ಆ್ಯಪ್ನಗರ

ಅಯೋಧ್ಯೆ ತೀರ್ಪು ಹೇಗೆಯೇ ಬರಲಿ ಸಂಯಮ ಇರಲಿ, ಮುಸ್ಲಿಂ ಸಮುದಾ­ಯಕ್ಕೆ ಎಐಎಂಪಿಎಲ್‌ಬಿ ಮನವಿ

ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್‌ ನೀಡಲಿ­ರುವ ತೀರ್ಪು ಯಾರ ಪರವಾಗಿ ಬಂದರೂ ಸಂವಿ­ಧಾನ ಹಾಗೂ ನ್ಯಾಯಾಂಗದಲ್ಲಿ ಗೌರವ ಇರಿಸಿ ಅದನ್ನು ಒಪ್ಪಿಕೊಂಡು ಕೋಮು ಸಾಮರಸ್ಯ ಎಐಎಂ­ಪಿಎಲ್‌ಬಿ ಮುಸ್ಲಿಂ ಸಮುದಾ­ಯಕ್ಕೆ ಮನವಿ ಮಾಡಿದೆ.

Vijaya Karnataka Web 2 Nov 2019, 6:33 am
ಲಖನೌ: ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ಯಾರ ಪರವಾಗಿ ಬಂದರೂ ಸಂವಿಧಾನ ಹಾಗೂ ನ್ಯಾಯಾಂಗದಲ್ಲಿ ಗೌರವ ಇರಿಸಿ ಅದನ್ನು ಒಪ್ಪಿಕೊಂಡು ಕೋಮು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.
Vijaya Karnataka Web ayodhya


ಅಯೋಧ್ಯೆ ಭೂ ವಿವಾದ ತೀರ್ಪು ಕುರಿತು ಮಹತ್ವದ ಹೇಳಿಕೆ ನೀಡಿದ ಆರ್‌ಎಸ್‌ಎಸ್‌

ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ 40 ದಿನಗಳ ಕಾಲ ವಿಚಾ­ರಣೆ ನಡೆಸಿದ್ದು, ನವೆಂಬರ್‌ 17ರೊಳಗೆ ಯಾವುದೇ ದಿನದಂದು ತೀರ್ಪು ಪ್ರಕಟ­ಗೊಳ್ಳುವ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದಷ್ಟೇ ಆರೆಸ್ಸೆಸ್‌ ಕೂಡ ತೀರ್ಪು ಹೇಗೆಯೇ ಬರಲಿ ಅದನ್ನು ಮುಕ್ತ ಮನಸ್ಸಿ­ನಿಂದ ಸ್ವೀಕರಿಸಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳು­ವುದು ಅಗತ್ಯ ಎಂದು ಹೇಳಿತ್ತು.

ಅಯೋಧ್ಯೆ ವಿವಾದ ವಿಶ್ವದಲ್ಲೇ ಮಹತ್ವದ ಪ್ರಕರಣ: ನ್ಯಾಯಮೂರ್ತಿ ಬೊಬ್ಡೆ

ಈಗ ಎಐಎಂಪಿಎಲ್‌ಬಿ ಹಿರಿಯ ಸದಸ್ಯ ಮೌಲಾನ ಖಲೀದ್‌ ರಶೀದ್‌ ಫಿರಾಂಗಿ ಮಹಾಲಿ ಅವರು, ''ಸ್ವತಂತ್ರ ಭಾರತದ­ಲ್ಲಿಯೇ ಅಯೋಧ್ಯೆ ಭೂ ವಿವಾದ ಪ್ರಕರಣ ಅತಿ ಮಹ­ತ್ವದ ಕೇಸ್‌ ಆಗಿದೆ. ಈ ನಿಟ್ಟಿನಲ್ಲಿ ಮೌಲ್ವಿಗಳು ಮುಸ್ಲಿಮರಲ್ಲಿ ಅರಿವು ಮೂಡಿಸಿ ಸಾಮಾ­ಜಿಕ ಸಾಮರಸ್ಯಕ್ಕೆ ನೆರವಾಗಬೇಕು,'' ಎಂದು ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ