್ದಾರೆ. ನಾನು ಹಣವನ್ನೇ ಕೊಡದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ನಾನು ಹಣ ಮರಳಿ ಕೇಳಿದ್ದಕ್ಕೆ ಅವನಷ್ಟು ಕೋಪಗೊಳ್ಳುತ್ತಾನೆ, ಎಂಬ ಅರಿವಾಗಿದ್ದರೆ ಹಣವನ್ನೇ ಮರಳಿ ಕೇಳುತ್ತಿರಲಿಲ್ಲ, ಎಂದಾತ ತಲೆ ಬಡಿದುಕೊಳ್ಳುತ್ತಾನೆ. ನನ್ನ ಮಗ ಸೊಸೆ 9 ತಿಂಗಳ ಹಿಂದಷ್ಟೇ ನಮ್ಮ ಜತೆಗೆ ಬಂದು ವಾಸವಾಗಿದ್ದರು. ಉದೈಪುರದಲ್ಲಿ ವಾಸವಾಗಿದ್ದ ಅವರನ್ನು ವೃದ್ಧಾಪ್ಯದಲ್ಲಿ ಜೊತೆಗಿರಲೆಂದು ನಾನೇ ಕರೆಸಿಕೊಂಡಿದ್ದೆ ಎಂದಾತ ಬಿಕ್ಕುತ್ತಾನೆ.

ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ. ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ