ಪಟನಾ: ಸಕಲ ಸರಕಾರಿ ಗೌರವಗಳೊಂದಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರ ಅಂತ್ಯಕ್ರಿಯೆ ನಡೆಯುವ ವೇಳೆ ಪೊಲೀಸರು ಕುಶಾಲತೋಪು ಹಾರಿಸಿದಾಗ 22 ರೈಫಲ್ಗಳಿಂದಲೂ ಒಂದೇ ಒಂದು ಗುಂಡು ಹಾರಲಿಲ್ಲ. ಕಕ್ಕಾಬಿಕ್ಕಿಯಾದ ಪೊಲೀಸರು ಬಂದೂಕುಗಳ ಪರಿಶೀಲನೆ ನಡೆಸಿ ಹಲವು ಬಾರಿ ಟ್ರಿಗರ್ ಒತ್ತಿದರೂ ಗುಂಡು ಮಾತ್ರ ಹಾರಲಿಲ್ಲ. ಇದರಿಂದ ಅಲ್ಲಿದ್ದ ಗಣ್ಯರು, ''ಇದು ಮಾಜಿ ಮುಖ್ಯಮಂತ್ರಿಗೆ ಮಾಡಿದ ಅವಮಾನ,'' ಎಂದು ಅಸಮಾಧನ ವ್ಯಕ್ತಪಡಿಸಿದರು. ಬುಧವಾರ ಬಿಹಾರದ ಸೌಪರ್ ಜಿಲ್ಲೆಯ ಸ್ವಗ್ರಾಮದಲ್ಲಿ ಮಿಶ್ರಾ ಅವರ ಅಂತ್ಯಕ್ರಿಯೆ ನಡೆದಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಆರೋಗ್ಯ ಸಚಿವ ಮಂಗಲ್ ಪಾಂಡೆ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಿಶ್ರಾ ಅಂತ್ಯಕ್ರಿಯೆ ವೇಳೆ ಅಗೌರವ
ಕಕ್ಕಾಬಿಕ್ಕಿಯಾದ ಪೊಲೀಸರು ಬಂದೂಕುಗಳ ಪರಿಶೀಲನೆ ನಡೆಸಿ ಹಲವು ಬಾರಿ ಟ್ರಿಗರ್ ಒತ್ತಿದರೂ ಗುಂಡು ಮಾತ್ರ ಹಾರಲಿಲ್ಲ.
Agencies 23 Aug 2019, 5:00 am