ಆ್ಯಪ್ನಗರ

ಎಎನ್‌-32 ವಿಮಾನದಲ್ಲಿದ್ದ ಎಲ್ಲ 13 ಸಿಬ್ಬಂದಿ ಸಾವು

ವಾಯುಪಡೆಯು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಬಲ್ಲ ನುರಿತ 8 ಯೋಧರನ್ನು ಹೆಲಿಕಾಪ್ಟರ್‌ ಮೂಲಕ ಲಿಪೊ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಇಳಿಸಿತ್ತು.

Agencies 14 Jun 2019, 5:00 am
ಹೊಸದಿಲ್ಲಿ: ವಾಯುಪಡೆ ರಕ್ಷಣಾ ತಂಡವು ಅರುಣಾಚಲ ಪ್ರದೇಶದ ಲಿಪೊ ಪರ್ವತ ಪ್ರದೇಶದಲ್ಲಿ ಎನ್‌-32 ವಿಮಾನ ಪತನಗೊಂಡಿದ್ದ ಸ್ಥಳ ತಲುಪಿದ್ದು, ಅದರಲ್ಲಿದ್ದ ಎಲ್ಲ 13 ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಮೃತದೇಹಗಳನ್ನು ಹೆಲಿಕಾಪ್ಟರ್‌ ಮೂಲಕ ಕರೆತರಲಾಗುವುದು ಎಂದು ವಾಯುಪಡೆ ತಿಳಿಸಿದೆ. ಇದರೊಂದಿಗೆ ತಮ್ಮವರು ಬದುಕುಳಿದಿರುವ ಆಶಾಭಾವ ಹೊಂದಿದ್ದ ಕುಟುಂಬ ವರ್ಗದಲ್ಲೀಗ ದುಃಖ ಮಡುಗಟ್ಟಿದೆ.
Vijaya Karnataka Web all 13 people on board dead in an 32 crash iaf
ಎಎನ್‌-32 ವಿಮಾನದಲ್ಲಿದ್ದ ಎಲ್ಲ 13 ಸಿಬ್ಬಂದಿ ಸಾವು


ವಾಯುಪಡೆಯು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಬಲ್ಲ ನುರಿತ 8 ಯೋಧರನ್ನು ಹೆಲಿಕಾಪ್ಟರ್‌ ಮೂಲಕ ಲಿಪೊ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಇಳಿಸಿತ್ತು. ಭಾರಿ ಮಳೆ ಪರಿಣಾಮ ಯೋಧರು ವಿಮಾನ ಪತನದ ಸ್ಥಳ ತಲುಪಲು ಎರಡು ದಿನವಾದರೂ ಸಾಧ್ಯವಾಗಿರಲಿಲ್ಲ. ಗುರುವಾರ ಬೆಳಗ್ಗೆ ಪತನದ ಸ್ಥಳ ತಲುಪಿ ಮೃತದೇಹಗಳನ್ನು ಗುರುತಿಸಿದರು. ತಂಡವು ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಹಾಗೂ ವಾಯ್ಸ್‌ ರೆಕಾರ್ಡರ್‌ನೊಂದಿಗೆ ವಾಪಸ್‌ ಮರಳಿದೆ ಎಂದು ವಾಯುಪಡೆ ಹೇಳಿದೆ.

ನತದೃಷ್ಟರು: ಪತನಗೊಂಡ ವಿಮಾನದಲ್ಲಿ 6 ಅಧಿಕಾರಿಗಳು (ವಿಂಗ್‌ ಕಮಾಂಡರ್‌ ಜಿ.ಎಂ ಚಾರ್ಲ್ಸ್, ಸ್ಕ್ವಾಡ್ರನ್‌ ಲೀಡರ್‌ ಎಚ್‌. ವಿನೋದ್‌, ಫ್ಲೈಟ್‌ ಲೆಫ್ಟಿನೆಂಟ್‌ಗಳಾದ ಮೊಹಿತ್‌ ಗಾರ್ಗ್‌, ಸುಮಿತ್‌ ಮೊಹಾಂತಿ, ಆಶಿಶ್‌ ತನ್ವರ್‌ ಮತ್ತು ರಾಜೇಶ್‌ ಥಾಪಾ) ಹಾಗೂ 7 ಮಂದಿ ಸಿಬ್ಬಂದಿಗಳಾದ ಅನೂಪ್‌, ಶರಿನ್‌, ಕೆ.ಕೆ ಮಿಶ್ರಾ, ಪಂಕಜ್‌ ಸಂಗ್ವಾನ್‌, ಎಸ್‌.ಕೆ ಸಿಂಗ್‌, ಪುತಲಿ ಮತ್ತು ರಾಜೇಶ್‌ ಕುಮಾರ್‌ ಇದ್ದರು. ಇವರಲ್ಲಿ ಒಬ್ಬರೂ ಬದುಕುಳಿಯಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ